Advertisement
ವಿಶೇಷ ವರದಿಗಳು

ಬರಕ್ಕೆ ನಲುಗಿದ ಸುಳ್ಯ : “ನೀರು ಕುಡಿಯುವ ಮನೆ”ಯಲ್ಲೂ ನೀರಿಲ್ಲ…!

Share

ಸುಳ್ಯ: ಸುಳ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ನಲುಗಿ ಹೋಗಿದೆ. ಪೂರ್ವ ಮುಂಗಾರು ಕೊರತೆ ಹಾಗೂ ಬಿರು ಬಿಸಿಲಿನ ತಾಪಕ್ಕೆ ಜಲಾಶ್ರಯ ಗಳು ಬತ್ತಿ ಹೋಗಿದ್ದು ಎಲ್ಲೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಹಿಂದೆಂದೂ ಬತ್ತದೇ ಇದ್ದ ನೀರಿನ ಮೂಲಗಳು ಬತ್ತುತ್ತಿದ್ದು ಜನತೆ ಆಕಾಶದತ್ತ ನೋಡುವಂತಾಗಿದೆ.

ಸುಳ್ಯದ ಬೂಡು ಪರಿಸರದ ಗಣೇಶ್ ಆಚಾರ್ಯ ಎಂಬವರ ಮನೆಯ ಸನಿಹ ಸುರಂಗ ಬಾವಿಯೊಂದಿದೆ. ಈ ಬಾವಿ ಕಳೆದ ಎಂಭತ್ತ್ತು ವರ್ಷಗಳಿಂದ ಪರಿಸರದ ಜನರ ದಾಹ ತೀರಿಸುತ್ತಿದೆ. ದಾರಿಹೋಕರು ಹಾಗೂ ಸುತ್ತಲಿನ ಪರಿಸರದ ಜನ ಕುಡಿಯುವ ನೀರಿಗಾಗಿ ಇದೇ ಸುರಂಗ ಬಾವಿಯನ್ನು ಆಶ್ರಯಿಸಿದ್ದರು. ಸ್ಥಳೀಯರೆಲ್ಲರಿಗೂ ನೀರನ್ನು ಪೂರೈಸುವ ಈ ಮನೆಯನ್ನು ‘ನೀರು ಕುಡಿಯುವ ಮನೆ‘ ಎಂದೇ ಕರೆಯುತ್ತಿದ್ದರು. ಗಣೇಶ್ ಆಚಾರ್ಯರ ತಂದೆ ಮಂಜುನಾಥ ಆಚಾರ್ಯ ಹಾಗೂ ಅಜ್ಜ ರಾಮಯ್ಯ ಆಚಾರ್ಯರು ಈ ಸುರಂಗ ಬಾವಿಯನ್ನು 80 ವರ್ಷಗಳ ಹಿಂದೆ ನಿರ್ಮಿಸಿದ್ದು ಈ ಬಾವಿ ಅಲ್ಲಿಂದ ಇಲ್ಲಿಯವರೆಗೆ ಹಲವರ ನೀರು ದಾಹವನ್ನು ತೀರಿಸಿದೆ. ಬಾಯಾರಿ ಬಂದವರಿಗೆ ದಣಿವಾರಿಸಿ ಕೊಳ್ಳಲು ನೀರು ನೀಡುತ್ತಿದ್ದ ಈ ಬಾವಿಯಲ್ಲಿ ಈ ಬಾರಿಯ ಬಿಸಿಲು ಹಾಗೂ ಬರದಿಂದಾಗಿ ಒಂದು ಹನಿಯೂ ನೀರು ಲಭ್ಯವಿಲ್ಲ.

ಕಟ್ಟಡ ನಿರ್ಮಾಣಕ್ಕೂ ಬಳಕೆ: ಬೂಡುವಿನಲ್ಲಿ ನಿರ್ಮಾಣಗೊಂಡ ಕೆ.ಇ.ಬಿ ಸಿಬ್ಬಂದಿಗಳ ವಸತಿ ಗೃಹದ ನಿರ್ಮಾಣಕ್ಕೂ ಈ ಬಾವಿ ನೀರನ್ನು ಬಳಸಲಾಗಿತ್ತು. ಅಲ್ಲದೇ ಸ್ಥಳೀಯ ಪರಿಸರದಲ್ಲಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗಿತ್ತು. ಯಥೇಚ್ಛವಾಗಿ ದೊರೆಯುತ್ತಿದ್ದ ನೀರು ಇದೀಗ ಬತ್ತಿರುವುದು ಸ್ಥಳೀಯ ನಿವಾಸಿಗಳಿಗೆ ಬೇಸರ ಜೊತೆಗೆ ಆಶ್ಚರ್ಯವನ್ನು ಉಂಟುಮಾಡಿದೆ.

ನೀರು ಕೇಳಿದಾಗ ಇಲ್ಲ ಎನ್ನಬಾರದು: ಬಾವಿ ತೊಡಿದ ದಿ|ರಾಮಯ್ಯ ಆಚಾರ್ಯರವರು ಮಕ್ಕಳಿಗೆ ಯಾರೂ ನೀರು ಕೇಳಿದರೂ ಇಲ್ಲ ಎನ್ನಬಾರದು ಎಂದು ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರೊಬ್ಬರಿಗೂ ನೀರು ಇಲ್ಲ ಎಂದು ಹೇಳದೆ ಬೇಕಾದಷ್ಟು ನೀರನ್ನು ಕೊಡಲಾ
ಗಿತ್ತು. ಆದರೆ ಈಗ ಬಾವಿಯಲ್ಲಿ ನೀರು ಬತ್ತಿರುವುದರಿಂದ ನೀರು ಇಲ್ಲ ಎಂದು ಹೇಳಲು ಸಂಕಟವಾಗುತ್ತಿದೆ ಎನ್ನುತ್ತಾರೆ ಗಣೇಶ್ ಆಚಾರ್ಯ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

24 minutes ago

ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…

34 minutes ago

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

8 hours ago

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

9 hours ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

18 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

19 hours ago