ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ
(ಬ್ರಹಸ್ಪತಿ ಪುತ್ರ ಕಚನು ಮೃತಸಂಜೀವಿನಿ ವಿದ್ಯೆಯನ್ನು ಕಲಿಯಲು ಶುಕ್ರಾಚಾರ್ಯರ ಆಶ್ರಮಕ್ಕೆ ಬರುತ್ತಾನೆ)
“ವತ್ಸಾ … ಕೆಲವೊಮ್ಮೆ ಈ ಪ್ರಪಂಚದಲ್ಲಿ ನಾವು ಎಣಿಸಿದಂತೆ ಅಲ್ಲ, ಎಣಿಸಿದ್ದಕ್ಕೆ ವಿಪರೀತವಾಗಿ ಕೆಲವು ಘಟನೆಗಳು ಒದಗುತ್ತವೆ. ಆಗ ಎಂತಹ ವಿದ್ವಾಂಸನಾದರೂ ಒಮ್ಮೆಗೆ ಆಶ್ಚರ್ಯಚಕಿತನಾಗುತ್ತಾನೆ. ಹೇಳಿ ಕೇಳಿ ವೃತ್ತಿಯಿಂದಲೂ, ಕ್ಷೇತ್ರ ವ್ಯತ್ಯಾಸದಿಂದಲೂ ನಿನ್ನ ತಂದೆಯಾದ ಬೃಹಸ್ಪತಿಗೂ, ನನಗೂ ಯಾವಾಗಲೂ ಸಂಘರ್ಷವೇ. ಆದರೆ ಒಂದು ಸಂತೋಷ. ನಮ್ಮೊಳಗೆ ಆಗುತ್ತಿರುವ ಸಂಘರ್ಷವು ಬೌದ್ಧಿಕವಾದುದು, ಭೌತಿಕವಾದುದಲ್ಲ. ಪ್ರಪಂಚದಲ್ಲಿ ಬೌದ್ಧಿಕವಾದ ಸಂಘರ್ಷ ಎಷ್ಟು ಹೆಚ್ಚಾದರೂ ಮುಂದಿನ ಜನಾಂಗಕ್ಕೆ ಅದೊಂದು ಶುಭ ಪರಿಣಾಮವಾಗುತ್ತದೆ. ನೀನು ಬೃಹಸ್ಪತಿಯ ಮಗನಾದ್ದರಿಂದ ನನಗೆ ಅನ್ಯಥಾ ಭಾವನೆಯೇ ಇಲ್ಲ. ವೈಯಕ್ತಿಕವಾಗಿ ನಿನ್ನ ತಂದೆಗೂ ನನಗೂ ಏನೂ ರಾಗದ್ವೇಷಾದಿಗಳಿಲ್ಲ. ನಾವು ವಹಿಸಿಕೊಂಡಿರುವ ಪಕ್ಷ, ಆ ಪಕ್ಷದ ಉತ್ಕರ್ಷವನ್ನು ಬಯಸುವುದು ತಾತ್ವಿಕವಾಗಿ, ವೈಯಕ್ತಿಕವಾಗಿ ನೈತಿಕದ ಹೊಣೆ ಎಂಬುದರಲ್ಲಿ ಮಾತ್ರ. ಅವರಿದ್ದಲ್ಲಿ ನಾನಿಲ್ಲ, ನಾನಿದ್ದಲ್ಲಿ ಅವರಿಲ್ಲ. ಆದ ಕಾರಣ ಒಂದು ಮನೆಯ ಮಾಡಿನಡಿ ನಮಗೆ ಹೊಂದಾಣಿಕೆಯಿಲ್ಲ…
ನಿನ್ನ ಕೇಳಿಕೆಯಂತೂ ಸಾಧ್ಯವಿದ್ದ ಮಟ್ಟಿಗೆ ಯಾವ ವಿಘ್ನವಿಡ್ಡೂರಗಳಿದ್ದರೂ ಕಡೆಗಣಿಸಿ ನಾನು ಮಾಡಬೇಕಾದ, ಮಹಾಪ್ರಧಾನವಾದಂತಹ ಒಂದು ಕರ್ತವ್ಯವದು. ಪ್ರಾಣದಾನವು ದೊಡ್ಡ ದಾನ. ಹಾಗೆಯೇ ಅನ್ನದಾನ, ಔಷಧಿದಾನ. ನೀನು ಕೇಳುವಂತಹುದು ‘ವಿದ್ಯಾದಾನ.’ ವಿದ್ಯೆಯಿಂದ ಅಮೃತವನ್ನುಣಿಸುವುದು. ಮಿಕ್ಕದ್ದೆಲ್ಲ ಕ್ಷಣಿಕ. ಈ ದೇಹವಿದ್ದಷ್ಟು ಕಾಲ ಪ್ರಾಣದಾನ. ಹಸಿವೆ ಮುಗಿಯುವಲ್ಲಿಯ ತನಕ ಅನ್ನದಾನ. ರೋಗ ನಿವೃತ್ತಿಯಾಗುವಲ್ಲಿಯ ತನಕ ಔಷಧಿದಾನ. ಆದರೆ ಜೀವಾತ್ಮನಿಗೆ ಅಮೃತತ್ವ ಯೋಗವನ್ನು ಕರುಣಿಸುವುದು ಸತ್ಯವೂ, ಶಾಶ್ವತವೂ, ಸನಾತನವೂ ಆದ ‘ವಿದ್ಯೆ.’ ಆಚಾರ್ಯನೆಂದರೆ ಸಾಕ್ಷಾತ್ ಪರಬ್ರಹ್ಮ. ಅದು ಶ್ರುತಿವಾಕ್ಯ. ನೀನು ನನ್ನ ಶಿಷ್ಯ. ನನ್ನ ಗುರುತ್ವ ಅರ್ಥಪೂರ್ಣವಾಗಬೇಕು.”
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…