Advertisement
MIRROR FOCUS

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ  ಜನಜಾಗೃತಿ ಮೂಡಿಸುವ  ವಿನೂತನ ಪ್ರಯತ್ನ

Share

ಅರಣ್ಯ ನಾಶ, ಗಣಿಗಾರಿಕೆ ಸೇರಿದಂತೆ ಹಲವು ಸವಾಲುಗಳ ಮೂಲಕ  ಆತಂಕದ  ಭವಿಷ್ಯವನ್ನು ಎದುರಿಸುತ್ತಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ  ಜನಜಾಗೃತಿ ಮೂಡಿಸುವ  ವಿನೂತನ ಪ್ರಯತ್ನವೊಂದು  ಕಲಾತ್ಮಕವಾಗಿ ಅನಾವರಣಗೊಂಡಿದೆ. ಶಿವಮೊಗ್ಗ ಜಿಲ್ಲೆಯ  ಹೊಸನಗರ ತಾಲೂಕಿನ ದೊಂಬೆಕೊಪ್ಪ ಗ್ರಾಮದ  ಸಾರಾ ಸಂಸ್ಥೆ  ಈ ಕಾರ್ಯದಲ್ಲಿ  ತೊಡಗಿಸಿಕೊಂಡಿದೆ.

ರಾಜ್ಯದ  ಮಲೆನಾಡು ಹಾಗೂ  ಕರಾವಳಿಯನ್ನು ಬೆಸೆದಿರುವ  ಪಶ್ಚಿಮ ಘಟ್ಟಗಳು  ಶುದ್ಧಗಾಳಿ, ಪರಿಸರ  ಹಾಗೂ  ಬೆಟ್ಟಗುಡ್ಡಗಳಿಂದ  ಗಮನ ಸೆಳೆಯುತ್ತವೆ.  ಅಭಿವೃದ್ಧಿಯ ಹೆಸರಿನಲ್ಲಿ  ಇಂತಹ  ಪ್ರಾಕೃತಿಕ ಸಂಪತ್ತು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಜೀವಿವೈವಿಧ್ಯತೆಯ ರಕ್ಷಣೆ  ಸವಾಲಿನ ಕೆಲಸವಾಗಿದೆ.  ಪರಿಸರ ಹಾಗೂ  ಜೀವಿವೈಧ್ಯತೆಯ ಮಹತ್ವವನ್ನು  ಸಾಮಾನ್ಯ ಜನರಿಗೆ  ಸರಳ ಮಾಧ್ಯಮದ ಮೂಲಕ ತಿಳಿಸುವ ಪ್ರಯತ್ನವೊಂದು ಸದ್ದಿಲ್ಲದೆ ಸಾಗಿದೆ. ಪಶ್ಚಿಮ ಘಟ್ಟಗಳ ವರ್ತಮಾನ ಮತ್ತು  ಭವಿಷ್ಯದ ಕುರಿತು  ಸೂಕ್ಷ್ಮ ಅಲೋಚನೆಗಳನ್ನು  ಅಭಿವ್ಯಕ್ತಪಡಿಸಲು  ಚಿತ್ರಕಲೆಯಂತಹ ಮಾಧ್ಯಮವನ್ನು  ಪ್ರಬಲವಾಗಿ  ಬಳಸಿಕೊಳ್ಳುವ ಪ್ರಯತ್ನ  ನಡೆದಿದ್ದು,  ಶಿವಮೊಗ್ಗ ಜಿಲ್ಲೆಯ  ಹೊಸನಗರ ತಾಲೂಕಿನ ದೊಂಬೆಕೊಪ್ಪ ಗ್ರಾಮದ  ಸಾರಾ ಸಂಸ್ಥೆ  ಈ ಕಾರ್ಯದಲ್ಲಿ  ತೊಡಗಿಸಿಕೊಂಡಿದೆ.

ಚಿತ್ರಗಳ ಮೂಲಕ  ಪಶ್ಚಿಮ ಘಟ್ಟಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅಭಿವ್ಯಕ್ತಿಸುವ  15 ದಿನಗಳ ಶಿಬಿರ  ನಡೆದಿದ್ದು,  ಬೆಟ್ಟ, ನದಿ, ಪ್ರಾಣಿ,ಪಕ್ಷಿ ಸಂಕುಲ, ವೃಕ್ಷ ಸಂಕುಲದ  ಮಹತ್ವವನ್ನು  ಸೃಜನಶೀಲವಾಗಿ  ಚಿತ್ರಗಳ ಮೂಲಕ  ಬಿಡಿಸಿರುವ ಕಲಾವಿದರು , ಸ್ಥಳೀಯರೊಂದಿಗೆ ಚಿಂತನ-ಮಂಥನದಲ್ಲೂ ಭಾಗಿಯಾಗಿದ್ದಾರೆ.

ಸಾರಾ ಸಂಸ್ಥೆ  ಪಶ್ಚಿಮ ಘಟ್ಟದ ಪ್ರಾಕೃತಿಕ ಸಂಪತ್ತು ಮತ್ತು ಸವಾಲುಗಳ ಕುರಿತು  ತನ್ನದೇ ಆದ ಸಂಶೋಧನಾತ್ಮಕ ಕೆಲಸವನ್ನು ನಿರ್ವಹಿಸುತ್ತಿದೆ.  ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ  ಹಾಗೂ ಕರ್ನಾಟಕ ಸೇರಿದಂತೆ  ವಿವಿಧ ರಾಜ್ಯಗಳ ಯುವ ಕಲಾವಿದರು  ಈ ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ.  ಈ ಹಿಂದೆ  ಸಾರಾ ಸಂಸ್ಥೆ  ಮಲೆನಾಡಿನ  ದೇಶೀಯ ಭತ್ತದ ತಳಿಗಳ  ರಕ್ಷಣೆ ಸೇರಿದಂತೆ  ಹಲವು  ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರಕಲಾ ಶಿಬಿರಕ್ಕೆ ವಿವಿಧ ರಾಜ್ಯಗಳಿಂದ  ಹಲವು ಕಲಾವಿದರು ಆಗಮಿಸಿದ್ದು,  ಪಶ್ಚಿಮ ಘಟ್ಟದ ಜ್ವಲಂತ ಸಮಸ್ಯೆಗಳನ್ನು  ಬಣ್ಣಗಳಲ್ಲಿ  ಬಿಡಿಸುವ ಮೂಲಕ  ಸೃಜನಶೀಲ ಅಭಿವ್ಯಕ್ತಿಗೆ  ಸಾಕ್ಷಿಯಾಗಿದ್ದಾರೆ ಎನ್ನುತ್ತಾರೆ ಸಾರಾ ಸಂಸ್ಥೆ ಮುಖ್ಯಸ್ಥ ಅರುಣ್ ಕುಮಾರ್. ತಮ್ಮ ಸಂಸ್ಥೆಯು ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಪರಂಪರೆ, ಕಲೆ, ಸಾಹಿತ್ಯ  ಹಾಗೂ ಸಂಸ್ಕೃತಿಯನ್ನು  ಪರಿಚಯಿಸುವ ಮತ್ತು  ಸಂರಕ್ಷಿಸುವ  ಕೆಲಸ ಮಾಡುತ್ತಿದೆ ಎನ್ನುತ್ತಾರೆ ಸಾರಾ ಸಂಸ್ಥೆಯ ಗುರುಮೂರ್ತಿ ವರದ ಮೂಲ.

ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯನ್ನು ನಾಶಗೊಳಿಸುವ  ಪ್ರಯತ್ನಗಳು  ನಡೆದಿರುವುದು ಅಪಾಯಕಾರಿ ಎನ್ನುತ್ತಾರೆ ಚಿತ್ರಕಲಾವಿದ  ಮೈಸೂರಿನ ದಯಾನಂದ್. ಹಲವು ಕುತೂಹಲಗಳಿಗೆ  ಈ ಶಿಬಿರ ಸಾಕ್ಷಿಯಾಗಿದ್ದು, ಪರಿಸರ ಸಂರಕ್ಷಣೆ , ಜಾಗೃತಿಗೆ  ವೇದಿಕೆಯಾಗಿದೆ ಎನ್ನುತ್ತಾರೆ  ಶಿಬಿರಾರ್ಥಿ ಹೇಮಾಂಗಿನಿ.

ನಾಡಿನ ನೈಸರ್ಗಿಕ ಸಂಪನ್ಮೂಲದ ತೊಟ್ಟಿಲು ಎನಿಸಿರುವ  ಪಶ್ಚಿಮಘಟ್ಟಗಳನ್ನು  ಸಂರಕ್ಷಿಸುವುದು  ಮತ್ತು ಅಲ್ಲಿನ ಜೀವಿವೈವಿಧ್ಯತೆಯನ್ನು ರಕ್ಷಿಸುವುದು ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು,  ಎಲ್ಲರೂ  ಈ ಕುರಿತು  ಅಲೋಚಿಸುವುದು ಅಗತ್ಯ ಎಂಬ  ಸಂದೇಶವನ್ನು ಈ ಶಿಬಿರ ನೀಡಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ

ಇಂಡೋನೇಷ್ಯಾದ ಸ್ಟಾರ್ಟ್‌ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್‌ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…

8 hours ago

ಬಿಡದಿ ಟೌನ್‌ಶಿಪ್‌ಗೆ 2 ಲಕ್ಷಕ್ಕೂ ಹೆಚ್ಚು ಮರಗಳ ಕತ್ತರಿ…? – ಯೋಜನೆಗೆ ಪರಿಸರವಾದಿಗಳು, ರೈತರಿಂದ ತೀವ್ರ ವಿರೋಧ

ಬಿದದಿ ಎಐ ಟೌನ್‌ಶಿಪ್ ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುವ ಸಾಧ್ಯತೆ…

8 hours ago

ಹವಾಮಾನ ವರದಿ | 16-06-2026 | ರಾಜ್ಯದಲ್ಲಿ ಇನ್ನೂ ದುರ್ಬಲ ಮಳೆ ಚಟುವಟಿಕೆ – ಜೂ.22 ರಿಂದ ಕರಾವಳಿಯಲ್ಲಿ ಮುಂಗಾರು ಚೇತರಿಕೆ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ಅತಿ ದುರ್ಬಲವಾಗಿದ್ದು, ಜೂನ್ 22 ರಿಂದ ಕರಾವಳಿ ಭಾಗದಲ್ಲಿ ಅಲ್ಪ…

14 hours ago

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…

1 day ago

ಎಲ್ ನಿನೋ ಅಧಿಕೃತವಾಗಿ ಆರಂಭ – ಕರಾವಳಿ ಕರ್ನಾಟಕದ ಮಳೆ ಮೇಲೆ ಪರಿಣಾಮ ಬೀಳುತ್ತಾ? ಹವಾಮಾನ ಇಲಾಖೆ ನಿಗಾ

ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…

1 day ago

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

2 days ago