ಸುಳ್ಯ: ರೈಡ್ ಫಾರ್ ರೋಟರಿಯ 14 ದೇಶಗಳ 38 ವಿದೇಶಿ ರೋಟೇರಿಯನ್ನರ ತಂಡವು ಸುಳ್ಯ ರೋಟರಿ ಕ್ಲಬ್ ಗೆ ಭೇಟಿ ನೀಡಿ ವಿಚಾರ ವಿನಿಮಯ ನಡೆಸಿತು. ಸೇವೆಗಾಗಿ ನಿಧಿ ಸಂಗ್ರಹ ಈ ತಂಡದ ಭೇಟಿಯ ಪ್ರಮುಖ ಉದ್ದೇಶ. ಈ ತಂಡವು ಮಂಗಳೂರಿನಿಂದ ಹೊರಟು ಮಡಿಕೇರಿ, ಮೈಸೂರು, ಊಟಿ, ವಯನಾಡು, ಕೊಯಂಬುತ್ತೂರು, ಮೂನಾರ್, ಕೊಚ್ಚಿನ್ ನಲ್ಲಿ 29 ರಂದು ಸಮಾಪನಗೊಳ್ಳಲಿದೆ.
ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ರೊ .ಡಾ. ಪುರುಷೋತ್ತಮ ಕೆ.ಜಿ. ವಿದೇಶಿ ತಂಡದವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸುಳ್ಯದ ಧ್ವಜವನ್ನು ಯು ಎಸ್ ಎ, ಯು ಕೆ, ಸ್ವೀಡನ್, ಜರ್ಮನಿ, ಇಂಗ್ಲೆಂಡ್, ಪೋಲೆಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಕೆನಡಾ, ನೆದೆರ್ಲ್ಯಾಂಡ್, ಡೆನ್ಮಾರ್ಕ್, ಮತ್ತು ಫ್ರಾನ್ಸ್ ಮುಂತಾದ 14 ದೇಶಗಳ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ತದನಂತರ ವಿದೇಶಿ ರೋಟೇರಿಯನ್ನರ ತಂಡದ ಪರವಾಗಿ ಮಾರ್ಕೊಸ್ ಮತ್ತು ರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ರೊ.ಜೋಸೆಫ್ ಮ್ಯಾಥ್ಯು, ವಲಯ 5 ರ ಅಸಿಸ್ಟಂಟ್ ಗವರ್ನರ್ ಡಾ. ಕೇಶವ ಪಿ. ಕೆ., ರೋಟರಿ ಸಿಟಿಯ ಅಧ್ಯಕ್ಷ ಭಾನುಪ್ರಕಾಶ್, ಸಂಚಾಲಕ ಎನ್.ಎ. ಜಿತೇಂದ್ರ, ಕಾರ್ಯದರ್ಶಿ ಸನತ್, ಖಜಾಂಜಿ ಸತೀಶ್ ಕೆ.ಜಿ, ಗಣೇಶ್ ಆಳ್ವ, ಪ್ರಭಾಕರ ನಾಯರ್ , ಅವಿನಾಶ್ ಡಿ. ಕೆ ಹಾಗೂ ಶ್ರೀನಿವಾಸ್ ಕೆ ಉಪಸ್ಥಿತರಿದ್ದರು. ಬಳಿಕ ಮಡಿಕೇರಿ ಕಡೆಗೆ ವಿದೇಶಿ ರೋಟೆರಿಯನ್ನರ ತಂಡ ಪ್ರಯಾಣ ಬೆಳೆಸಿತು.
ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…
ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…
ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…
ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…
ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…
ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…