ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುವಿಚಾರ ಸಾಹಿತ್ಯ ವೇದಿಕೆ , ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ಇದರ ಆಶ್ರಯಲ್ಲಿ ಗೀತ ಕಥಾ ಕಾಲಕ್ಷೇಪ ಜಯ ಹೇ ಕರ್ನಾಟಕ ಮಾತೆ , ಕನ್ನಡ ನಾಡು ನುಡಿ ಇತಿಹಾಸ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ನಡೆಯಿತು.
ಪ್ರವಚನಕಾರರಾಗಿ ಪ್ರಕಾಶ್ ಮೂಡಿತ್ತಾಯ ಹಾಗೂ ಹಾಡುಗಾರರಾಗಿ ಗಿರಿಜಾ, ತೇಜಸ್ ಜಯನಗರ, ವಿಭಾಶ್ರೀ ಬೆಳ್ಳಾರೆ, ರಾಮಚಂದ್ರ ಅರ್ಬಿತ್ತಾಯ ಇವರು ಕನ್ನಡ ನಾಡು ನುಡಿ ಇತಿಹಾಸದ ಬಗ್ಗೆ ಸುಶ್ರಾವ್ಯ ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಹಸೀನಾ ಬಾನು ಎಲ್ಲರಿಗೂ ಶಾಲು ಹೊದಿಸಿ ಗೌರವಿಸಿದರು. ಮಮತಾ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel