ಬಾಳುಗೋಡು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

August 18, 2019
10:00 AM

ಸುಳ್ಯ: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಾಕ್ಟ್ ಕ್ಲಬ್ ಸುಳ್ಯ ಜಂಟಿಯಾಗಿ ಬಾಳುಗೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಇಲ್ಲಿಗೆ ಅತೀ ಅಗತ್ಯವಿದ್ದ ನೀರಿನ ಟ್ಯಾಂಕ್  ಕೊಡುಗೆಯಾಗಿ ನೀಡಿತು.

Advertisement

ವಿದ್ಯುತ್ ಕಡಿತಗೊಂಡ ಸಂಧರ್ಭದಲ್ಲಿ ಇಲ್ಲಿನ ಶಾಲಾ ವಿಧ್ಯಾರ್ಥಿಗಳು ಬಾವಿಯಿಂದ ನೀರನ್ನು ಸೇದುವ ಕಷ್ಟಕರ ಸನ್ನಿವೇಶಗಳನ್ನು ಮನಗಂಡ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗು ಮುಖ್ಯಶಿಕ್ಷಕರು ಶಾಲೆಗೆ ನೀರಿನ ಟ್ಯಾಂಕ್ ಅಗತ್ಯವಿರುವುದಾಗಿ ರೋಟರಾಕ್ಟ್ ಮಾಜಿ ಅಧ್ಯಕ್ಷ ರೋ. ಚೇತನ್ ಕಜೆಗದ್ದೆಯವರ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ರೋಟರಾಕ್ಟ್ ಅಧ್ಯಕ್ಷ ರೋ.ಮೋಹಿತ್ ಹರ್ಲಡ್ಕ, ಕಾರ್ಯದರ್ಶಿ ರೋ.ಪ್ರಣೀತ್ ಕಣಕ್ಕೂರು, ರೋಟರಾಕ್ಟ್ ಮಾಜಿ ಅದ್ಯಕ್ಷ ಭವಾನಿಶಂಕರ ಕಲ್ಮಡ್ಕ, ರೋಟರಾಕ್ಟ್ ಮಾಜಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಕೆದಿಲಾಯ , ರೋ.ಮಧುಸೂದನ್ ಬೂಡು, ರೋಟರಾಕ್ಟ್ ಸಭಾಪತಿ ರೋ.ಪ್ರಭಾಕರ್ ನಾಯರ್, ಮಾತ್ರೃ ಸಂಸ್ಥೆ ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರೋ.ಪಿ.ಎಚ್.ಎಫ್.ಡಾ.ಪುರುಷೋತ್ತಮ ಕೆ.ಜಿ. , ಇನ್ನರ್ ವ್ಹೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಡಾ.ಹರ್ಷಿತಾ ಪುರುಷೋತ್ತಮ್ ಇವರುಗಳೊಂದಿಗೆ ಇಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಇಲ್ಲಿಗೆ ಭೇಟಿ ನೀಡಿ ನೀರಿನ ಟ್ಯಾಂಕ್ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳ ಪೋಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷ ಓಬಯ್ಯ ಕಜೆಗದ್ದೆ, ಶಾಲಾ ಮುಖ್ಯ ಶಿಕ್ಷಕ ಸುಧೀರ್.ಕೆ, ವಿಧ್ಯಾರ್ಥಿಗಳು ಹಾಗು ಶಾಲಾಭಿಮಾನಿಗಳು ಭಾಗವಹಿಸಿದ್ದರು.

ರೋಟರಿ ಕ್ಲಬ್ ಸುಳ್ಯ ಹಾಗು ರೋಟರಾಕ್ಟ್ ಕ್ಲಬ್ ಸುಳ್ಯ ಜಂಟಿಯಾಗಿ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲು ರೋಟರಿ ಕ್ಲಬ್ ಸುಳ್ಯ ಇದರ ಮಾಜಿ ಅಧ್ಯಕ್ಷರು ರೋ.ಪಿ.ಪಿ.ಪಿ.ಎಚ್.ಎಫ್.ರಾಮಚಂದ್ರ.ಪಿ ಮಾಲಕರು ಭಾರತ್ ಆಗ್ರೋ ಹೌಸ್ ಸುಳ್ಯ ಇವರು ಉತ್ತಮ ದರ್ಜೆಯ 1000ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಕಂಪೆನಿಯ ಟ್ಯಾಂಕ್ ಅನ್ನು ಉಚಿತವಾಗಿ ನೀಡಿರುತ್ತಾರೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group