ಯಕ್ಷಗಾನ : ಮಾತು-ಮಸೆತ

ಪ್ರತಿಯೊಬ್ಬರ ಆತ್ಮದ ಉತ್ಕರ್ಷಕ್ಕೆ ಶಾರೀರಿಕವಾದ ಉಲ್ಲಾಸವೂ ಬೇಕು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ

Advertisement
Advertisement

 

“… ದೇಹ, ಮನಸ್ಸು, ಬುದ್ಧಿ ಈ ಮೂರೂ ಸಮತೋಲನ ಸ್ಥಿತಿಯಲ್ಲಿದ್ದಾಗ ನನ್ನಂತಹವರು ಆತ್ಮಶಕ್ತಿಯನ್ನು ಹೊರಚೆಲ್ಲುತ್ತಾ ಇದ್ದಾರೆ ಎಂಬುದು ತಾತ್ಪರ್ಯ. ಈ ರೀತಿಯ ಇಚ್ಛಾ, ಕ್ರಿಯಾ, ಜ್ಞಾನ – ಈ ಮುಪ್ಪುರಿ ಶಕ್ತಿಯಿಂದ ನಾನು ಏನನ್ನಾದರೂ ಸೃಜಿಸಿದರೆ ಅದು ಯಜ್ಞದಿಂದ ಸೃಷ್ಟಿಯಾಯಿತು ಎಂದರ್ಥ. ಪ್ರಜಾಕೋಟಿಯನ್ನು ಸೃಷ್ಟಿಮಾಡಿ ಅವರಿಗೆಲ್ಲಾ ಯಜ್ಞವನ್ನೇ ಉಪದೇಶಿಸಿದ್ದೇನೆ. ಮಾತ್ರವಲ್ಲ, ಪುರುಷಸೂಕ್ತ ಮಂತ್ರದಲ್ಲಂತೂ ಅದನ್ನು ಪ್ರತಿಪಾದಿಸಿದ್ದೇನೆ. ವಿಶ್ವವಿರಾಟರೂಪಿಯಾದಂತಹ ಸತ್ಯ ಸ್ವರೂಪಕ್ಕೆ ಮುಖವೇ ಬ್ರಾಹ್ಮಣ ವರ್ಗ, ಕ್ಷತ್ರಿಯರೇ ಭುಜಗಳು, ಊರು ಭಾಗವೇ ವೈಶ್ಯರು, ಆಮೇಲೆ ಉಳಿದ ಜನಾಂಗ ಪಾದಸ್ಥಾನಲ್ಲಿದೆ ಅಂತ ಅರ್ಥ. ಹೀಗೆ ಹೇಳುವಾಗ ನಾಲ್ಕನೇ ವರ್ಣದವರು ಕೀಳು ಎಂದು ಅರ್ಥವಲ್ಲ. ಇಡೀ ದೇಹಕ್ಕೆ ಆಧಾರವಾದದ್ದೇ ಪಾದ ತಾನೆ. ಯಜ್ಞಶಕ್ತಿ ಇದು ಕೃತು ಶಕ್ತಿ. ಯಜ್ಞಮೂಲಕವಾಗಿ ಪಡೆದಿದ್ದೇನೆ ಒಬ್ಬಾಕೆ ಹೆಣ್ಣು ಮಗಳನ್ನು…

ಯಜ್ಞಮೂಲಕವಾಗಿ ಪಡೆದಂತಹ ಮಗಳೆಂದರೆ ದೇಹ ಸಂಬಂಧದಿಂದ ಸಂಸಾರಿಗರು ಪಡೆಯುವಂತಹ ಪುತ್ರಿ ಎಂಬರ್ಥವಲ್ಲ. ಜನ್ಮ ಯಾವುದು? ಜನಕ ಯಾವುದು? ಎಂಬ ಅರ್ಥದಲ್ಲಿ ಯಾವುದು ಕಾರಣವಾಗಿ ಯಾವುದು ಹುಟ್ಟಿತು ಎಂಬಲ್ಲಿ ‘ತಂದೆ, ಮಗಳು’ ಸಂಬಂಧ. ಹೀಗೆ ಯಜ್ಞದಲ್ಲಿ ಹುಟ್ಟಿದ ಈ ಶಿಶುವಿಗೆ ‘ಶಾರದಾ’ ಎಂದು ನಾಮಕರಣ ಮಾಡಿದ್ದೇನೆ. ‘ಶರತ್’ ಎಂದರೆ ಬೆಳಕೂ ಹೌದು, ಉತ್ಸಾಹವೂ ಹೌದು. ಆನಂದವೂ ಹೌದು. ಹೀಗೆ ನಾನಾರ್ಥ ಪ್ರತಿಪಾದ್ಯವಾದಂತಹ ಶರತ್ ಶಬ್ದದ ಸಾಕಾರ ಮೂರ್ತಿಯೇ ಯಜ್ಞಮುಖದಿಂದ ಹುಟ್ಟಿದ ‘ಶಾರದಾ’.

ಅರ್ಥ – ಪ್ರತಿಯೊಬ್ಬರ ಆತ್ಮದ ಉತ್ಕರ್ಷಕ್ಕೆ ಶಾರೀರಿಕವಾದ ಉಲ್ಲಾಸವೂ ಬೇಕು. ಶರೀರದಲ್ಲಿ ಚಟುವಟಿಕೆಯಿಲ್ಲದಿದ್ದರೆ ಮನಸ್ಸು ಚಡಪಡಿಸುತ್ತದೆ. ಶಾರೀರಿಕ ಆರೋಗ್ಯ, ಇದಕ್ಕೆ ಅನುಯೋಜ್ಯವಾಗಿ ಮಾನಸಿಕವಾದಂತಹ ಉಲ್ಲಾಸ. ಈ ಮನೋಲ್ಲಾಸ ದೈಹಿಕವಾದಂತಹ ಶಕ್ತಿ. ಇದನ್ನು ಆಧರಿಸಿಕೊಂಡು ನಮ್ಮ ದೀಃಶಕ್ತಿ ಬೆಳೆಯುತ್ತದೆ. ಆದ್ದರಿಂದಲೇ ವ್ರತ, ಉಪವಾಸ, ನೇಮ, ನಿಷ್ಠೆ.. ಇದೆಲ್ಲಾ ದೇಹಕ್ಕೆ, ಮನಸ್ಸಿಗೆ ಉಪದಿಷ್ಟವಾದದ್ದು. ಹಾಗೆ ಸರ್ವಾಂಗೀಣವಾಗಿ ಉತ್ಸಾಹ ತುಂಬಿದಾವಾಗ, ಮನುಷ್ಯರು ಪೂರ್ಣಾನಂದವನ್ನು ಅನುಭವಿಸುತ್ತಾರೆ. ಸತ್, ಚಿತ್, ಆನಂದಾತ್ಮಕವಾದಂತಹ ನಿಗೂಢ ರಹಸ್ಯವನ್ನು ಅವರು ಅನುಭವಿಸಬೇಕಾಗಿದ್ದರೆ ಈ ‘ಶಾರದಾ’ಳನ್ನು ಪೂಜಿಸಬೇಕಾಗುತ್ತದೆ. ಇವಳ ಅನುಗ್ರಹ ಬೇಕಾಗುತ್ತದೆ…”

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆ – ಸಚಿವ ಮಧುಬಂಗಾರಪ್ಪ

ರಾಜ್ಯದಲ್ಲಿ ಮಾರಣಾಂತಿಕ ಕ್ಯಾನ್ಸರ್‌ರೋಗದಿಂದ ಬಳಲುತ್ತಿರುವ ಹಾಗೂ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ…

3 minutes ago

ಇಂದು ವಿಶ್ವ ರಕ್ತದಾನಿಗಳ ದಿನ

ಇಂದು ವಿಶ್ವ ರಕ್ತದಾನಿಗಳ ದಿನ. ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ…

5 minutes ago

ಹಲಸಿನ ಅರಿವಿನ ಹರಿವಿನ ಪ್ರಸಂಗ ‘ಪನಸೋಪಾಖ್ಯಾನ’ | ಪರಿಸರ ಉಳಿಸುವ ಸಂದೇಶ ಸಾರಿದ ತಾಳಮದ್ದಳೆ |

 ‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ.…

5 hours ago

ಹವಾಮಾನ ವರದಿ | 14-06-2025 | ಜೂನ್.‌18 ರಿಂದ ಮಳೆಯ ಪ್ರಮಾಣ ಕಡಿಮೆ ನಿರೀಕ್ಷೆ

ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.

5 hours ago

ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…

7 hours ago

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

10 hours ago