Advertisement
ಅನುಕ್ರಮ

ಬದುಕಿನ ಬಣ್ಣ ಹೆಚ್ಚಿಸುವ ಮೋಡಗಳು

Share
ನಿಲ್ಲಿ ಮೋಡಗಳೆ ಎಲ್ಲಿ ಓಡುವಿರಿ
ನಾಲ್ಕು ಹನಿಯ ಸುರಿಸಿ ಎಂದು ರೇಡಿಯೋ ದಲ್ಲಿ ಬರುತ್ತಿದ್ದರೆ ಅಂಗಳಕ್ಕೆ ಹೋಗಿ ಆಕಾಶದಲ್ಲಿ ಓಡೋ ಮೋಡಗಳನ್ನು ನೋಡುತ್ತಿದ್ದುದು ನಿನ್ನೆ ಮೊನ್ನೆ ನಡೆದಂತಿದೆ.
ಮೋಡಗಳ ಓಟವೋ ಹುಚ್ಚು ಹಿಡಿಸುವಂತಿರುತ್ತದೆ. ಒಮ್ಮೆ ಪರ್ವತ, ನೋಡುತ್ತಿದ್ದಂತೆ ನದಿ, ಜಲಪಾತ, ಮಗದೊಮ್ಮೆ ಆನೆ, ಹುಲಿ ಕುರಿ, ಹಾವು. ನಿಧಾನ ಗತಿಯಲ್ಲಿ ಬದಲಾಗುವ ಮೋಡಗಳ ಬಣ್ಣಗಳು ಕಲ್ಪನೆಯ ಆಕಾರಕ್ಕೆ ರೂಪ ಕೊಡುತ್ತದವೆ. ಚಲಿಸುತ್ತಿರುವ ಮೋಡಗಳನ್ನು ಸುಮ್ಮನೆ ಕುಳಿತು ನೋಡುವುದೇ ಕಣ್ಣಿಗೆ ಹಬ್ಬ.
ನೀಲಿಯ ಆಕಾಶದಲ್ಲಿ ದೂರ ದೂರಕೆ ಒಂದೊಂದು ಮೋಡಗಳು ಕಾಣಿಸಲಾರಂಭಿಸಿದವೆಂರೆ ಮನಸು‌ ಮುದಗೊಳ್ಳುತ್ತದೆ.  ಪುಟ್ಟ ಪುಟ್ಟ ಮೋಡಗಳು ಒಂದಕ್ಕೊಂದು ಜೊತೆಯಾಗುತ್ತಿದ್ದಂತೆ ಒಂದನೇ ತರಗತಿಯ ಮಕ್ಕಳು ಕೈ ಕೈ ಹಿಡಿದು ತರಗತಿಯೊಳಗೆ ಹೋಗುವುದೇ ನೆನಪಾಗುತ್ತದೆ.
ಹೊತ್ತು ಮುಳುಗುತ್ತಿದ್ದಂತೆ ಬೇರೆ ಬೇರೆ ಬಣ್ಣಗಳಲ್ಲಿ ವಿವಿಧ ಆಕಾರಗಳಲ್ಲಿ ಗೋಚರವಾಗುವ ಮೋಡಗಳು ನಮ್ಮ ನಮ್ಮ ಕಲ್ಪನೆಗೆ ತಕ್ಕಂತೆ ರೂಪ ತಳೆಯುತ್ತದೆ. ಅಲ್ಲಿ ಅಜ್ಜ ಕಾಣ್ತಾರೆ, ಅಜ್ಜಿ ಬರುತ್ತಾಳೆ, ದೂರಾದ ಗೆಳೆಯ , ಗೆಳತಿಯರು ನೆನಪಾಗುತ್ತಾರೆ, ತರಗತಿಯಲ್ಲಿ ಪಕ್ಕದಲ್ಲೇ ಕುಳಿತಿರುತ್ತಿದ್ದ ಗತಿಸಿ ಹೋದ ಗೆಳತಿಯ ನೆನೆದು ಕಣ್ಣೀರು ನನಗರಿಯದೆ ಬಂದುಬಿಡುತ್ತದೆ.
ಕವಿಯ ಕಲ್ಪನೆಗೆ ಸ್ಪೂರ್ತಿ ಯಾಗುವ ಮೋಡಗಳು ಹೊಸ ಹೊಸ ಕವನಗಳ ಸಾಧ್ಯತೆ ಯನ್ನು ತೆರೆದಿಡುತ್ತದೆ. ಕಲಾವಿದನ ನಾಟ್ಯಾಭಿ ನಯಕ್ಕೆ ಮಾರ್ಗದರ್ಶಿಯಾಗುತ್ತದೆ. ವರ್ಣಗಾರನ ಚಿತ್ರಿಕೆಗೆ ರೂಪದರ್ಶಿಯಾಗಿ ಮೋಡಗಳು ಮೆರೆಯುತ್ತವೆ. ತನ್ನ ಓಟದ ವೇಗದಲ್ಲೇ ಬದಲಾಗುವ ಕಾಲಮಾನವನ್ನು ಸೂಚ್ಯವಾಗಿ ಮೋಡಗಳು ತೋರಿಸುತ್ತವೆ.
ಬದುಕಿನ ನಶ್ವರತೆಯನ್ನು   ಮೋಡಗಳು    ಸೂಚಿಸುತ್ತವೆ. ನಾವು ಅಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ, ಭಗವಂತನ ಇಚ್ಛೆಯಂತೆ , ನಮ್ಮನ್ನೂ ಸೇರಿದಂತೆ ಜಗತ್ತು ನಡೆಯುತ್ತದೆ ಎಂದು ಮೋಡಗಳು ಸಾರಿ ಸಾರಿ ಹೇಳುತ್ತಿವೆಯೇನೋ ಅನ್ನಿಸುತ್ತಿದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ಬದಲಾವಣೆ ಎಲ್ಲಿದೆ?

ಕರ್ನಾಟಕದಲ್ಲಿ ಮುಂಗಾರು ಸದ್ಯ ದುರ್ಬಲಗೊಂಡಿದ್ದು, ಬಹುತೇಕ ಕಡೆ ಬಿಸಿಲು–ಮೋಡದ ವಾತಾವರಣ ಹಾಗೂ ಅಲ್ಲಲ್ಲಿ…

58 minutes ago

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

2 days ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

2 days ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

2 days ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

3 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

3 days ago