Advertisement
ಅನುಕ್ರಮ

ಬಿದಿರಿನ ದೋಟಿ ಬಲು ಗಟ್ಟಿ……

Share

ಬಿದಿರು ಹುಲ್ಲಿನ ಗುಂಪಿಗೆ ಸೇರಿದ ಸಸ್ಯ. ವಂಶ, ವೇಣು, ಯುವಫಲ ಎಂದು ಸಂಸ್ಕೃತ ಭಾಷೆಯಲ್ಲಿ ಕರೆಸಿಕೊಳ್ಳುವ ಬಿದಿರು ರೈತ ಮಿತ್ರಕೂಡಾ ಹೌದು. ಜಗತ್ತಿನಲ್ಲಿ 550 ಕ್ಕೂ ಹೆಚ್ಚು ಪ್ರಭೇದಗಳಿವೆ. ನಮ್ಮ ದೇಶದಲ್ಲಿ ದೊರೆಯುವುದು ಕೇವಲ 130 ಜಾತಿಯ ಬಿದಿರುಗಳು ಅದರಲ್ಲೂ ಹೆಚ್ಚಾಗಿ ಸುಮಾರು 40 ವೆರೈಟಿಯ ಬಿದಿರುಗಳು ಕಾಣಸಿಗುತ್ತವೆ.

ದಶಕದ ಹಿಂದೆ ಕೃಷಿಕಾರ್ಯಗಳಿಗೆ ಸಲಕರಣೆಗಳಿಗಾಗಿ ರೈತರು ಅವಲಂಬಿಸುತ್ತಿದ್ದದ್ದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ದೊರೆಯುತ್ತಿದ್ದ ಬಿದಿರುಗಳನ್ನು ಅದರಲ್ಲೂ ಮುಖ್ಯವಾಗಿ ಅಡಿಕೆ, ತೆಂಗು, ಕೊಕ್ಕೋ, ಗೇರು ಮರಗಳಲ್ಲಿ ಬೆಳೆದ ಫಲಗಳನ್ನು ಕೀಳಲು ಅನಿವಾರ್ಯವಾದ ದೋಟಿ ತಯಾರಿಸಲು ಕೃಷಿಕರು ಮಾರು ಹೋಗುತ್ತಿದ್ದದ್ದು ಲೆಂಕಿರಿ ಎನ್ನುವ ಬಿದಿರಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಹಣಕೊಟ್ಟರೆ ಸುಲಭವಾಗಿ ದೊರೆಯುವ ಅಲ್ಯುಮೀನಿಯಂ ಪೋಲ್ ಬಂದ ನಂತರ ಬಿದಿರಿನ ದೋಟಿಗಳ(ದೋಟಿಗೆಕೊಕ್ಕೆ ಎಂದೂ ಹೆಸರಿದೆ) ಬಳಕೆ ಕಡಿಮೆಯಾಗುತ್ತಿದೆ. ಅದಲ್ಲದೆ ಬಿದಿರು ಒತ್ತೊತ್ತಾಗಿ ಬೆಳೆಯವ ಸಸ್ಯ. ದೋಟಿ ಮಾಡಲು ಅನುಕೂಲವಾದದ್ದನ್ನು ತುಂಡರಿಸಲು ಅದರ ಸುತ್ತಮುತ್ತಲಿರುವ ಅಡೆತಡೆಗಳನ್ನು ನಿವಾರಿಸಿ ತೆಗೆಯಬೇಕು. ಬಿದಿರನ್ನು ತುಂಡರಿಸಿ ತಂದು ಒಣಗಿಸಿ ದೋಟಿ ಮಾಡಲು ಸಮಯ ಜೊತೆಗೆ ತಾಳ್ಮೆಯೂ ಬೇಕು.

ಲೆಂಕಿರಿ ಬಿದಿರಿನ ವಿಶೇಷತೆ:  ಉದ್ದವಾಗಿ ಸಪೂರವಾಗಿ ಬೆಳೆಯುವ ಲೆಂಕಿರಿ ಬಿದಿರು ದೋಟಿ ತಯಾರಿಸಲು ತಕ್ಕದಾದದ್ದು. ಒಳಗಡೆ ಟೊಳ್ಳಾಗಿ ಇರುವುದರಿಂದ ಹಗುರವಾಗಿ ಆದರೆ ಅಷ್ಟೇ ಗಟ್ಟಿಯಾಗಿರುವುದು ಇದರ ಇನ್ನೊಂದು ವಿಶೇಷತೆ. ಫಲಗಳನ್ನು ಕೀಳಲು ಹಗುರವಾದ ದೋಟಿ ಬೇಕಾಗಿರುವುದರಿಂದ ಕೃಷಿಕರು ಹೆಚ್ಚಾಗಿ ಬಳಸುವುದು ಲೆಂಕಿರಿ ಬಿದಿರನ್ನು.ಈ ಜಾತಿಯ ಬಿದಿರುಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಂಕುಡೊಂಕಾಗಿ ಇದ್ದರೂ ಹಸಿಯಾಗಿ ಇರುವಾಗ ನೆಲದ ಮೇಲೆ ಇಟ್ಟು ಭಾರವಾದ ಕಲ್ಲುಗಳನ್ನು ಇದರ ಮೇಲೆ ಇರಿಸುವುದರಿಂದ ಅಥವಾ ಮರಕ್ಕೆ ನೇರವಾಗಿ ಇಳಿಬಿಟ್ಟು ಕೆಳಗಡೆ ಭಾರವಾದಕಲ್ಲುಕಟ್ಟಿ ನೇರವಾಗುವಂತೆ ಮಾಡಬಹುದು.ಬಿದಿರುಒಣಗುವ ಮೊದಲೇಇದರ ಗೆಣ್ಣುಗಳನ್ನು ಸರಿಯಾಗಿ ತುಂಡರಿಸಬೇಕು. ನಂತರ ತೆಳ್ಳಗೆ ಇರುವ ತುದಿಗೆ ಕತ್ತಿಕಟ್ಟಿದರೆ ಮರಗಳಲ್ಲಿ ಬೆಳೆದ ಕಾಯಿಗಳನ್ನು ಕೀಳಲು ದೋಟಿ ತಯಾರಾಗುತ್ತದೆ. ನೀರು ತಾಕದ ಹಾಗೆ ಜತನದಿಂದ ಉಪಯೋಗಿಸಿದರೆ ಎರಡು – ಮೂರು ವರ್ಷಕ್ಕೆ ನಿರಾತಂಕವಾಗಿ ಬಳಸಬಹುದಾದ ಲೆಂಕಿರಿ ಬಿದಿರಿನ ದೋಟಿ ಬಲು ಗಟ್ಟಿ. ಇಲ್ಲವಾದರೆಒಂದೇ ವರ್ಷಕ್ಕೆ ಗೆದ್ದಲುಗಳಿಗೆ ಆಹಾರವಾದೀತು.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

6 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

12 hours ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

12 hours ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

23 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

1 day ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

1 day ago