Categories: Uncategorized

ಬೆಳ್ಳಾರೆ ಮಸೀದಿ ವಿವಾದ: ಜಮಾಅತ್ ಅಧ್ಯಕ್ಷರಿಂದ ಸ್ಪಷ್ಟನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೆಳ್ಳಾರೆ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಶಾಫಿ ಬೆಳ್ಳಾರೆಯವರ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳು ಬೇಕಾಗಿಲ್ಲ. ಎಲ್ಲಾ ವರ್ಷದಂತೆ ಈ ವರ್ಷವೂ ಭಾಷಣಕ್ಕೆ ಅನುಮತಿ ಕೋರಿ ನನಗೆ ಲಿಖಿತವಾಗಿ ಅರ್ಜಿ ಸಲ್ಲಿಸಿದ್ದರು ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸ್ಜಿದ್ ಅಧ್ಯಕ್ಷ  ಕೆ. ಎಮ್. ಮಹಮ್ಮದ್ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Advertisement
Advertisement

ಭಾಷಣಕ್ಕೆ 17 ಮಂದಿ ಜಮಾಅತ್ ಸದಸ್ಯರಲ್ಲಿ 6 ಮಂದಿಗೆ  ಮಾತ್ರವೇ ಆಕ್ಷೇಪವಿದ್ದು ಇತರರ ಬಹುಮತದ ಅಭಿಪ್ರಾಯವನ್ನು ಪರಿಗಣಿಸಿ ಭಾಷಣಕ್ಕೆ ನಾನು ಲಿಖಿತವಾಗಿ ಅನುಮತಿ ನೀಡಿರುತ್ತೇನೆ. ಶಾಫಿ ಬೆಳ್ಳಾರೆಯವರು ನಮ್ಮ ಜಮಾಅತಿನ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ. ಆದರೆ ಕೆಲವರು
ರಾಜಕೀಯ ಉದ್ದೇಶಕ್ಕಾಗಿ ಅವರು ಪ್ರತಿನಿಧಿಸುವ ಸಂಘಟನೆ ಮತ್ತು ಪಾರ್ಟಿಯನ್ನು ಎಳೆದು ತಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಜಮಾಅತಿನಲ್ಲಿ ವಿವಿಧ ಪಾರ್ಟಿ ಮತ್ತು ಸಂಘಟನೆಗೆ ಸೇರಿದವರಿದ್ದು ಅವರೆಲ್ಲರೂ ನಮ್ಮ ಜಮಾಅತಿಗರೇ ಹೊರತು ಅವರು ಪ್ರತಿನಿಧಿಸುವ ಪಾರ್ಟಿ ಹೆಸರಿನಲ್ಲಿ ಗುರುತಿಸಿಕೊಂಡಿರುವುದಲ್ಲ. ಭಾಷಣಕ್ಕೆ ಅನುಮತಿ ನೀಡಿರುವಾಗ ಅದನ್ನು ತಡೆಯಲು ಕೆಲವರು ಯತ್ನಿಸಿದಾಗ ಅಲ್ಲಿ ಸೇರಿದ ಜಮಾಅತಿಗರಾದ
ಎಲ್ಲರೂ (ವಿವಿಧ ಪಾರ್ಟಿ& ಸಂಘಟನೆಗೆ ಸೇರಿದವರಾದ) ಅವರನ್ನು ಮಸೀದಿಯಿಂದ ಹೊರ ಹೋಗುವಂತೆ ಮನವಿ ಮಾಡಿ ಹೊರಕಳುಹಿಸಿ ಶಾಫಿ ಬೆಳ್ಳಾರೆಯವರ ಭಾಷಣ ನಡೆದಿರುತ್ತದೆ. ಹೀಗಾಗಿ ಯಾವುದೇ ಗೊಂದಲಗಳು ಬೇಡ ಎಂದು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಹಲಸಿನ ಹಣ್ಣಿನ ಗುಳಿ ಅಪ್ಪ

ಹಲಸಿನ ಹಣ್ಣಿನ ಗುಳಿ ಅಪ್ಪಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 2.1/2…

12 hours ago

ಜೂನ್‌ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೆಲ್ಲಾ ನಿಮ್ಮದೇ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಪ್ರಾದೇಶಿಕ ಒಪ್ಪಂದಕ್ಕೆ ಬಲಿಯಾಯಿತೇ ಕಾಳು ಮೆಣಸು..?

ಸಾಮನ್ಯವಾಗಿ ಒಂದು ಉತ್ಪನ್ನದ ಉತ್ಪಾದನೆ ಕುಸಿದಾಗ ಅದರ ಬೆಲೆ ಏರಿಕೆ ಆಗುವುದು ಸಹಜ.ಇಲ್ಲಿ…

13 hours ago

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ-ಡಾ.ಅರುಣ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ…

20 hours ago

ಜೂನ್ 2ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ…

20 hours ago