ಸುಳ್ಯ: ರೈಡ್ ಫಾರ್ ರೋಟರಿಯ 14 ದೇಶಗಳ 38 ವಿದೇಶಿ ರೋಟೇರಿಯನ್ನರ ತಂಡವು ಸುಳ್ಯ ರೋಟರಿ ಕ್ಲಬ್ ಗೆ ಭೇಟಿ ನೀಡಿ ವಿಚಾರ ವಿನಿಮಯ ನಡೆಸಿತು. ಸೇವೆಗಾಗಿ ನಿಧಿ ಸಂಗ್ರಹ ಈ ತಂಡದ ಭೇಟಿಯ ಪ್ರಮುಖ ಉದ್ದೇಶ. ಈ ತಂಡವು ಮಂಗಳೂರಿನಿಂದ ಹೊರಟು ಮಡಿಕೇರಿ, ಮೈಸೂರು, ಊಟಿ, ವಯನಾಡು, ಕೊಯಂಬುತ್ತೂರು, ಮೂನಾರ್, ಕೊಚ್ಚಿನ್ ನಲ್ಲಿ 29 ರಂದು ಸಮಾಪನಗೊಳ್ಳಲಿದೆ.
ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ರೊ .ಡಾ. ಪುರುಷೋತ್ತಮ ಕೆ.ಜಿ. ವಿದೇಶಿ ತಂಡದವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸುಳ್ಯದ ಧ್ವಜವನ್ನು ಯು ಎಸ್ ಎ, ಯು ಕೆ, ಸ್ವೀಡನ್, ಜರ್ಮನಿ, ಇಂಗ್ಲೆಂಡ್, ಪೋಲೆಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಕೆನಡಾ, ನೆದೆರ್ಲ್ಯಾಂಡ್, ಡೆನ್ಮಾರ್ಕ್, ಮತ್ತು ಫ್ರಾನ್ಸ್ ಮುಂತಾದ 14 ದೇಶಗಳ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ತದನಂತರ ವಿದೇಶಿ ರೋಟೇರಿಯನ್ನರ ತಂಡದ ಪರವಾಗಿ ಮಾರ್ಕೊಸ್ ಮತ್ತು ರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ರೊ.ಜೋಸೆಫ್ ಮ್ಯಾಥ್ಯು, ವಲಯ 5 ರ ಅಸಿಸ್ಟಂಟ್ ಗವರ್ನರ್ ಡಾ. ಕೇಶವ ಪಿ. ಕೆ., ರೋಟರಿ ಸಿಟಿಯ ಅಧ್ಯಕ್ಷ ಭಾನುಪ್ರಕಾಶ್, ಸಂಚಾಲಕ ಎನ್.ಎ. ಜಿತೇಂದ್ರ, ಕಾರ್ಯದರ್ಶಿ ಸನತ್, ಖಜಾಂಜಿ ಸತೀಶ್ ಕೆ.ಜಿ, ಗಣೇಶ್ ಆಳ್ವ, ಪ್ರಭಾಕರ ನಾಯರ್ , ಅವಿನಾಶ್ ಡಿ. ಕೆ ಹಾಗೂ ಶ್ರೀನಿವಾಸ್ ಕೆ ಉಪಸ್ಥಿತರಿದ್ದರು. ಬಳಿಕ ಮಡಿಕೇರಿ ಕಡೆಗೆ ವಿದೇಶಿ ರೋಟೆರಿಯನ್ನರ ತಂಡ ಪ್ರಯಾಣ ಬೆಳೆಸಿತು.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…