ಅನುಕ್ರಮ

ಪೂರ್ಣ ಚಂದಿರ ಗಗನದಲಿ….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಕೈಗೆಟುಕದ ಗಗನದಲಿ
ಬೆಳ್ಳಿಯ ಬಟ್ಟಲೊಂದು ಹೊಳೆಯುತ್ತಿದೆ
ಸುತ್ತಲೂ ಪುಟಾಣಿ ಮುತ್ತುಗಳು
ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ
ಮನದಿ ನೂರಾರು ಬಯಕೆಗಳು
ಸುಂದರ ಕನವರಿಕೆಗಳು
ಪುಟಾಣಿ ಮುತ್ತುಗಳ ಅಂಗೈಯೊಳಗೆ ಹಿಡಿದು
ಬೆಳ್ಳಿಯ ಬಟ್ಟಲೊಳಗೆ ತುಂಬಿಕೊಳ್ಳಬೇಕು
ಇಲ್ಲ! ಅದು ಬೆಳ್ಳಿಯ ಬಟ್ಟಲಲ್ಲ
ಆಗಸದರಮನೆಯ ರಾಜ
ಬೆಳದಿಂಗಳ ಸೂಸುವ ಶ್ವೇತದೊಡೆಯ
ಅವನು ಪೂರ್ಣ ಚಂದಿರ
ಅವನ ಸುತ್ತಲೂ ಮುತ್ತುಗಳಿಲ್ಲ
ಚಂದಿರನ ಚಂದಕ್ಕೆ
ಮನಸೋತ ಚುಕ್ಕಿ ತಾರೆಗಳು
ಈ ನೋಟವೇ ವಿಹಂಗಮ
ಸುಂದರ ಶಶಿಯ, ಸೌಂದರ್ಯದ ಮೆರುಗಿಗೆ
ಸೋತಿದೆ ನನ್ನ ಮನ
ತಿಳಿಯಾದ ಮುಗಿಲು,ಹೊಳೆವ ಚಂದಿರ
ತಂಪನೆಯ ಗಾಳಿ,ನಾನು ಕಳೆದುಹೋಗಿದ್ದೇನೆ
ಕಾಲಕಳೆದು , ಅವನು ಮರೆಯಾದಾಗ‌
ಮನದಿ ಅತೀವ ಸಂಕಟ
ಮತ್ತೆ ಕಾಯುತ್ತಿರುತ್ತೇನೆ , ಸೌಂದರ್ಯದ ಗಣಿಗಾಗಿ…
ಪೂರ್ಣ ಚಂದಿರನ ಬರುವಿಕೆಗಾಗಿ..
    * ಅಪೂರ್ವ ಕೊಲ್ಯ
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ | 12 ರಾಶಿಗಳ ಫಲಾಫಲ ಹೀಗಿದೆ….

ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490

15 hours ago

ಬದುಕು ಪುರಾಣ | ಶ್ರೀಮಂತಿಕೆ ‘ಪಾಸ್ ಬುಕ್ಕಿನಲ್ಲಿ’ ಇರುವುದಲ್ಲ!

ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು  ಹಣ ಕೊಟ್ಟರೂ…

16 hours ago

ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…

1 day ago

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…

1 day ago

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…

1 day ago

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…

1 day ago