Advertisement
ಕಲೆ-ಸಂಸ್ಕೃತಿ

ಬಾಳಿಲ ಪ್ರಶಸ್ತಿಗೆ ಪ್ರೊ.ವಿ.ಬಿ ಅರ್ತಿಕಜೆ ಆಯ್ಕೆ

Share
ಪುತ್ತೂರು: ಹವ್ಯಕ ಭಾಷೆ ಹಾಗೂ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಕೊಡಮಾಡುವ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಗೆ ಈ ಬಾರಿ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಅವರು ಆಯ್ಕೆಯಾಗಿದ್ದಾರೆ.
ಹವಿ‌ ಗನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪ್ರೊ.ಅರ್ತಿಕಜೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇ 5 ರಂದು ಸುಳ್ಯ ತಾಲ್ಲೂಕಿನ ಕಾವಿನ ಬಳಿ ಇರುವ ಜನಮಂಗಲ ಸಭಾ‌ಭವನದಲ್ಲಿ ನಡೆಯುವ ಸಭಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬಹುಮಾನ ವಿತರಣೆ: ಪ್ರತಿಷ್ಠಾನವು ಪ್ರಸಕ್ತ ವರ್ಷ ಹಮ್ಮಿಕೊಂಡಿದ್ದ ವಿಷು ವಿಶೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ಅಂದೇ ನಡೆಯಲಿದೆ.
ಪುಸ್ತಕ ಬಿಡುಗಡೆ: ಕುಮಾರಸ್ವಾಮಿ ತೆಕ್ಕುಂಜ ಅವರು ಬರೆದಿರುವ ಹವ್ಯಕ ಕೃತಿ ‘ಪಾರುಪತಿಯ ಪಾರುಪತ್ಯ’, ರಘುರಾಮ ಮುಳಿಯ ಅವರ ಛಂಧೋಬದ್ಧ ಹವ್ಯಕ ಕವನ ಸಂಕಲನ ‘ಪೆರ್ಲದಲ್ಲೊಂದು ಪೀಕ್ಲಾಟ’ ಮತ್ತು ಶೀಲಾಲಕ್ಷ್ಮಿ ವರ್ಮುಡಿ ಅವರು ಬರೆದಿರುವ ‘ಅಬ್ಬೇ… ಎನಗೆ ಅರುಂಧತಿಯ ಕಂಡಿದೇ ಇಲ್ಲೆ’ ಎಂಬ  ಹವ್ಯಕ ಕಾದಂಬರಿ ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಇದೇ ವೇಳೆ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಸನ್ಮಾನಗೊಳ್ಳಲಿರುವವರು,  ಶಾಮಣ್ಣ (ಅಧ್ಯಾಪನ), ರಾಮ ಜೋಯಿಸ ಬೆಳ್ಳಾರೆ (ಯಕ್ಷಗಾನ ಕಲೋಪಾಸನೆ) ಮರಿಮನೆ ಹೆಚ್‌.ನಾರಾಯಣ ಭಟ್‌ (ಪಾಕಶಾಸ್ತ್ರ), ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಶ್ರೀಕೃಷ್ಣ ಕಡಪ್ಪು, ಸ್ವಸ್ತಿಕ್‌ ಮತ್ತು ಸಾತ್ವಿಕಾ.
ಮೇ 5 ರಂದು ಮಧ್ಯಾಹ್ನ 2 ಗಂಟೆಯ ನಂತರ ಕಾರ್ಯಕ್ರಮ ನಡೆಯಲಿದ್ದು 3.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಜಿಲ್ಲಾ ಸೆಷನ್ಸ್‌ ನ್ಯಾಯಧೀಶರಾದ ಮನಮೋಹನ ಬನಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕರು ಮತ್ತು ಸಂಚಾಲಕರಾಗಿರುವ ಚಂದ್ರಶೇಖರ ದಾಮ್ಲೆ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಚಿಂತಕ ಪೂರ್ಣಾತ್ಮರಾಮ ಅವರು ದಿಕ್ಸೂಚಿ ಭಾಷಣ ಮಾಡುವರು. ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್‌ ಎಳ್ಯಡ್ಕ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ, ಈಶ್ವರಮಂಗಳ ಪ್ರಾಂತ ಹವ್ಯಕ ಮಹಾಸಭಾದ ಅಧ್ಯಕ್ಷ ಶಿವಪ್ರಸಾದ್‌ ಪಟ್ಟೆ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮ:  ಮಧ್ಯಾಹ್ನ 2ರಿಂದ 3ರವರೆಗೆ ದುರ್ಗಾಪರಮೇಶ್ವರಿ ಕುಕ್ಕಿಲ ಮತ್ತು ಶ್ರೀಕೃಷ್ಣ ಭಟ್‌ ಸುಣ್ಣಂಗುಳಿ ಅವರು ‘ಯಕ್ಷಗಾನಾಮೃತ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.  ಮಧ್ಯಾಹ್ನ 3ರಿಂದ 3.30ರ‌ವರೆಗೆ ಹವ್ಯಕ ಭಾಷೆ ಆಶು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. 5.30ರಿಂದ ಸುಬ್ಬಣಕೋಡಿ ರಾಮಭಟ್‌ ಅವರ ಶಿಷ್ಯವೃಂದ ( ಪೆರ್ಲದ ಪಡ್ರೆ ಚಂದು ಯಕ್ಷಗಾನ ಕೇಂದ್ರ) ‘ರಾಜಾ ದಿಲೀಪ’ ಯಕ್ಷಗಾನ ಪ್ರದರ್ಶನ ನಡೆಸಲಿದ್ದಾರೆ.
ಬಾಳಿಲ ಪ್ರಶಸ್ತಿ ಪುರಸ್ಕೃತ  ಪ್ರೊ. ವಿ ಬಿ ಅರ್ತಿಕಜೆ ಪರಿಚಯ:
ಪ್ರೊ. ಅರ್ತಿಕಜೆ ಅವರು ಪ್ರಾಧ್ಯಾಪಕ, ಪತ್ರಕರ್ತ, ಲೇಖಕ, ಅಂಕಣಕಾರ ಸಾಹಿತಿ, ಕನ್ನಡ ಸಾಹಿತ್ಯ ಸಂಸ್ಕೃತಿ ಪರಿಚಾರಿಕ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 33 ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದವರು. ಸಾವಿರಾರು ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರು.
ಪುತ್ತೂರು ಬಳಿಯ ಈಶ್ವರಮಂಗಲದ ಅರ್ತಿಕಜೆ ಶ್ಯಾಮ ಭಟ್ಟ ಹಾಗೂ ಸಾವಿತ್ರಿ ದಂಪತಿಯ ಪುತ್ರರಾಗಿ 1943 ಜೂನ್ 29 ರಂದು ಜನನ.

ಪ್ರೌಢ ಶಾಲಾದಿನಗಳಲ್ಲಿ ನವೋದಯ ಸುಪ್ರಭಾತ ಮತ್ತು ನವರಸ ಹಸ್ತಪತ್ರಿಕೆಗಳನ್ನು ಆರಂಭಿಸಿದರು. ಎಳವೆಯಲ್ಲೇ ಬರೆಯುವ ಹವ್ಯಾಸ. ಫಿಲೋಮಿನಾ ಕಾಲೇಜಲ್ಲಿ ಬಿ.ಎ. ಪದವಿ. ದ್ವಿತೀಯ ವರ್ಷದಲ್ಲಿ ಕನ್ನಡ ವಿಷಯದಲ್ಲಿ ಮೊದಲ ರ‍್ಯಾಂಕ್ ಮತ್ತು ಸ್ವರ್ಣ ಪದಕವನ್ನು ಪಡೆದರು. ತೃತೀಯ ಬಿ.ಎ.ಯಲ್ಲಿ ಇತಿಹಾಸ ವಿಷಯದಲ್ಲಿ ಮೊದಲ ರ‍್ಯಾಂಕ್ ಮತ್ತು ಸ್ವರ್ಣ ಪದಕವನ್ನು ಗಳಿಸಿಕೊಂಡರು.  ಒಂದು ವರ್ಷದ ಕಾಲ ಪುತ್ತೂರಿನ ಫಿಲೋಮಿನ ಹೈಸ್ಕೂಲಲ್ಲಿ ಅಧ್ಯಾಪಕರಾಗಿ ಸೇವೆಗೈದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪುನ: ಸ್ವರ್ಣ ಪದಕವನ್ನು ಪಡೆದರು. ಪುತೂರಿನ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ಹಂತಹಂತವಾಗಿ ಬಡ್ತಿ ಪಡೆದು ಪ್ರಾಧ್ಯಾಪಕರಾಗಿ ನಿವೃತ್ತಿ.

ಅರ್ತಿಕಜೆ ಅವರು ಸಾಹಿತ್ಯ ಲೋಕಕ್ಕೆ 21 ಕೃತಿಗಳನ್ನು ನೀಡಿದ್ದಾರೆ. ನವರಸ (ಅಪ್ರಕಟಿತ ಕಾವ್ಯ), ನಾದಪೂಜೆ (ಕೀರ್ತನ ಸಂಕಲನ), ಅಪರೂಪ (ಇತಿಹಾಸ  ಚಿತ್ರಲೇಖನಗಳು), ಜೇನಹನಿ (ಹವಿಗನ್ನಡ ಚುಟುಕುಗಳು), ಅನನ್ಯ ಸಾಧಕ (ಫಾ.ಪತ್ರಾವೊ ಅವರ ಜೀವನ ಕುರಿತ ವ್ಯಕ್ತಿ ಚಿತ್ರ), ಪುಸ್ತಕ ಪ್ರೀತಿಗೆ ರೂಪಕ (ಬೋಳಂತಕೋಡಿ ಈಶ್ವರ ಭಟ್ಟ),  ಅಂಕಣ ಸಾಹಿತ್ಯಗಳಾದ ಹೀಗೊಂದು ವೃತ್ತಾಂತ, ಮಾರ್ದನಿ, ಮಾರುದನಿ, ಹೊಸ ಮಾರ್ದನಿ, ಚಿಂತನ ಮುಕುರ, ಸಾವಿರದ ಗಾದೆಗಳು, ನೂರೆಂಟು ಮಾತು (ಆತ್ಮಕಥನ), ಕಥಾ ಸಾಹಿತ್ಯಗಳಾದ ಕಥಾ ರಶ್ಮಿ, ಬಾಳಿಗೆ ಬೆಳಕು, ಕಥನಕಾವ್ಯಗಳಾದ ರಾಮಾಯಣ, ನೀತಿ ಸಾರ, ಹಾಸ್ಯ ವಿಡಂಬನೆ ಸಾಹಿತ್ಯಗಳಾದ ಹಾಸೋಲ್ಲಾಸ, ನಗೆಮಿಂಚು,  ಪತ್ರಕರ್ತರಿಗೆ ಕೈಪಿಡಿ, ಪತ್ರಿಕಾ ರಂಗ ಪ್ರವೇಶ , ಅನುವಾದ ಗ್ರಂಥಗಳು ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ಬಂಟರು, ಅರೇಬಿಯಾದಲ್ಲಿ ಕಳತ್ತೂರು ಮೊದಲಾದವುಗಳು.
ನವಭಾರತ ದೈನಿಕ ಪತ್ರಿಕೆಯಲ್ಲಿ ಹವ್ಯಾಸಿ ವರದಿಗಾರನಾಗಿ, ಹೊಸದಿಗಂತದಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 1982 ರಿಂದ ‘ಪ್ರಜಾವಾಣಿ’ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ತಾಲ್ಲೂಕು ವರದಿಗಾರರಾಗಿ ಸುಮಾರು 25 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರು ದಿ ಕೆನರಾ ಟೈಮ್ಸ್ ವರದಿಗಾರರಾಗಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

4 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

10 hours ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

10 hours ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

21 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

1 day ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

1 day ago