Advertisement
ಅನುಕ್ರಮ

ಪೂರ್ಣ ಚಂದಿರ ಗಗನದಲಿ….

Share
ಕೈಗೆಟುಕದ ಗಗನದಲಿ
ಬೆಳ್ಳಿಯ ಬಟ್ಟಲೊಂದು ಹೊಳೆಯುತ್ತಿದೆ
ಸುತ್ತಲೂ ಪುಟಾಣಿ ಮುತ್ತುಗಳು
ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ
ಮನದಿ ನೂರಾರು ಬಯಕೆಗಳು
ಸುಂದರ ಕನವರಿಕೆಗಳು
ಪುಟಾಣಿ ಮುತ್ತುಗಳ ಅಂಗೈಯೊಳಗೆ ಹಿಡಿದು
ಬೆಳ್ಳಿಯ ಬಟ್ಟಲೊಳಗೆ ತುಂಬಿಕೊಳ್ಳಬೇಕು
ಇಲ್ಲ! ಅದು ಬೆಳ್ಳಿಯ ಬಟ್ಟಲಲ್ಲ
ಆಗಸದರಮನೆಯ ರಾಜ
ಬೆಳದಿಂಗಳ ಸೂಸುವ ಶ್ವೇತದೊಡೆಯ
ಅವನು ಪೂರ್ಣ ಚಂದಿರ
ಅವನ ಸುತ್ತಲೂ ಮುತ್ತುಗಳಿಲ್ಲ
ಚಂದಿರನ ಚಂದಕ್ಕೆ
ಮನಸೋತ ಚುಕ್ಕಿ ತಾರೆಗಳು
ಈ ನೋಟವೇ ವಿಹಂಗಮ
ಸುಂದರ ಶಶಿಯ, ಸೌಂದರ್ಯದ ಮೆರುಗಿಗೆ
ಸೋತಿದೆ ನನ್ನ ಮನ
ತಿಳಿಯಾದ ಮುಗಿಲು,ಹೊಳೆವ ಚಂದಿರ
ತಂಪನೆಯ ಗಾಳಿ,ನಾನು ಕಳೆದುಹೋಗಿದ್ದೇನೆ
ಕಾಲಕಳೆದು , ಅವನು ಮರೆಯಾದಾಗ‌
ಮನದಿ ಅತೀವ ಸಂಕಟ
ಮತ್ತೆ ಕಾಯುತ್ತಿರುತ್ತೇನೆ , ಸೌಂದರ್ಯದ ಗಣಿಗಾಗಿ…
ಪೂರ್ಣ ಚಂದಿರನ ಬರುವಿಕೆಗಾಗಿ..
    * ಅಪೂರ್ವ ಕೊಲ್ಯ
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

12 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 days ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

2 days ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

2 days ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

2 days ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

2 days ago