ಸುಳ್ಯ: ತಾಲೂಕಿನ ಪ್ರಮುಖ ಪೇಟೆ ಎನಿಸಿಕೊಂಡ ಬೆಳ್ಳಾರೆಯ ರಸ್ತೆಯ ಮಳೆಗಾಲದ ಪರಿಸ್ಥಿತಿ ಇಲ್ಲಿದೆ. ಇಡೀ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಸಾಕಷ್ಟು ಬಾರಿ ಸಾರ್ವಜನಿಕರು ಮನವಿ ಮಾಡಿದರು ಪ್ರಯೋಜನ ಆಗಿಲ್ಲ.
ಬೆಳ್ಳಾರೆಯಲ್ಲಿ ಹದಿನೈದು ನಿಮಿಷ ಮಳೆ ಸುರಿದರೆ ಸಾಕು , ನೀರು ಹರಿದು ಹೋಗಲು ಇಲ್ಲಿನ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ಮಳೆನೀರೆಲ್ಲ ರಸ್ತೆಯಲ್ಲಿ ಹರಿದು ಹೋಗುತ್ತದೆ. ಸಾರ್ವಜನಿಕರಿಗೆ, ವಾಹನ ಸವಾರರಿಗೆ ವರ್ತಕರಿಗಂತು, ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಬೆಳ್ಳಾರೆ ಮೇಲಿನ ಪೇಟೆಯಲ್ಲಿನ ಸಮಸ್ಯೆ ವಿಪರಿತ, ಇದಕ್ಕೆ ಅಸಮರ್ಪಕ ಚರಂಡಿ ವ್ಯವಸ್ಥೆಯೇ ಮುಖ್ಯ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ , ಸೂಕ್ತ ಕ್ರಮ ಕೈಗೊಳ್ಳುವರೇ ಎಂದು ಸಾರ್ವಜನಿಕರು ಮತ್ತೆ ಮನವಿ ಮಾಡುತ್ತಾರೆ.
ಅಡಿಕೆ ಎಲೆ ಚುಕ್ಕೆ ರೋಗವು ಗಾಳಿ ಮತ್ತು ತೇವಾಂಶದಿಂದ ವೇಗವಾಗಿ ಹರಡುತ್ತಿದ್ದು, ತೋಟಗಳಿಗೆ…
ಇಂಟರ್ನೆಟ್ ಸೇವೆ ವ್ಯತ್ಯಯಕ್ಕೆ ಸುಳ್ಯದ ಗ್ರಾಹಕನಿಗೆ ₹30,000 ಪರಿಹಾರ ನೀಡಲು ಆದೇಶ. ಬಿ…
ಮೇ 2ರಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆಗಳು ಕಂಡುಬರುತ್ತಿವೆ. ಮೇ…
ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಶೇಖರಿಸಿದ್ದ ಯೂರಿಯಾ ಗೊಬ್ಬರ ಜಪ್ತಿ ಮಾಡಲಾಗಿದೆ. 181 ಚೀಲಗಳು ಹಾಗೂ…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.…
NEET ಪರೀಕ್ಷೆಯ ಒತ್ತಡದಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಒತ್ತಡರಹಿತ, ಅನುಭವಾಧಾರಿತ ಶಿಕ್ಷಣ…