ಬತ್ತಿದ ಜೀವ ಜಲ : ಒಣಗಿದ ತೋಟಗಳು

April 25, 2019
4:48 PM

ಸುಬ್ರಹ್ಮಣ್ಯ: ಕೆರೆ,ಬಾವಿ,ಹೊಳೆಯಲ್ಲಿ ನೀರಿಲ್ಲ. ಮಳೆ ಬಂದರೂ ನೀರಿನ ಸೆಲೆ ಕಾಣುತ್ತಿಲ್ಲ. ಪರಿಣಾಮವಾಗಿ ತೋಟಗಳು ಒಣಗುತ್ತಿವೆ. ಕೊಳವೆಬಾವಿಯಲ್ಲಿ ನೀರಿದ್ದರೂ ಕರೆಂಟ್ ಇಲ್ಲ. ಹೀಗಾಗಿ ಈಗ ಗ್ರಾಮೀಣ ಭಾಗದಲ್ಲೂ ಸಮಸ್ಯೆ ಹೆಚ್ಚಾಗಿದೆ.

Advertisement

ಸುಮಾರು 8 ತಿಂಗಳ ಹಿಂದೆ ಭಾರೀ ಮಳೆಯ ಕಾರಣದಿಂದ ಅಡಿಕೆ ಕೊಳೆರೋಗದ ಸುದ್ದಿಯಾದರೆ ಈಗ ಅಡಿಕೆ ಮರಕ್ಕೆ ನೀರಿಲ್ಲದೆ ಒಣಗುವ ಸುದ್ದಿ. ಕಳೆದ ಒಂದು ತಿಂಗಳಿನಿಂದ ನೀರಿನ ಕೊರತೆ ಉಂಟಾಗಿ ಕೃಷಿ ಭೂಮಿ ಒಣಗಿದೆ. ಅದರ ಜೊತೆಗೆ ಕುಡಿಯಲೂ ನೀರಿಲ್ಲ. ಇದ್ದ ಅಲ್ಪ ಸ್ವಲ್ಪ ಫಸಲುಗಳು ಬಿಸಿಲಿನ ಝಳಕ್ಕೆ ಸಿಲುಕಿ ನಾಶವಾಗುತ್ತದೆ. ಹಿಂದೆಲ್ಲಾ ಗ್ರಾಮೀಣ ಭಾಗದಲ್ಲಿ ಅಂದರೆ ಮಲೆನಾಡು ಭಾಗದಲ್ಲಿ ಇಂತಹ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚೆಗೆ ಕಾಡಂಚಿನ ಪ್ರದೇಶದಲ್ಲೂ ಬರದ ಸ್ಥಿತಿ ಎದುರಾಗುತ್ತಿದೆ. ಈಗೀಗ ವಿದ್ಯುತ್ ಸಮಸ್ಯೆ ಕೂಡಾ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

“ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರಿನ ಆಸರೆಯಿದ್ದರೂ ಅದನ್ನು ಸಮರ್ಪಕವಾಗಿ ಬಳಸುವಲ್ಲಿ ಸಮಸ್ಯೆಯಾಗುತ್ತಿದೆ.ನಿತ್ಯ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ನೀರಿನ ಸಮಸ್ಯೆ ಇಲ್ಲದ ಕಡೆಯೂ ಸಮಸ್ಯೆ ಎದರುರಾಗಿದೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಇದ್ದರೆ ನೀರಿನ ಪೂರೈಕೆ ಯಾವುದೇ ಸಮಸ್ಯೆ ಎದುರಾಗದು” ಎಂದು “ಸುಳ್ಯಸುದ್ದಿ.ಕಾಂ”  ನೊಂದಿಗೆ ಕೃಷಿಕ ಸುರೇಶ್ಚಂದ್ರ ಹೇಳಿದರು.

“ಇರುವ ವಿದ್ಯುತ್ ಸರಿಯಾಗಿ ನೀಡಿದರೆ ಸಮಸ್ಯೆ ಇಲ್ಲ. ಹಗಲು 4 ಗಂಟೆ ಪಂಪ್‍ಗೆ ವಿದ್ಯುತ್ ಸಿಕ್ಕಿದರೆ ರಾತ್ರಿ ವೇಳೆ 3 ಗಂಟೆ ಅಂದರೂ ಅಷ್ಟು ಸಮಯ ಲಭ್ಯವಾಗುತ್ತಿಲ್ಲ. ಹೀಗಾಗಿ ಮತ್ತಷ್ಟು ಸಮಸ್ಯೆ” ಎಂದು “ಸುಳ್ಯಸುದ್ದಿ.ಕಾಂ” ನೊಂದಿಗೆ ಕೃಷಿಕ ವೆಂಕಪ್ಪ ಗೌಡ ತಮ್ಮ ಅಳಲು ತೋಡಿಕೊಂಡರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:26 PM
by: ದ ರೂರಲ್ ಮಿರರ್.ಕಾಂ
6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group