Advertisement
ಸುದ್ದಿಗಳು

ಬಳ್ಪ ಗ್ರಾಮದಲ್ಲಿ “ನಿಜವಾದ ಆದರ್ಶ” ಮೆರೆದ ಕೃಷಿಕ ಕಿಟ್ಟಣ್ಣ ಪೂಜಾರಿ…

Share

ಬಳ್ಪ: ಕಳೆದ 5 ವರ್ಷಗಳಿಂದ ಆದರ್ಶ ಗ್ರಾಮದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಬಳ್ಪ ಗ್ರಾಮದಲ್ಲಿ ಇದೀಗ ನಿಜವಾದ ಆದರ್ಶ ವ್ಯಕ್ತಿ ಕಂಡುಬಂದಿದ್ದಾರೆ. ಅವರು ಬೀದಿಗುಡ್ಡೆ ಕಾಂಜಿ ಪ್ರದೇಶದ ಕಿಟ್ಟಣ್ಣ ಪೂಜಾರಿ.

ಬಳ್ಪ ಆದರ್ಶ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ರೋಗಿಯೊಬ್ಬರನ್ನು ಹೊತ್ತೊಯ್ದು ದು:ಖದ ಸಂಗತಿ ನಡೆದಿತ್ತು. ಜಿಲ್ಲೆಯಲ್ಲೂ ಇಂತಹ ಸ್ಥಿತಿ ಇದೆಯೇ ಎಂಬ ಪ್ರಶ್ನೆ ಮೂಡಿತ್ತು. ಅದರಲ್ಲೂ ಆದರ್ಶ ಗ್ರಾಮದಲ್ಲಿ  ರಸ್ತೆ ಸರಿ ಇಲ್ಲ ಎನ್ನುವ ಸುದ್ದಿ ಸದಾ ಹರಿದಾಡುತ್ತಿತ್ತು. ಆದರೆ ಆರಂಭದಲ್ಲಿ ಆದರ್ಶ ಗ್ರಾಮದ ಪರಿಕಲ್ಪನೆ ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆ ಅಲ್ಲ, ಜನರ ಜೀವನಮಟ್ಟ ಸುಧಾರಣೆ ಎಂಬ ಸಂಗತಿ ಹೇಳಿರಲಿಲ್ಲ. ಹೀಗಾಗಿ ಜನರೆಲ್ಲಾ ಬಳ್ಪ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ 5 ವರ್ಷದ ಬಳಿಕವೂ ಸಮಗ್ರ ಅಭಿವೃದ್ಧಿಯಾಗದೇ ಇದ್ದಾಗ ಟೀಕೆಗಳು, ಅಸಹನೆಗಳು ಬರಲಾರಂಭಿಸಿದವು. ಅದು ರಾಜಕೀಯವಾಗಿಯೂ ಕಂಡಿತು. ಕೆಲವರು ಅಭಿವೃದ್ಧಿಯಾಗಿದೆ ಎಂದರೆ ಇನ್ನೂ ಕೆಲವರು ಆಗಿಲ್ಲ ಎಂದರು. ಹೀಗೇ ಚರ್ಚೆಯಾಗುತ್ತಿರುವಾಗ ರೋಗಿಯೊಬ್ಬರನ್ನು ಹೊತ್ತು ಅಂಬೆಲೆನ್ಸ್ ಗೆ ಕರೆತಂದ ಸಂಗತಿ ಭಾರೀ ಚರ್ಚೆಗೆ ಕಾರಣವಾಯಿತು. ಅದಕ್ಕೆ ಪ್ರಮುಖ ಕಾರಣ ರಸ್ತೆ ಸಮಸ್ಯೆ. ಇಲ್ಲಿ ರಸ್ತೆ ಸಮಸ್ಯೆ ನಿವಾರಣೆ ಹೇಗೆ ಎಂಬ ಚರ್ಚೆ ನಡೆಯುತ್ತಿತ್ತು.

ಇಲ್ಲಿ  ಬೀದಿಗುಡ್ಡೆಯಿಂದ ತ್ರಿಶೂಲಿನೀ ದೇವಸ್ಥಾನದ ತನಕ‌ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಪಡ್ಕಿಲ್ಲಾಯ- ಪಾನ-ಕಾಂಜಿ ಪ್ರದೇಶಕ್ಕೆ ರಸ್ತೆ ಇಲ್ಲ. ಮುಂದಕ್ಕೆ ರಸ್ತೆ ನಿರ್ಮಿಸಲು ಖಾಸಗಿ ಜಾಗ ಬರುತ್ತದೆ ಹೀಗಾಗಿ ಸಮಸ್ಯೆ ಇತ್ತು. ಇದೀಗ ಪಟ್ಟಾ ಜಾಗದ ವ್ಯಕ್ತಿ ಕಿಟ್ಟಣ್ಣ ಎಂಬವರು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ.  40 ಸೆಂಟ್ಸ್ ಜಾಗ ಇರುವ ಕಿಟ್ಟಣ್ಣ ಅವರು ಮಾನವೀಯ ನೆಲೆಯಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ತಮ್ಮ ತೋಟದ ಕಂಗು ಕಡಿದು ಸಹಕರಿಸಲು ಅವರು ಮುಂದಾಗಿದ್ದಾರೆ. ಈ ಮೂಲಕ ನಿಜವಾದ ಆದರ್ಶ ವ್ಯಕ್ತಿಯಾಗಿದ್ದಾರೆ.

ಮುಂದೆ ಗ್ರಾಮದ ಪ್ರಮುಖರು ಕಿಟ್ಟಣ್ಣ ಪೂಜಾರಿ ಅವರ ಸಮ್ಮುಖದಲ್ಲಿ ಮುಂದಿನ ಕಾರ್ಯಯೋಜನೆ, ಪರಿಹಾರ ಮೊತ್ತ ಇತ್ಯಾದಿ ಕುರಿತು ಸಮಾಲೋಚನಾ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಆದರ್ಶ ಗ್ರಾಮದ ಆದರ್ಶ ವ್ಯಕ್ತಿಯಾಗಿ ಕಂಡಿದ್ದಾರೆ ಕಿಟ್ಟಣ್ಣ .

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…

1 hour ago

ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ

ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…

2 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…

4 hours ago

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

9 hours ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

9 hours ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

20 hours ago