ಸುಳ್ಯ: ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆ ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಬಿ.ಕೆ. ಮಾಧವ , ಪ್ರಧಾನ ಕಾರ್ಯದರ್ಶಿಯಾಗಿ ಕೆ. ಟಿ.ವಿಶ್ವನಾಥ್ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಎನ್.ಎ. ರಾಮಚಂದ್ರ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಬಶೀರ್.ಆರ್.ಬಿ. ಲೆಕ್ಕಾಚಾರ ಮಂಡಿಸಿದರು.
ಸಭೆಯನ್ನು ಉದ್ದೇಶಿಸಿ ನಿರ್ಗಮನ ಅಧ್ಯಕ್ಷ ಎನ್.ಎ. ರಾಮಚಂದ್ರ, ನೂತನ ಅಧ್ಯಕ್ಷ ಬಿ.ಕೆ. ಮಾಧವ, ಜಿಲ್ಲಾ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶರತ್ ಅಡ್ಕಾರು, ನಿರ್ಣಾಯಕ ಮಂಡಳಿ ಅಧ್ಯಕ್ಷ ಮಾಯಿಲಪ್ಪ, ಸಂಚಾಲಕರಾದ ನಟರಾಜ, ಸಂದೀಪ್ ಪಲ್ಲೋಡಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಸುಧಾಕರ ರೈ ಬಾಳಿಲ ಧನ್ಯವಾದ ಮಾಡಿದರು. ಕೆ.ಟಿ. ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಗೌರವಾಧ್ಯಕ್ಷರಾಗಿ ಎನ್. ಎ. ರಾಮಚಂದ್ರ, ಅಧ್ಯಕ್ಷರಾಗಿ ಬಿ.ಕೆ. ಮಾಧವ, ಉಪಾಧ್ಯಕ್ಷರಾಗಿ ಕೆ.ಎಸ್. ಗೋಪಾಲಕೃಷ್ಣ ಕರೋಡಿ, ಶರತ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಟಿ.ವಿಶ್ವನಾಥ್, ಜತೆ ಕಾರ್ಯದರ್ಶಿಯಾಗಿ ಹರಿಪ್ರಕಾಶ್ ಅಡ್ಕಾರ್, ಕೋಶಾಧಿಕಾರಿಯಾಗಿ ಸುಧಾಕರ ರೈ ಬಾಳಿಲ, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಆರ್ ಬಿ., ಹರ್ಷಿತ್, ನಿರ್ದೇಶಕರುಗಳಾಗಿ ದೊಡ್ಡಣ್ಣ ಬರೆಮೇಲು, ಎ.ಸಿ. ವಸಂತ, ರವಿ ಪ್ರಕಾಶ್, ಸತೀಶ್ ಕೆ.ಜಿ., ಹಮೀದ್ ಕೊಳಂಜಿಕೋಡಿ, ರಾಧಾಕೃಷ್ಣ ರೈ ಬೂಡು, ಮಹಮ್ಮದ್ ನಾಸೀರ್, ಮಹಾಪೋಷಕಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಪೋಷಕಾಧ್ಯಕ್ಷರಾಗಿ ಅಕ್ಷಯ್ ಕುರುಂಜಿ, ಗೌರವ ಸಲಹೆಗಾರರಾಗಿ ಸುಧಾಕರ ರೈ ಪಿ,ಬಿ., ಶಿವರಾಮ ಏನೆಕಲ್, ಎಸ್ ಸಂಶುದ್ದೀನ್, ಎನ್. ಜಯಪ್ರಕಾಶ್ ರೈ, ಕೆ.ಎಂ. ಮುಸ್ತಫಾ ಆಯ್ಕೆಯಾದರು.
ನಿರ್ಣಾಯಕ ಮಂಡಳಿಯ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಮಾಯಿಲಪ್ಪ ಕೆ., ಸಂಚಾಲಕರಾಗಿ ನಟರಾಜ ಎಂ.ಎಸ್., ಸಂದೀಪ್ ಪಲ್ಲೋಡಿ, ಸದಸ್ಯರುಗಳಾಗಿ ಶಿವರಾಮ ಏನೆಕಲ್ಲು, ದೊಡ್ಡಣ್ಣ ಬರೆಮೇಲು, ಎ.ಸಿ. ವಸಂತ, ವಿಶ್ವನಾಥ ಕೆ., ಮಂಜುನಾಥ, ವೀರನಾಥ, ರಂಗನಾಥ, ಪದ್ಮನಾಭ ಏನೆಕಲ್, ಉಮೇಶ್, ತೀರ್ಥವರ್ಣ, ಸೀತಾರಾಮ, ವಿನ್ಯಾಸ, ಮಿಥುನ್ ಆಯ್ಕೆಯಾದರು.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…