Advertisement
ಅನುಕ್ರಮ

ಬದುಕಿನ ಬಣ್ಣ ಹೆಚ್ಚಿಸುವ ಮೋಡಗಳು

Share
ನಿಲ್ಲಿ ಮೋಡಗಳೆ ಎಲ್ಲಿ ಓಡುವಿರಿ
ನಾಲ್ಕು ಹನಿಯ ಸುರಿಸಿ ಎಂದು ರೇಡಿಯೋ ದಲ್ಲಿ ಬರುತ್ತಿದ್ದರೆ ಅಂಗಳಕ್ಕೆ ಹೋಗಿ ಆಕಾಶದಲ್ಲಿ ಓಡೋ ಮೋಡಗಳನ್ನು ನೋಡುತ್ತಿದ್ದುದು ನಿನ್ನೆ ಮೊನ್ನೆ ನಡೆದಂತಿದೆ.
ಮೋಡಗಳ ಓಟವೋ ಹುಚ್ಚು ಹಿಡಿಸುವಂತಿರುತ್ತದೆ. ಒಮ್ಮೆ ಪರ್ವತ, ನೋಡುತ್ತಿದ್ದಂತೆ ನದಿ, ಜಲಪಾತ, ಮಗದೊಮ್ಮೆ ಆನೆ, ಹುಲಿ ಕುರಿ, ಹಾವು. ನಿಧಾನ ಗತಿಯಲ್ಲಿ ಬದಲಾಗುವ ಮೋಡಗಳ ಬಣ್ಣಗಳು ಕಲ್ಪನೆಯ ಆಕಾರಕ್ಕೆ ರೂಪ ಕೊಡುತ್ತದವೆ. ಚಲಿಸುತ್ತಿರುವ ಮೋಡಗಳನ್ನು ಸುಮ್ಮನೆ ಕುಳಿತು ನೋಡುವುದೇ ಕಣ್ಣಿಗೆ ಹಬ್ಬ.
ನೀಲಿಯ ಆಕಾಶದಲ್ಲಿ ದೂರ ದೂರಕೆ ಒಂದೊಂದು ಮೋಡಗಳು ಕಾಣಿಸಲಾರಂಭಿಸಿದವೆಂರೆ ಮನಸು‌ ಮುದಗೊಳ್ಳುತ್ತದೆ.  ಪುಟ್ಟ ಪುಟ್ಟ ಮೋಡಗಳು ಒಂದಕ್ಕೊಂದು ಜೊತೆಯಾಗುತ್ತಿದ್ದಂತೆ ಒಂದನೇ ತರಗತಿಯ ಮಕ್ಕಳು ಕೈ ಕೈ ಹಿಡಿದು ತರಗತಿಯೊಳಗೆ ಹೋಗುವುದೇ ನೆನಪಾಗುತ್ತದೆ.
ಹೊತ್ತು ಮುಳುಗುತ್ತಿದ್ದಂತೆ ಬೇರೆ ಬೇರೆ ಬಣ್ಣಗಳಲ್ಲಿ ವಿವಿಧ ಆಕಾರಗಳಲ್ಲಿ ಗೋಚರವಾಗುವ ಮೋಡಗಳು ನಮ್ಮ ನಮ್ಮ ಕಲ್ಪನೆಗೆ ತಕ್ಕಂತೆ ರೂಪ ತಳೆಯುತ್ತದೆ. ಅಲ್ಲಿ ಅಜ್ಜ ಕಾಣ್ತಾರೆ, ಅಜ್ಜಿ ಬರುತ್ತಾಳೆ, ದೂರಾದ ಗೆಳೆಯ , ಗೆಳತಿಯರು ನೆನಪಾಗುತ್ತಾರೆ, ತರಗತಿಯಲ್ಲಿ ಪಕ್ಕದಲ್ಲೇ ಕುಳಿತಿರುತ್ತಿದ್ದ ಗತಿಸಿ ಹೋದ ಗೆಳತಿಯ ನೆನೆದು ಕಣ್ಣೀರು ನನಗರಿಯದೆ ಬಂದುಬಿಡುತ್ತದೆ.
ಕವಿಯ ಕಲ್ಪನೆಗೆ ಸ್ಪೂರ್ತಿ ಯಾಗುವ ಮೋಡಗಳು ಹೊಸ ಹೊಸ ಕವನಗಳ ಸಾಧ್ಯತೆ ಯನ್ನು ತೆರೆದಿಡುತ್ತದೆ. ಕಲಾವಿದನ ನಾಟ್ಯಾಭಿ ನಯಕ್ಕೆ ಮಾರ್ಗದರ್ಶಿಯಾಗುತ್ತದೆ. ವರ್ಣಗಾರನ ಚಿತ್ರಿಕೆಗೆ ರೂಪದರ್ಶಿಯಾಗಿ ಮೋಡಗಳು ಮೆರೆಯುತ್ತವೆ. ತನ್ನ ಓಟದ ವೇಗದಲ್ಲೇ ಬದಲಾಗುವ ಕಾಲಮಾನವನ್ನು ಸೂಚ್ಯವಾಗಿ ಮೋಡಗಳು ತೋರಿಸುತ್ತವೆ.
ಬದುಕಿನ ನಶ್ವರತೆಯನ್ನು   ಮೋಡಗಳು    ಸೂಚಿಸುತ್ತವೆ. ನಾವು ಅಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ, ಭಗವಂತನ ಇಚ್ಛೆಯಂತೆ , ನಮ್ಮನ್ನೂ ಸೇರಿದಂತೆ ಜಗತ್ತು ನಡೆಯುತ್ತದೆ ಎಂದು ಮೋಡಗಳು ಸಾರಿ ಸಾರಿ ಹೇಳುತ್ತಿವೆಯೇನೋ ಅನ್ನಿಸುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

4 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

12 hours ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

18 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

19 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

19 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

19 hours ago