Advertisement
ವಿಶೇಷ ವರದಿಗಳು

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

Share

ಹಣ್ಣು ಎಂದಾಕ್ಷಣ ಇದೀಗ ವಿದೇಶಿ ಹಣ್ಣುಗಳದ್ದೇ ಹವಾ ನಮ್ಮ ಕಾಡು ಹಣ್ಣುಗಳ ಔಷಧೀಯ ಗುಣಗಳ ಮುಂದೆ ಇದೇನು ಅಲ್ಲ ಮುಂದೊಂದು ದಿನ ಇವುಗಳ ಬಗ್ಗೆಯೂ ಆಂದೋಲನ ಮಾಡಬೇಕಾಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಹಣ್ಣುಗಳ ಒಳಗೆ ಏನು ಅಡಗಿದೆ….?  ನಾವು ತಿನ್ನುವ ಹಣ್ಣುಗಳು ನಿಜವಾಗಿಯೂ ಸುರಕ್ಷಿತವೇ….? ಅಂದು ಹಣ್ಣು ಅದಾಗಿಯೇ ಹಣ್ಣಾಗುತ್ತಿತ್ತು ಇಂದು ಹೊಟ್ಟೆಯಲ್ಲಿ ಹುಣ್ಣಾಗುತ್ತಿವೆ ಇದೊಂದು ಕಾಡು ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು ಗೊತ್ತಿದ್ದರೆ ಹಣ್ಣಿನ ಹೆಸರಿನ ಜೊತೆ ತಿಂದ ಅನುಭವವನ್ನು ಹಂಚಿಕೊಳ್ಳಿ.

ಬದುಕಿನಲ್ಲಿ ಎಲ್ಲಾ ಯಶಸ್ಸಿಗೂ ಮೂರು ಔಷಧಿಗಳಿವೆ ಒಂದು ವಿದ್ಯೆ ಇನ್ನೊಂದು ದುಡಿಮೆ ಮತ್ತೊಂದು ತಾಳ್ಮೆ ಜೀವನದ ಖುಷಿಯನ್ನು ನಾವು ನಮ್ಮಲ್ಲೇ ಕಂಡುಕೊಳ್ಳಬೇಕು ಇದು ಇನ್ನೆಲ್ಲೋ ಸಿಗುವುದಿಲ್ಲ ಯಾವಾಗಲೂ ಎಲ್ಲಾ ನೋವನ್ನು ದೇವರು ನಮಗೆ ಯಾಕೆ ದುಃಖ ನೀಡುತ್ತಾನೆ ಎಂದು ನಿಜ ಹೇಳಬೇಕೆಂದರೆ ಒಂದು ವಸ್ತುವಿನ ಖುಷಿಯ ಕೀಲಿ ಕೈ ಜೀವನ ನಮ್ಮಲ್ಲೇ ಇರಬೇಕು.

ಇದು ಹುಳಿ ಹಣ್ಣು ಇದರಲ್ಲಿ ಸಿ – ವಿಟಮಿನ್ ಹೇರಳವಾಗಿದ್ದು ಕಣ್ಣಿನ ದೃಷ್ಟಿ ಬಗ್ಗೆ ಉತ್ತಮ ಔಷಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವು ಫೈಬರ್ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಅತ್ಯಂತ ಹೆಚ್ಚಿಸುತ್ತದೆ.

ಚಿಕ್ಕ ಮಕ್ಕಳಿಗಂತೂ ಅತ್ಯಂತ ರುಚಿಕರ ಹಣ್ಣು, ರಸ್ತೆ ಬದಿ ಶಾಲಾ ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಈ ಗಿಡಗಳನ್ನು ನೆಟ್ಟು ಹಣ್ಣಿನ ಗೊಂಚಲು ಗೊಂಚಲು ಮರ ತುಂಬಾ ಸೆರಗು ಹೊದ್ದಂತೆ ಕಾಣುವುದೇ ಚಂದ ಒಂದು ಗೊಂಚನಲ್ಲಿ 25 ರಿಂದ 50 ಹಣ್ಣುಗಳನ್ನು ಹೊಂದಿದ್ದು ಅತ್ಯಾಕರ್ಷಕ ಬಣ್ಣವೂ ಕೂಡ ಆಗಿದೆ ಇದು ಬೀಮ್ ಪುರುಳಿ ಅಂಜೂರ ಅತ್ತಿ ಹಣ್ಣುಗಳಂತೆ ಇದೊಂದು ವಿಧದ ಕಾಡು ಹಣ್ಣು, ಕಡಿಮೆ ಕ್ಯಾಲರಿ ಹೊಂದಿದ್ದು ತೂಕವನ್ನು ಇಳಿಸಲು ಸಹಾಯವಾಗುತ್ತದೆ ಅಲ್ಲದೆ ಸಾರು, ಉಪ್ಪಿನಕಾಯಿ ಮುಂತಾದ ಆಹಾರಗಳನ್ನು ತಯಾರಿಸಲಾಗುತ್ತಿದ್ದು ಪೊಟ್ಯಾಶಿಯಂ ಚೆನ್ನಾಗಿ ಕೊಟ್ಟಾಗ ಇನ್ನಷ್ಟು ಸಿಹಿ ಗುಣವನ್ನು ಹೊಂದುತ್ತದೆ.

ಈ ಅಪರೂಪದ ಕಾಡು ಹಣ್ಣನ್ನು ಕನ್ನಡದಲ್ಲಿ ಕೋಳಿಜುಟ್ಟು ಹಣ್ಣು (Koli juttu hannu), ಕೋಳಿ ಕುಕ್ಕೆ (Koli Kukke) ಅಥವಾ ಮೈಂದಪುಳಿ (Mayndapuli) ಎಂದು ಕರೆಯಲಾಗುತ್ತದೆ.ಇದರ ವೈಜ್ಞಾನಿಕ ಹೆಸರು Baccaurea courtallensis. ಮಲಯಾಳಂನಲ್ಲಿ ಇದನ್ನು ಮೂಟ್ಟಿಪಳಂ (Mootipazham) ಅಥವಾ ಮೂಟ್ಟಿಪುಳಿ ಎಂದು ಕರೆಯಲಾಗುತ್ತದೆ. ಇದು ಭಾರತದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟವಾದ ಹಣ್ಣಿನ ತಳಿಯಾಗಿದೆ. ಈ ಮರದ ವಿಶೇಷತೆಯೆಂದರೆ ಇದರ ಹಣ್ಣುಗಳು ಕೊಂಬೆಗಳಲ್ಲಲ್ಲದೆ, ನೇರವಾಗಿ ಮರದ ಕಾಂಡದ ಬುಡದಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುತ್ತವೆ.

ಪಶ್ಚಿಮ ಘಟ್ಟಗಳ ಅಪರೂಪದ ಕಾಡು ಹಣ್ಣಿನ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಬೆಳೆಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪ ಬಿಳಿನೆಲೆಯ ವಾಸ್ತು ತಜ್ಞ ಎಸ್ ಪ್ರಸಾದ್ ಮುನಿಯಂಗಳವರ ತೋಟದಲ್ಲಿ ನೂರಕ್ಕೂ ಮಿಕ್ಕಿ ಹಣ್ಣಿನ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದರು. ಹೆಚ್ಚಿನ ಆರೈಕೆ ಬೇಡದೆ ಇದ್ದು ಚೆನ್ನಾಗಿ ಬೆಳೆದು ಇದೀಗ ಫಲ ಭರಿತ ಹಣ್ಣುಗಳು ಜೂನ್ ಜುಲೈ ತಿಂಗಳಲ್ಲಿ ಕಾಣಿಸಿಕೊಂಡಿದೆ .ನೇರಳೆ ಹಣ್ಣಿನಂತೆ ಇದನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣು ಇದಾಗಿದ್ದು.

ಕೋಳಿ ಕುಕ್ಕೆ ಮರದ ವೈಶಿಷ್ಟ್ಯವೇ ಬೇರೆ! ಸಸ್ಯವಿಜ್ಞಾನದಲ್ಲಿ ‘ಕೌಲಿಫ್ಲೋರಸ್’ (Cauliflorous) ಎಂದು ಕರೆಯಲಾಗುವ ಈ ಪ್ರಕ್ರಿಯೆಯಲ್ಲಿ, ಹಣ್ಣುಗಳು ಕೊಂಬೆಗಳಲ್ಲಲ್ಲದೆ ನೇರವಾಗಿ ಮರದ ಪ್ರಮುಖ ಕಾಂಡದ ಮೇಲೆಯೇ ಬಿಡುತ್ತವೆ.

ಮಧ್ಯಮ ಗಾತ್ರದಲ್ಲಿ ಅಂದರೆ ಸುಮಾರು 10 ರಿಂದ 18 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುವ ಈ ಮರದ ಬೂದು ಬಣ್ಣದ ತೊಗಟೆಯ ಮೇಲೆ ಸಣ್ಣ ಸಣ್ಣ ಗಂಟುಗಳಂತಹ ರಚನೆಗಳಿರುತ್ತವೆ. ಆಗಸ್ಟ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಈ ಮರಗಳು ಹೂ ಬಿಡಲು ಆರಂಭಿಸುತ್ತವೆ. ಮೊದಲು ರಕ್ತಗೆಂಪು ಬಣ್ಣದ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಕಾಂಡದಿಂದ ಹೊರಬರುತ್ತವೆ. ಗಂಡು ಹೂಗೊಂಚಲುಗಳು ಇಡೀ ಕಾಂಡದಾದ್ಯಂತ ಹರಡಿಕೊಂಡಿದ್ದರೆ, ಹೆಣ್ಣು ಹೂಗೊಂಚಲುಗಳು ಹೆಚ್ಚಾಗಿ ಕಾಂಡದ ಬುಡಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ದಟ್ಟವಾದ ಕ್ರಿಮ್ಸನ್ (ಗಾಢ ಕೆಂಪು) ಬಣ್ಣದ ದೊಡ್ಡ ಹಣ್ಣಿನ ಗೊಂಚಲುಗಳಾಗಿ ಬದಲಾಗಿ, ಇಡೀ ಮರದ ಬುಡವನ್ನು ಕೆಂಪು ಹಾಸಿನಂತೆ ಕಂಗೊಳಿಸುವಂತೆ ಮಾಡುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ವನ್ಯಜೀವಿಗಳ ಹಸಿವು ನೀಗಿಸುವ ಮರ :  ಕೋಳಿ ಕುಕ್ಕೆ ಹಣ್ಣುಗಳು ಕೇವಲ ನೋಡಲು ಸುಂದರ ಮಾತ್ರವಲ್ಲ, ಕಾಡಿನ ಜೀವಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಚಿಗುರೆಲೆಗಳು ಮತ್ತು ಹಣ್ಣುಗಳು ಕಾಡಿನ ಅನೇಕ ವನ್ಯಜೀವಿಗಳಿಗೆ ಪ್ರಮುಖ ಆಹಾರ. ಪಶ್ಚಿಮ ಘಟ್ಟಗಳ ವಿಶಿಷ್ಟ ಪ್ರಾಣಿಗಳಾದ ನೀಲಗಿರಿ ಲಂಗೂರ್‌ಗಳು, ಸಿಂಹಬಾಲದ ಕೋತಿಗಳು (Lion-tailed Macaques) ಮತ್ತು ಕಾಡಾನೆಗಳು ಈ ಮಾಗಿದ ಹಣ್ಣುಗಳನ್ನು ಅತ್ಯಂತ ಇಷ್ಟಪಟ್ಟು ತಿನ್ನುತ್ತವೆ.

ಹುಳಿ-ಸಿಹಿಯ ರುಚಿ ಮತ್ತು ವೈದ್ಯಕೀಯ ಗುಣ :  ಮಾನವರಿಗೂ ಈ ಹಣ್ಣು ತಿನ್ನಲು ಯೋಗ್ಯವಾಗಿದೆ. ಇದರ ಗಟ್ಟಿಯಾದ ಕೆಂಪು ಸಿಪ್ಪೆಯನ್ನು ಸುಲಿದರೆ ಒಳಗೆ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ರಸಭರಿತವಾದ ತಿರುಳು (Pulp) ಸಿಗುತ್ತದೆ. ಇದು ಹುಳಿ ಮತ್ತು ಸಿಹಿಯ ಅದ್ಭುತ ಮಿಶ್ರಣದ ರುಚಿ ಹೊಂದಿರುತ್ತದೆ. ಸ್ಥಳೀಯ ಗಿರಿಜನರು ಹಾಗೂ ಮಲೆನಾಡಿನ ಜನರು ಇದನ್ನು ತಾಜಾ ಹಣ್ಣಾಗಿ ತಿನ್ನುತ್ತಾರೆ. ಇನ್ನು ಪೂರ್ತಿಯಾಗಿ ಹಣ್ಣಾಗದ ಕಾಯಿಗಳು ತೀವ್ರವಾದ ಹುಳಿ ಹೊಂದಿರುವುದರಿಂದ ಇವುಗಳಿಂದ ಸಾಂಪ್ರದಾಯಿಕ ಉಪ್ಪಿನಕಾಯಿ, ಚಟ್ನಿ ಹಾಗೂ ತಂಪು ಪಾನೀಯಗಳನ್ನು (Squash) ಸಿದ್ಧಪಡಿಸಲಾಗುತ್ತದೆ.

ಸ್ಥಳೀಯ ಬುಡಕಟ್ಟು ವೈದ್ಯ ಪದ್ಧತಿಯಲ್ಲಿ ಈ ಮರಕ್ಕೆ ವಿಶೇಷ ಸ್ಥಾನವಿದೆ. ಇದರ ತಾಜಾ ತಿರುಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಮರದ ಬೂದು ಬಣ್ಣದ ತೊಗಟೆಯ ಕಷಾಯವನ್ನು ಚರ್ಮದ ಗಾಯಗಳನ್ನು ಬೇಗನೆ ಗುಣಪಡಿಸಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದರ ಬೇರುಗಳನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (ಡಯಾಬಿಟಿಸ್) ನೈಸರ್ಗಿಕವಾಗಿ ನಿಯಂತ್ರಿಸಲು ಬಳಸುವ ಉಲ್ಲೇಖಗಳೂ ಇವೆ.

ಬರಹ :
ಕುಮಾರ್ ಪೆರ್ನಾಜೆ
, ಮೊ: 9480240643

Koli Juttu (Baccaurea courtallensis) is a rare wild fruit endemic to the Western Ghats. Unlike most fruit trees, it bears clusters of crimson fruits directly on its trunk. Rich in vitamin C and dietary fibre, the fruit is valued for its tangy-sweet taste and traditional medicinal uses. With habitat loss threatening its survival, progressive farmers are now cultivating it outside forests, highlighting the need for conservation of this unique native species.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

6 hours ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

7 hours ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

7 hours ago

ರಾಜ್ಯಾದ್ಯಂತ ಆಹಾರ ಸುರಕ್ಷತೆ ಪರಿಶೀಲನೆಗೆ ದಾಳಿ ಮುಂದುವರಿಕೆ : ಉಲ್ಲಂಘನೆಗೆ ಕ್ಷಮೆಯಿಲ್ಲ ಎಂದ ಆರೋಗ್ಯ ಸಚಿವ

ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್‌, ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…

7 hours ago

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

17 hours ago

ಕಾಡು ಪ್ರಾಣಿಗಳ ಹಾವಳಿ: ಕೃಷಿಕರು ಪಾಠ ಕಲಿಯದಿದ್ದರೆ ಕೃಷಿ ಭೂಮಿಯೇ ಉಳಿಯದು

ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…

18 hours ago