Advertisement

ಭೂಕುಸಿತದ ಇಫೆಕ್ಟ್ ಇದು : ಮಳೆ ಬಂದಾಗ ಪಯಸ್ವಿನಿಯಲ್ಲಿ ಕೆಸರು ನೀರಿನ ಆತಂಕ

Share

ಸುಳ್ಯ: ಸಣ್ಣ ಮಳೆ ಬಂದಾಗ ಪಯಸ್ವಿನಿ ನದಿಯಲ್ಲಿ ಕೆಸರು ನೀರು ಹರಿಯುತ್ತಿದೆ. ಇದು ಈಗ ನದಿ ಪಾತ್ರದ ಜನರಿಗೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ಮಳೆಗಾಲದ ಅವಧಿಯಲ್ಲಿ ಸಂಪಾಜೆ , ಮಡಿಕೇರಿ ಭಾಗದಲ್ಲಿ ಭೂಕುಸಿತದ ಪರಿಣಾಮವಾಗಿ ಸಂಪಾಜೆ, ಊರುಬೈಲು, ಚೆಂಬು, ಸಂಪಾಜೆ ಗ್ರಾಮಗಳಲ್ಲಿ ಪಯಸ್ವಿನಿ ನದಿಯ ಸ್ವರೂಪದಲ್ಲೇ ಬದಲಾವಣೆ ಉಂಟಾಗಿದೆ. ಇದೀಗ ಬೇಸಿಗೆಯಲ್ಲಿ ಸುರಿದ ಮಳೆಯಲ್ಲಿಯೇ ನೀರಿನ ಜೊತೆಯಲ್ಲಿ ಕೆಸರು, ಮರಳು, ಮಣ್ಣು ಹರಿದು ಬರುತಿದೆ. ಇದರಿಂದ ನೀರು ಕೃಷಿಗೆ ನೀರು ಹಾಯಿಸಲು ನದಿಯಲ್ಲಿ ಅಲ್ಲಲ್ಲಿ ಕೃಷಿಕರು ತೋಡಿದ ಹೊಂಡಗಳು ಮುಚ್ಚಿ ಹೋಗುತಿದೆ. ಈ ಹೊಂಡಗಳಲ್ಲಿ ಪಂಪ್ ಇರಿಸಿ ನೀರು ಪಂಪ್ ಮಾಡಿ ಕೃಷಿಗೆ ನೀರು ಹಾಯಿಸುತ್ತಿದ್ದರು. ಆದರೆ ಕೆಸರು ಮಣ್ಣು ಬರುವ ಕಾರಣ ಈ ಹೊಂಡಗಳು ದಿನಂಪ್ರತಿ ಮುಚ್ಚಿ ಹೋಗಿ ಪಂಪ್‍ಗಳು ಕೆಸರಲ್ಲಿ ಮುಳುಗುತ್ತಿದೆ. ಪ್ರತಿ ದಿನ ಹೊಂಡ ತೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಹರಿವು ಹೆಚ್ಚಾದರೂ ಕೆಸರು ನೀರು ಬರುವುದು ಸಮಸ್ಯೆ ಸೃಷ್ಠಿಸುತಿದೆ ಎನ್ನುತ್ತಾರೆ ಕೃಷಿಕರು. ಇನ್ನು ನದಿಯಲ್ಲಿ ಒಂದು ಬದಿಯಲ್ಲಿ ಹರಿಯುತ್ತಿದ್ದ ನೀರು ಮರಳು, ಮಣ್ಣು ತುಂಬಿ ದಿನ ಕಳೆದಂತೆ ಹರಿವಿನ ದಿಕ್ಕನ್ನು ಮತ್ತೊಂದೆಡೆ ಬದಲಿಸಿ ನದಿಯ ಸ್ವರೂಪವೇ ಬದಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಎರಡನೇ ಮೊಣ್ಣಂಗೇರಿ, ಜೋಡುಪಾಲದಲ್ಲಿ ಉಂಟಾದ ಪ್ರಳಯ ಮತ್ತು ಭೂಕುಸಿತದಿಂದ ಹರಿದು ಬಂದ ಟನ್ ಗಟ್ಟಲೆ ಕೆಸರು, ಮರಳು, ಮಣ್ಣು ನದಿಯಲ್ಲಿದ್ದ ಬೃಹತ್ ಗಾತ್ರದ ಹೊಂಡಗಳನ್ನು ತುಂಬಿಸಿ ನದಿಯ ಒಡಲನ್ನು ಸಮಾನಾಂತರವಾಗಿಸಿತು. ಇದರಿಂದ ನದಿಯ ಒಡಲಿನ ನೀರಿನ ಶೇಖರಣೆಯೇ ಕಡಿಮೆಯಾಗಿ ಬಸಿಗೆಯಲ್ಲಿ ನೀರಿನ ಕೊರತೆ ಎದುರಾಗಿತ್ತು. ಈ ವರ್ಷವೂ ನದಿಯ ನೀರಿನ ಜೊತೆಗೆ ಮೇಲ್ಭಾಗದಿಂದ ಹರಿದು ಬರುವ ಮಣ್ಣು, ಮರಳು ನದೀಪಾತ್ರವನ್ನು ತುಂಬುವ ಆತಂಕ ಎದುರಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
Team the rural mirror

Published by
Team the rural mirror

Recent Posts

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ

ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್‌ ಬಳಸಿ ವಿಜ್ಞಾನಿಗಳು ವಸಡು…

9 hours ago

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ

ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…

12 hours ago

ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ

ರಂಬುಟಾನ್‌ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್‌ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…

13 hours ago

ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ

ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

20 hours ago

ಕಾಪುವಿನಲ್ಲಿ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ಗೆ ಚಾಲನೆ – 400ಕ್ಕೂ ಅಧಿಕ ಪ್ರತಿಭೆಗಳು ಭಾಗಿ, 24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ

ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

22 hours ago

34 ಟನ್ ಅಡಿಕೆ ವಂಚನೆ – ಅಸ್ಸಾಂ ವ್ಯಾಪಾರಿಗಳಿಗೆ ಹರಿಯಾಣದಲ್ಲಿ ವಂಚನೆ..!

ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…

23 hours ago