Advertisement

ಪಯಸ್ವಿನಿ ನದಿಯಲ್ಲಿ ಈಗ ಹರಿಯುತ್ತದೆ ಕೆಂಪು ನೀರು….!

Share

ಸುಳ್ಯ: ಮಳೆ ಬಂದು ಒಂದೆಡೆ ಮಣ್ಣು ಮಿಶ್ರಿತ ಕೆಂಪು ನೀರು ತುಂಬಿ ಹರಿಯುತ್ತಿದ್ದರೆ, ಇನ್ನೊಂದೆಡೆ ಬಿಸಿಲ ಬೇಗೆಗೆ ಸಿಲುಕಿ ಪಯಸ್ವಿನಿ ನದಿಯ ಒಡಲು ಬತ್ತಿ ಬರಡಾಗಿದೆ. ಮಳೆ-ಬಿಸಿಲಿನ ಪ್ರತಾಪಗಳ ಪರಿಣಾಮ ಪಯಸ್ವಿನಿ ನದಿಯ ಎರಡು ತುದಿ ಎರಡು ವಿಭಿನ್ನ ಸ್ವರೂಪವನ್ನು ಪಡೆದುಕೊಂಡ ಬಗೆ ಇದು.
ಕೊಡಗು ಜಿಲ್ಲೆಯ ಭಾಗಗಳಾದ ಜೋಡುಪಾಲ, ಮೊಣ್ಣಂಗೇರಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಅಲ್ಲಿಂದ ಕೆಸರು ಮಣ್ಣು ಮಿಶ್ರಿತ ಕೆಂಪು ನೀರು ಹರಿದು ಬರುತಿದೆ. ಸುಳ್ಯ ನಗರಕ್ಕೆ ಸಮೀಪವೇ ಇರುವ ಅರಂಬೂರು ಭಾಗದಲ್ಲಿ ಕೆಂಪು ನೀರು ಹರಿದು ಬಂದಿದೆ. ಕಳೆದ ವರ್ಷ ಜೋಡುಪಾಲ, ಎರಡನೇ ಮೊಣ್ಣಂಗೇರಿ ಭಾಗದಲ್ಲಿ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಪ್ರಳಯ ಜಲ ಮತ್ತು ಮಣ್ಣು ಮಿಶ್ರಿವಾದ ನೀರು ಸುಮಾರು ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯ ಕೆಂಪು ಬಣ್ಣ ಮಿಶ್ರಿತ ನೀರು ತುಂಬಿ ಹರಿದಿತ್ತು. ಇದೀಗ ಬೇಸಿಗೆ ಮಳೆ ಆರಂಭವಾದಗಲೂ ಅದರ ಮುಂದುವರಿದ ಭಾಗ ಎಂಬಂತೆ ಕೆಂಪು ಮಿಶ್ರಿತ ನೀರು ನದಿಯಲ್ಲಿ ಹರಿದು ಬರುತಿದೆ. ಸಂಪೂರ್ಣ ಹರಿವು ನಿಲ್ಲಿಸಿದ್ದ ಪಯಸ್ವಿನಿಗೆ ಮಳೆಯ ಪರಿಣಾಮದಿಂದ ಮತ್ತೆ ಜೀವ ಕಳೆ ಬಂದಿದೆ. ಕೊಯನಾಡು, ಸಂಪಾಜೆ, ಅರಂತೋಡು, ಅರಂಬೂರು ಭಾಗದಲ್ಲಿ ಸ್ವಲ್ಪ ಮಟ್ಟಿನ ನೀರಿನ ಹರಿವು ಹೆಚ್ಚಳಗೊಂಡಿದೆ ಎಂದು ಸ್ಥಳೀಯರು ಹೇಳುತ್ತಾರೆ.

ನೀರಿನ ಸಮಸ್ಯೆ ತೀವ್ರ:

ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಂಡೆಕೋಲು, ಜಾಲ್ಸೂರು ಭಾಗಗಳಲ್ಲಿ ಪಯಸ್ವಿನಿ ನದಿ ಮತ್ತು ಇತರ ಜಲ ಮೂಲಗಳು ಬತ್ತಿ ಹೋಗಿದೆ. ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ತೀವ್ರ ಕಡಿಮೆಯಾಗಿದ್ದು ಕುಡಿಯಲು, ಕೃಷಿಗೆ ನೀರಿಲ್ಲದೆ ಬವಣೆ ಪಡುವಂತಾಗಿದೆ. ಜಲಚರಗಳು ಕೂಡ ಸಾಯುವ ಪರಿಸ್ಥಿತಿ ಉಂಟಾಗಿದೆ. ಕೆಲವು ಹೊಂಡಗಳಲ್ಲಿ ಮಾತ್ರ ನೀರು ಇದ್ದು ಅಲ್ಲಿ ನೀರು ಬಿಸಿ ಆಗಿ ಜಲಚರಗಳು ವಿಲ ವಿಲನೆ ಒದ್ದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಮಂಡೆಕೋಲು ಮತ್ತಿತರ ಕಡೆಗಳಲ್ಲಿ ನೀರಿಲ್ಲದೆ ಕೃಷಿ ಸಂಪೂರ್ಣ ಒಣಗಿ ಹೋಗುತಿದೆ. ಅಡಿಕೆ, ತೆಂಗಿನ ತೋಟಗಳು ನೀರಿಲ್ಲದೆ ಕರಟಿ ಹೋಗುತಿದೆ. ಮಂಡೆಕೋಲು ಗ್ರಾಮದ ಬೊಳುಗಲ್ಲು ಮತ್ತಿತರ ಕಡೆಗಳಲ್ಲಿ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಕೆಲವು ಭಾಗಗಳಲ್ಲಿ ಅಂತರ್ಜಲ ಮಟ್ಟವೂ ಕುಸಿದಿದ್ದು ಕೊಳವೆ ಬಾವಿಗಳಲ್ಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಪ್ರತಿ ವರ್ಷ ಏಪ್ರಿಲ್ ಕೊನೆಯವರೆಗೂ ಸಮೃದ್ಧವಾಗಿರುತ್ತಿದ್ದ ತೋಡು, ಕೆರೆ, ಬಾವಿ, ಸುರಂಗಗಳು ಜನವರಿ-ಫೆಬ್ರವರಿ ತಿಂಗಳಲ್ಲಿಯೇ ಬತ್ತಿ ಬರಡಾಗಿದೆ. ಮಳೆ ಬಂದು ಮೇಲ್ಭಾಗದಲ್ಲಿ ಪಯಸ್ವಿನಿಯ ಹರಿವು ಸ್ವಲ್ಪ ಹೆಚ್ಚಾದರೂ ನೀರು ಕೆಳ ಭಾಗಕ್ಕೆ ಇನ್ನೂ ತಲುಪಿಲ್ಲ.

“ಮಂಡೆಕೋಲು ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಮೂಲಗಳು ಬತ್ತಿ ಹೋಗಿ ತೀವ್ರ ನೀರಿನ ಸಮಸ್ಯೆ ಉಂಟಾಗಿದೆ. ಜನವರಿ-ಫೆಬ್ರವರಿ ತಿಂಗಳಲ್ಲಿಯೇ ನೀರಿನ ಮೂಲಗಳು ಬತ್ತಿ ಹೋಗಿದೆ. ಇದರ ಪರಿಣಾಮವಾಗಿ ಕೃಷಿ ಸಂಪೂರ್ಣ ಕರಟಿ ಹೋಗಿದೆ. ಸರಿಯಾಗಿ ಮಳೆ ದೊರೆಯದೇ ಇದ್ದಲ್ಲಿ ನೀರಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ ” ಎಂದು ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ “ಸುಳ್ಯ ಸುದ್ದಿ.ಕಾಂ” ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Team the rural mirror

Published by
Team the rural mirror

Recent Posts

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

14 hours ago

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

23 hours ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

23 hours ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

2 days ago

ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ

ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…

2 days ago

ಕರ್ನಾಟಕದ 69.60 ಲಕ್ಷ ಹೆಕ್ಟೇರ್ ಭೂಮಿ ಹಾನಿ – ಕೃಷಿ ಉತ್ಪಾದಕತೆಗೆ ದೊಡ್ಡ ಸವಾಲು

ಕರ್ನಾಟಕದಲ್ಲಿ 69.60 ಲಕ್ಷ ಹೆಕ್ಟೇರ್ ಭೂಮಿ ಭೂಸವಕಳಿ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ…

2 days ago