Advertisement
ಸುದ್ದಿಗಳು

ಬಳ್ಪ ಗ್ರಾಮದಲ್ಲಿ “ನಿಜವಾದ ಆದರ್ಶ” ಮೆರೆದ ಕೃಷಿಕ ಕಿಟ್ಟಣ್ಣ ಪೂಜಾರಿ…

Share

ಬಳ್ಪ: ಕಳೆದ 5 ವರ್ಷಗಳಿಂದ ಆದರ್ಶ ಗ್ರಾಮದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಬಳ್ಪ ಗ್ರಾಮದಲ್ಲಿ ಇದೀಗ ನಿಜವಾದ ಆದರ್ಶ ವ್ಯಕ್ತಿ ಕಂಡುಬಂದಿದ್ದಾರೆ. ಅವರು ಬೀದಿಗುಡ್ಡೆ ಕಾಂಜಿ ಪ್ರದೇಶದ ಕಿಟ್ಟಣ್ಣ ಪೂಜಾರಿ.

ಬಳ್ಪ ಆದರ್ಶ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ರೋಗಿಯೊಬ್ಬರನ್ನು ಹೊತ್ತೊಯ್ದು ದು:ಖದ ಸಂಗತಿ ನಡೆದಿತ್ತು. ಜಿಲ್ಲೆಯಲ್ಲೂ ಇಂತಹ ಸ್ಥಿತಿ ಇದೆಯೇ ಎಂಬ ಪ್ರಶ್ನೆ ಮೂಡಿತ್ತು. ಅದರಲ್ಲೂ ಆದರ್ಶ ಗ್ರಾಮದಲ್ಲಿ  ರಸ್ತೆ ಸರಿ ಇಲ್ಲ ಎನ್ನುವ ಸುದ್ದಿ ಸದಾ ಹರಿದಾಡುತ್ತಿತ್ತು. ಆದರೆ ಆರಂಭದಲ್ಲಿ ಆದರ್ಶ ಗ್ರಾಮದ ಪರಿಕಲ್ಪನೆ ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆ ಅಲ್ಲ, ಜನರ ಜೀವನಮಟ್ಟ ಸುಧಾರಣೆ ಎಂಬ ಸಂಗತಿ ಹೇಳಿರಲಿಲ್ಲ. ಹೀಗಾಗಿ ಜನರೆಲ್ಲಾ ಬಳ್ಪ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ 5 ವರ್ಷದ ಬಳಿಕವೂ ಸಮಗ್ರ ಅಭಿವೃದ್ಧಿಯಾಗದೇ ಇದ್ದಾಗ ಟೀಕೆಗಳು, ಅಸಹನೆಗಳು ಬರಲಾರಂಭಿಸಿದವು. ಅದು ರಾಜಕೀಯವಾಗಿಯೂ ಕಂಡಿತು. ಕೆಲವರು ಅಭಿವೃದ್ಧಿಯಾಗಿದೆ ಎಂದರೆ ಇನ್ನೂ ಕೆಲವರು ಆಗಿಲ್ಲ ಎಂದರು. ಹೀಗೇ ಚರ್ಚೆಯಾಗುತ್ತಿರುವಾಗ ರೋಗಿಯೊಬ್ಬರನ್ನು ಹೊತ್ತು ಅಂಬೆಲೆನ್ಸ್ ಗೆ ಕರೆತಂದ ಸಂಗತಿ ಭಾರೀ ಚರ್ಚೆಗೆ ಕಾರಣವಾಯಿತು. ಅದಕ್ಕೆ ಪ್ರಮುಖ ಕಾರಣ ರಸ್ತೆ ಸಮಸ್ಯೆ. ಇಲ್ಲಿ ರಸ್ತೆ ಸಮಸ್ಯೆ ನಿವಾರಣೆ ಹೇಗೆ ಎಂಬ ಚರ್ಚೆ ನಡೆಯುತ್ತಿತ್ತು.

ಇಲ್ಲಿ  ಬೀದಿಗುಡ್ಡೆಯಿಂದ ತ್ರಿಶೂಲಿನೀ ದೇವಸ್ಥಾನದ ತನಕ‌ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಪಡ್ಕಿಲ್ಲಾಯ- ಪಾನ-ಕಾಂಜಿ ಪ್ರದೇಶಕ್ಕೆ ರಸ್ತೆ ಇಲ್ಲ. ಮುಂದಕ್ಕೆ ರಸ್ತೆ ನಿರ್ಮಿಸಲು ಖಾಸಗಿ ಜಾಗ ಬರುತ್ತದೆ ಹೀಗಾಗಿ ಸಮಸ್ಯೆ ಇತ್ತು. ಇದೀಗ ಪಟ್ಟಾ ಜಾಗದ ವ್ಯಕ್ತಿ ಕಿಟ್ಟಣ್ಣ ಎಂಬವರು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ.  40 ಸೆಂಟ್ಸ್ ಜಾಗ ಇರುವ ಕಿಟ್ಟಣ್ಣ ಅವರು ಮಾನವೀಯ ನೆಲೆಯಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ತಮ್ಮ ತೋಟದ ಕಂಗು ಕಡಿದು ಸಹಕರಿಸಲು ಅವರು ಮುಂದಾಗಿದ್ದಾರೆ. ಈ ಮೂಲಕ ನಿಜವಾದ ಆದರ್ಶ ವ್ಯಕ್ತಿಯಾಗಿದ್ದಾರೆ.

ಮುಂದೆ ಗ್ರಾಮದ ಪ್ರಮುಖರು ಕಿಟ್ಟಣ್ಣ ಪೂಜಾರಿ ಅವರ ಸಮ್ಮುಖದಲ್ಲಿ ಮುಂದಿನ ಕಾರ್ಯಯೋಜನೆ, ಪರಿಹಾರ ಮೊತ್ತ ಇತ್ಯಾದಿ ಕುರಿತು ಸಮಾಲೋಚನಾ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಆದರ್ಶ ಗ್ರಾಮದ ಆದರ್ಶ ವ್ಯಕ್ತಿಯಾಗಿ ಕಂಡಿದ್ದಾರೆ ಕಿಟ್ಟಣ್ಣ .

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತುಮಕೂರಿನಲ್ಲಿ ಭರ್ಜರಿ ಕೈಗಾರಿಕಾ ಹಬ್ – ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗದ ಗುರಿ

ತುಮಕೂರು ಕೈಗಾರಿಕಾ ನೋಡ್‌ಗೆ 1,736 ಎಕರೆ ಮೀಸಲು. ₹7,000 ಕೋಟಿ ಹೂಡಿಕೆ, 88…

6 hours ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಆ.20 ಮತ್ತು 21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆ.20…

6 hours ago

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

21 hours ago

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

1 day ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

1 day ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

1 day ago