ಸುಳ್ಯ: ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾರ್ ಇದರ ಮಹಾಸಭೆ ಭಾನುವಾರ ಸಂಜೆ ಪೈಚಾರಿನ ಬಿ ಎ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು
ರಿಫಾಯಿ ಎಸ್ ಎ ವಹಿಸಿದ್ದರು.
ಮಹಾಸಭೆಯ ಉದ್ಘಾಟನೆಯನ್ನು ಹಿರಿಯ ನ್ಯಾಯವಾದಿಗಳಾದ ಎ ಕುಂಞಪಳ್ಳಿ ಅವರು ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಸತ್ತಾರ್ ಪೈಚಾರ್ ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಶೀರ್ ಆರ್ ಬಿ. ಹಾಗೂ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ವಾಚಿಸಿದರು.ನಂತರ
ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿ :
ಗೌರವಾಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಎ ಕುಂಞಪಳ್ಳಿ ಇವರನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬೂಸಾಲಿ ಪೈಚಾರ್ , ಉಪಾಧ್ಯಕ್ಷರಾಗಿ ಅಶ್ರಫ್ ಅಚ್ಚಪ್ಪು, ಪ್ರಧಾನ ಕಾರ್ಯದರ್ಶಿಯಾಗಿ ಮುಜೀಬ್ ಪೈಚಾರ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಲತೀಫ್ ಟಿ ಎ ಹಾಗೂ ಆರ್ಷದ್ ಪ್ರಗತಿ ಕೋಶಾಧಿಕಾರಿಯಾಗಿ ಸೆಮೀರ್ ಟಿ ಎ. ಸದಸ್ಯರುಗಳಾಗಿ ಬಶೀರ್ ಆರ್ ಬಿ, ಲತೀಫ್ ಕರಿಕೆ, ರಿಫಾಯಿ ಎಸ್ ಎ , ನಾಸೀರ್ ಕೆ ಪಿ., ಆರ್ಷದ್ , ಸೆಮೀರ್ ಶಾಂತಿನಗರ, ಪಾಝೀಲ್ ಪಳ್ಳು, ಸೆರೀಕ್ ಪೈಚಾರ್ ಇವರನ್ನು ಅಯ್ಕೆ ಮಾಡಲಾಯಿತು.
ಬಶೀರ್ ಆರ್ ಸ್ವಾಗತಿಸಿ ಮುಜೀಬ್ ಪೈಚಾರ್ ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು, ಬೆಳ್ಳಾರೆ, ಪಂಜ ಸೇರಿದಂತೆ ಹಲವೆಡೆ…
ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಮೋಡದ…
ಕರ್ನಾಟಕದ ವಿವಿಧ ಭಾಗಗಳಲ್ಲಿ ಫೆಬ್ರುವರಿ 25ರ ಬೆಳಿಗ್ಗೆ 8 ಗಂಟೆವರೆಗೆ ತುಂತುರು ಮಳೆ,…
ಕಡಬ ತಾಲೂಕಿನ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಜನಾ ಮಂಡಳಿ ಉದ್ಘಾಟನೆ…
ಟೆಟಾನಸ್ ಮತ್ತು ಡಿಫ್ತೀರಿಯಾ ಲಸಿಕೆ ಬಿಡುಗಡೆ ವೇಳೆ ಭಾರತ ಲಸಿಕೆ ತಯಾರಿಕೆಯಲ್ಲಿ ಜಾಗತಿಕ…
ಮುಂದಿನ ವರ್ಷದಿಂದ ಕರ್ನಾಟಕದ 1ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯಿಸಲಾಗುವುದು…