Advertisement
ಅನುಕ್ರಮ

ಬಿದಿರಿನ ದೋಟಿ ಬಲು ಗಟ್ಟಿ……

Share

ಬಿದಿರು ಹುಲ್ಲಿನ ಗುಂಪಿಗೆ ಸೇರಿದ ಸಸ್ಯ. ವಂಶ, ವೇಣು, ಯುವಫಲ ಎಂದು ಸಂಸ್ಕೃತ ಭಾಷೆಯಲ್ಲಿ ಕರೆಸಿಕೊಳ್ಳುವ ಬಿದಿರು ರೈತ ಮಿತ್ರಕೂಡಾ ಹೌದು. ಜಗತ್ತಿನಲ್ಲಿ 550 ಕ್ಕೂ ಹೆಚ್ಚು ಪ್ರಭೇದಗಳಿವೆ. ನಮ್ಮ ದೇಶದಲ್ಲಿ ದೊರೆಯುವುದು ಕೇವಲ 130 ಜಾತಿಯ ಬಿದಿರುಗಳು ಅದರಲ್ಲೂ ಹೆಚ್ಚಾಗಿ ಸುಮಾರು 40 ವೆರೈಟಿಯ ಬಿದಿರುಗಳು ಕಾಣಸಿಗುತ್ತವೆ.

ದಶಕದ ಹಿಂದೆ ಕೃಷಿಕಾರ್ಯಗಳಿಗೆ ಸಲಕರಣೆಗಳಿಗಾಗಿ ರೈತರು ಅವಲಂಬಿಸುತ್ತಿದ್ದದ್ದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ದೊರೆಯುತ್ತಿದ್ದ ಬಿದಿರುಗಳನ್ನು ಅದರಲ್ಲೂ ಮುಖ್ಯವಾಗಿ ಅಡಿಕೆ, ತೆಂಗು, ಕೊಕ್ಕೋ, ಗೇರು ಮರಗಳಲ್ಲಿ ಬೆಳೆದ ಫಲಗಳನ್ನು ಕೀಳಲು ಅನಿವಾರ್ಯವಾದ ದೋಟಿ ತಯಾರಿಸಲು ಕೃಷಿಕರು ಮಾರು ಹೋಗುತ್ತಿದ್ದದ್ದು ಲೆಂಕಿರಿ ಎನ್ನುವ ಬಿದಿರಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಹಣಕೊಟ್ಟರೆ ಸುಲಭವಾಗಿ ದೊರೆಯುವ ಅಲ್ಯುಮೀನಿಯಂ ಪೋಲ್ ಬಂದ ನಂತರ ಬಿದಿರಿನ ದೋಟಿಗಳ(ದೋಟಿಗೆಕೊಕ್ಕೆ ಎಂದೂ ಹೆಸರಿದೆ) ಬಳಕೆ ಕಡಿಮೆಯಾಗುತ್ತಿದೆ. ಅದಲ್ಲದೆ ಬಿದಿರು ಒತ್ತೊತ್ತಾಗಿ ಬೆಳೆಯವ ಸಸ್ಯ. ದೋಟಿ ಮಾಡಲು ಅನುಕೂಲವಾದದ್ದನ್ನು ತುಂಡರಿಸಲು ಅದರ ಸುತ್ತಮುತ್ತಲಿರುವ ಅಡೆತಡೆಗಳನ್ನು ನಿವಾರಿಸಿ ತೆಗೆಯಬೇಕು. ಬಿದಿರನ್ನು ತುಂಡರಿಸಿ ತಂದು ಒಣಗಿಸಿ ದೋಟಿ ಮಾಡಲು ಸಮಯ ಜೊತೆಗೆ ತಾಳ್ಮೆಯೂ ಬೇಕು.

ಲೆಂಕಿರಿ ಬಿದಿರಿನ ವಿಶೇಷತೆ:  ಉದ್ದವಾಗಿ ಸಪೂರವಾಗಿ ಬೆಳೆಯುವ ಲೆಂಕಿರಿ ಬಿದಿರು ದೋಟಿ ತಯಾರಿಸಲು ತಕ್ಕದಾದದ್ದು. ಒಳಗಡೆ ಟೊಳ್ಳಾಗಿ ಇರುವುದರಿಂದ ಹಗುರವಾಗಿ ಆದರೆ ಅಷ್ಟೇ ಗಟ್ಟಿಯಾಗಿರುವುದು ಇದರ ಇನ್ನೊಂದು ವಿಶೇಷತೆ. ಫಲಗಳನ್ನು ಕೀಳಲು ಹಗುರವಾದ ದೋಟಿ ಬೇಕಾಗಿರುವುದರಿಂದ ಕೃಷಿಕರು ಹೆಚ್ಚಾಗಿ ಬಳಸುವುದು ಲೆಂಕಿರಿ ಬಿದಿರನ್ನು.ಈ ಜಾತಿಯ ಬಿದಿರುಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಂಕುಡೊಂಕಾಗಿ ಇದ್ದರೂ ಹಸಿಯಾಗಿ ಇರುವಾಗ ನೆಲದ ಮೇಲೆ ಇಟ್ಟು ಭಾರವಾದ ಕಲ್ಲುಗಳನ್ನು ಇದರ ಮೇಲೆ ಇರಿಸುವುದರಿಂದ ಅಥವಾ ಮರಕ್ಕೆ ನೇರವಾಗಿ ಇಳಿಬಿಟ್ಟು ಕೆಳಗಡೆ ಭಾರವಾದಕಲ್ಲುಕಟ್ಟಿ ನೇರವಾಗುವಂತೆ ಮಾಡಬಹುದು.ಬಿದಿರುಒಣಗುವ ಮೊದಲೇಇದರ ಗೆಣ್ಣುಗಳನ್ನು ಸರಿಯಾಗಿ ತುಂಡರಿಸಬೇಕು. ನಂತರ ತೆಳ್ಳಗೆ ಇರುವ ತುದಿಗೆ ಕತ್ತಿಕಟ್ಟಿದರೆ ಮರಗಳಲ್ಲಿ ಬೆಳೆದ ಕಾಯಿಗಳನ್ನು ಕೀಳಲು ದೋಟಿ ತಯಾರಾಗುತ್ತದೆ. ನೀರು ತಾಕದ ಹಾಗೆ ಜತನದಿಂದ ಉಪಯೋಗಿಸಿದರೆ ಎರಡು – ಮೂರು ವರ್ಷಕ್ಕೆ ನಿರಾತಂಕವಾಗಿ ಬಳಸಬಹುದಾದ ಲೆಂಕಿರಿ ಬಿದಿರಿನ ದೋಟಿ ಬಲು ಗಟ್ಟಿ. ಇಲ್ಲವಾದರೆಒಂದೇ ವರ್ಷಕ್ಕೆ ಗೆದ್ದಲುಗಳಿಗೆ ಆಹಾರವಾದೀತು.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

17 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

18 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

22 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

22 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

23 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

2 days ago