ಸುಳ್ಯ: ಜೀವನದಿ ಪಯಸ್ವಿನಿ ಮಳೆಗಾಲ ತುಂಬಿ ಹರಿಯುತ್ತದೆ. ಬೇಸಗೆಯಾದಂತೆ ಈಚೆಗೆ ಬತ್ತಲು ಶುರುವಾಗಿದೆ. ಹಿಂದೆಲ್ಲಾ ಹೀಗೆ ಇರಲಿಲ್ಲ. ಸುಳ್ಯದ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿತ್ತು, ಕೃಷಿಗೂ ಸಾಕಷ್ಟು ನೀರು ಪಯಸ್ವಿನಿ ನೀಡುತ್ತಿತ್ತು. ಹೀಗಾಗಿ ಈಗ ಪಯಸ್ವಿನಿ ಉಳಿಸಿ ಆಂದೋಲನ ಶುರುವಾಗಿದೆ. ಈ ಆಂದೋಲನದಲ್ಲಿ ಈಗ ಮಕ್ಕಳೂ ತೊಡಗಿಕೊಂಡಿದ್ದಾರೆ. ಸುಳ್ಯದ ಸ್ನೇಹ ಶಾಲೆ ವಿದ್ಯಾರ್ಥಿಗಳು ನದಿಯ ತಟದಲ್ಲಿ ಕುಳಿತು ಹಾಗೂ ಆಲೆಟ್ಟಿ ಸೇತುವೆಯ ಮೇಲೆ ನಿಂತು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿದರು. ಈ ಮೂಲಕ ನದಿಯ ಈಗಿನ ಸ್ಥಿತಿಯ ದಾಖಲೀಕರಣ ಮಾಡಿದರು.
ಸುಳ್ಯದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಯುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯ ಪಾತಳಿಯಲ್ಲಿ ವಿಸ್ತಾರವಾದ ದಿಬ್ಬಗಳು ಗೋಚರಿಸತೊಡಗಿವೆ. ನದಿ ನೀರು ಬತ್ತದಂತೆ ಮಾಡಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಏನಾದರೊಂದು ಸುಧಾರಣೆ ಮಾಡಬೇಕಾಗಿದೆ. ಅದಕ್ಕಾಗಿ ಚಿತ್ರಗಳ ಮೂಲಕ ಎಚ್ಚರ ಮೂಡಿಸುವ ಪ್ರಯತ್ನವಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನದಿಯ ತಟದಲ್ಲಿ ಕುಳಿತು ಹಾಗೂ ಆಲೆಟ್ಟಿ ಸೇತುವೆಯ ಮೇಲೆ ನಿಂತು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿದರು. ಪರಿಸರ, ಜಲಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ, ಜಾಗೃತಿ ಮೂಡಿಸುತ್ತಿರುವ ಸುಳ್ಯದ ಕನ್ನಡ ಮಾಧ್ಯಮ ಶಾಲೆ ಈಗ ಇನ್ನೊಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಲಸಂರಕ್ಷಣೆಯ ಕಡೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿದೆ.
ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರ ಮಾರ್ಗದರ್ಶನದಲ್ಲಿ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ಅಧ್ಯಾಪಕರಾದ ಸವಿತಾ , ದೇವಿಪ್ರಸಾದ್ ಸರ್ ಹಾಗೂ ದಿವ್ಯಶ್ರೀ ಸಹಕರಿಸಿದರು.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…