ಸುಳ್ಯ:ನಿವೃತ್ತ ಪ್ರಿನ್ಸಿಪಾಲ್ ಹಾಗೂ ಸಾಹಿತಿ ಯು.ಸುಬ್ರಾಯ ಗೌಡರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಸುಳ್ಯ ವೆಂಕಟರಮಣ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು.
ಸಾಹಿತಿ ಹಾಗೂ ನಿವೃತ್ತ ಪ್ರಿನ್ಸಿಪಾಲ್ ಡಾ.ಪ್ರಭಾಕರ ಶಿಶಿಲ ನುಡಿನಮನ ಸಲ್ಲಿಸಿ ಮಾತನಾಡಿ, ಯು.ಸು.ಗೌಡರು ಸರ್ವಾಂಗೀಣ ವಿಕಸನ ಹೊಂದಿ, ಅವರಂತೆಯೇ ವಿದ್ಯಾರ್ಥಿಗಳನ್ನು ರೂಪಿಸಿದ್ದ ಪ್ರಾಧ್ಯಾಪಕ. ಇವರ ನಿಧನ ಸುಳ್ಯಕ್ಕೆ ನಷ್ಟವಾದರೂ ಅವರು ಬಿಟ್ಟುಹೋದ ಕಾರ್ಯವನ್ನು ಮುಂದುವರಿಸುವ ಕೆಲಸ ಆಗಬೇಕು ಎಂದರು.
ನಿವೃತ್ತ ಶಿಕ್ಷಕ ಬಾಬುಗೌಡ ಅಚ್ರಪ್ಪಾಡಿ, ಶಿಕ್ಷಕ ವೆಂಕಟ್ರಾಮ್ ಭಟ್, ರಾಜ್ಯ ಅರೆಭಾಷೆ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ತಾಲೂಕು ಗೌಡ ಯುವಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ನುಡಿನಮನ ಸಲ್ಲಿಸಿದರು. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಅಧ್ಯಕ್ಷತೆಯನ್ನು ವಹಿಸಿದರು.
ಕುಕ್ಕೆಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಶಿಕ್ಷಕ ದೊಡ್ಡಣ್ಣ ಬರೆಮೇಲು, ನಾನಾ ಸಂಘಟನೆಗಳ ಮುಖಂಡರಾದ ಹರ್ಷಕರುಣಾಕರ, ಲೀಲಾ ದಾಮೋದರ್, ಹೇಮಲತಾ ದೇಂಗೋಡಿ, ಲತಾ ಕುದ್ಪಾಜೆ, ಮೀನಾಕ್ಷಿ ರಾಮಕಜೆ, ಜಯರಾಮ ದೇರಪ್ಪಜ್ಜನ ಮನೆ, ಕುಯಿಂತೋಡು ನಾರಾಯಣ ಗೌಡ, ಪಿ.ಎಸ್.ಗಂಗಾಧರ, ಭಗೀರಥ ಕೋಲ್ಚಾರ್, ರೋಹಿತ್ ಕೊಯಿಂಗೋಡಿ, ಬೆಳ್ಯಪ್ಪ ಗೌಡ ಬಳ್ಳಡ್ಕ, ಬಾಣೂರು ವಿಠಲಗೌಡ, ರಾಮಕಜೆ ಸುಂದರ ಗೌಡ, ರಾಕೇಶ್ ಕುಂಟಿಕಾನ, ಸುರೇಶ್ ಅಮೈ, ಸಂತೋಷ್ ಮಡ್ತಿಲ, ದಿನೇಶ್ ಮಡ್ತಿಲ, ರಾಧಾಕೃಷ್ಣ ಕುಂತಿನಡ್ಕ, ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ.ಸಿ.ನಾರಾಯಣ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಇದ್ದರು. ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಗೌಡರ ಯುವಸೇವಾ ಸಂಘ ಮತ್ತು ಸುಳ್ಯ ವೆಂಕಟರಮಣ ಸೊಸೈಟಿ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…