ಸುಳ್ಯ: ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಅವಿಭಜಿತ ಸುಳ್ಯ ತಾಲೂಕಿನ ಸಾಹಿತಿಗಳ/ ಲೇಖಕರ ಮಾಹಿತಿ ಕೋಶವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸಿದ್ದು ಈ ಕೆಳಗಿನ ಮಾಹಿತಿಗಳನ್ನು ನೀಡಲು ಕೋರಿದೆ.
ಮಾಹಿತಿಯು ಸಾಹಿತಿ/ ಲೇಖಕರ ಹೆಸರು, ಪೂರ್ಣ ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಶೈಕ್ಷಣಿಕ ವಿವರ, ಕೃ ತಿಗಳ ಹೆಸರುಗಳು ,ಪ್ರಶಸ್ತಿಗಳು, ಸಾಹಿತ್ಯ ಸಂಘಟನೆ ಮತ್ತು ಸಾಮಾಜಿಕ ಸೇವೆಗಳ ವಿವರಗಳನ್ನು ಒಳಗೊಂಡಿರಬೇಕು. ಮಾಹಿತಿ ಕಳುಹಿಸುವವರು ಕನಿಷ್ಟ ಒಂದು ಪುಸ್ತಕ ವಾದರೂ ರಚಿಸಿರಬೇಕು. ಮೃತ ಪಟ್ಟ ಸಾಹಿತಿಗಳಿದ್ದರೆ ಅವರ ಮನೆಯವರು ಹಾಗೂ ಬಂಧುಗಳು ಮಾಹಿತಿ ಕಳುಹಿಸಬಹುದಾಗಿದೆ .ಯಾವುದೇ ಭಾಷೆಯಲ್ಲಿ ಕೃತಿ ರಚನೆ ಮಾಡಿರಬಹುದು. ಮೇಲಿನ ಮಾಹಿತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಅ.10 ರ ಒಳಗಾಗಿ ಕಳುಹಿಸಲು ಕೋರಲಾಗಿದೆ.
ವಿಳಾಸ :
ಅಧ್ಯಕ್ಷರು,
ಸುವಿಚಾರ ಸಾಹಿತ್ಯವೇದಿಕೆ
ಕೇರಾಫ್ ಶ್ರೀದೇವಿ ಪುಸ್ತಕ ಮಳಿಗೆ
ರಥಬೀದಿ ಸುಳ್ಯ ದಕ 574239.
Email id: chandruperal@gmail.com
ಸಂಪರ್ಕ ಸಂಖ್ಯೆ: 9448889005.
ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…
ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…
ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…
ಬಿ.ಎಸ್ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…