ಬೆಳ್ಳಾರೆ: ಪುಟ್ಟ ಕಂದಮ್ಮಗಳ ಹಾಗೂ ಮಕ್ಕಳ ಸಿದ್ಧ ಉಡುಪುಗಳು ಹಾಗೂ ಇನ್ನಿತರ ವಸ್ತುಗಳ ಮಳಿಗೆ ಕಿಡ್ಸ್ ವರ್ಲ್ಡ್-ದಿ ಕಂಪ್ಲೀಟ್ ಕಿಡ್ಸ್ ಸ್ಟೋರ್ ಬೆಳ್ಳಾರೆಯ ಕೆಎಸ್ಸಾರ್ಟಿಸಿ ಬಸ್ ನಿಲ್ಧಾಣದ ಬಳಿಯಿರುವ ಕಾಮಧೇನು ಟವರ್ಸ್ ನಲ್ಲಿ ಅ.೨೪ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಕಾಮಧೇನು ಟವರ್ಸ್ ಮಾಲಕ ಮಾಧವ ಗೌಡ ಕಾಮಧೇನು ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಾಧಕ್ಷ ಮುಸ್ತಫಾ ಬೆಳ್ಳಾರೆ, ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಎ.ಎಚ್, ಹಾಜಿ ಮಮ್ಮಾಲಿ, ಸುನ್ನಿ ಐಕ್ಯ ವೇದಿಕೆ ಅಧ್ಯಕ್ಷ ಹಸೈನಾರ್ ಹಾಜಿ, ಗ್ರಾಪಂ ಸದಸ್ಯ ನವೀನ್ ಗೌಡ, ಮಾಜಿ ತಾಪಂ ಸದಸ್ಯ ಅನಿಲ್ ರೈ ಬೆಳ್ಳಾರೆ, ಪೆರುವಾಜೆ ಗ್ರಾಪಂ ಅಧ್ಯಕ್ಷ ಅನುಸೂಯ, ಶೂಬಿಝ್ ಮಾಲಕ ನಝೀರ್, ವಿಖಾಯ ಚೇರ್ಮ್ಯಾನ್ ಜಮಾಲುದ್ದಿನ್ ಕೆ.ಎಸ್, ರಶೀದ್ ಬೆಳ್ಳಾರೆ, ಹಾರಿಸ್ ಸೋಣಂಗೇರಿ, ಮಾಲಕರಾದ ಶಂಸುದ್ದಿನ್ ಜಿ.ಎ, ಕಮಾಲುದ್ದಿನ್ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು.
ಈ ಮಳಿಗೆಯು ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ವಿಶಾಲವಾದ ಮಳಿಗೆ ಇದಾಗಿದೆ. ಇಲ್ಲಿ ಮಕ್ಕಳಿಗೆ ಬೇಕಾದ ಸಿದ್ಧ ಉಡುಪುಗಳು, ಆಟಿಕೆ ಸಾಮಾಗ್ರಿಗಳು, ತೊಟ್ಟಿಲುಗಳು, ಬೇಬಿ ವಾಕರ್ಗಳು ಹಾಗೂ ಇನ್ನಿತರ ವಸ್ತುಗಳು ಲಭ್ಯವಿದೆ. ಗ್ರಾಹಕರಿಗಾಗಿ ಅತಿ ಕಡಿಮೆ ದರದಲ್ಲಿ ಖ್ಯಾತ ಕಂಪೆನಿಗಳ ವಿವಿಧ ಉತ್ಪನ್ನಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…