ಸಾಂದರ್ಭಿಕ ಚಿತ್ರ( ಕೃಪೆ - ಇಂಟರ್ನೆಟ್)
ಬೀದಿ ಗುಡ್ಸುವ ಬೊಮ್ಮಕ್ಕ
ಪೊರ್ಲೂನ ಕಂಟ್….
ಅಪ್ಪ ಅವ್ವ ಹೋದ ಮೇಲೆ
ಬೀದಿ ಗುಡ್ಸಿ ಸಾಗಿಸ್ತಿತ್ತ್
ಅವಳ ಬದ್ಕ್…
ಯಾರೋ ಕೊಟ್ಟ ಹರ್ಕುಲ್ ಸೀರೆಲಿ
ಮುಚ್ಚಿಕಂತಿತ್ತು ಅವಳ ಮಾನ
ಬೀದಿಲಿ ಸಿಕ್ಕಿದ ಗೋಣಿ ಚೀಲಲಿ
ಕಟ್ಟಿಕಂಡಿತ್ತ್ ಅವಳ ಮನೆ ಮಾಡ್ ನಾ
ಹಂಗೂ ಹಿಂಗು ಸಾಗ್ತಾ ಇತ್ತ್
ಅವಳ ಬದ್ಕು
ಬೀದಿಲಿ ಹೋಗೋ ರಾಮಪ್ಪಂಗೆ
ಅವಳ ಸೊಂಟದ ಮೇಲೆನೇ ಕಣ್ಣ್
ಹರ್ಕ್ ಲ್ ಸೀರೆ ಬಿಚ್ಚಿ ಹೋತ್
ಪೊರ್ಲುನಾ ಹೂ ಬಾಂಡಿ ಹೋತ್
ಬೀದಿ ನಾಯಿ ಜೊಲ್ಲು ಸುರ್ಸಿ
ಉಂಡು ತೇಗಿ ಬುಟ್ಟು ಹೋತ್
ಅವಳ ಮನೆ ಸುತ್ತಮುತ್ತ ತಿರ್ಗ್ತ್ ತ್ತಾ ಇದ್ದ
ಕುಕ್ಕಿ ಕುಕ್ಕಿ ತಿಂಬ ಗಿಡ್ಗಂಗ……
ಹಿಂದೆ ಮುಂದೆ ಯಾರು ಇಲ್ಲೆ
ಅತ್ತ ಇತ್ತ ಹೋಕು ಆದ್ಲೆ
ಗೋಣಿ ಚೀಲ ಮಾಡ್ ಕೆಳಗೆ
ಬೊಮ್ಮಕ್ಕನ ಬದ್ಕ್ ಕಂರ್ಚಿ ಹೋತ್
ಬೀದಿ ಗುಡ್ಸಿ ಬದ್ಕ್ ತಿತ್ತ್
ಬೀದಿ ನಾಯ್ಗಳ ಬಾಯಿಗೆ ಸಿಕ್ಕಿ ಬೀದಿಲೇ ಹೆಣ ಆತ್..
# ಅಪೂರ್ವ ಕೊಲ್ಯ
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…