ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ
(ಬ್ರಹಸ್ಪತಿ ಪುತ್ರ ಕಚನು ಮೃತಸಂಜೀವಿನಿ ವಿದ್ಯೆಯನ್ನು ಕಲಿಯಲು ಶುಕ್ರಾಚಾರ್ಯರ ಆಶ್ರಮಕ್ಕೆ ಬರುತ್ತಾನೆ)
“ವತ್ಸಾ … ಕೆಲವೊಮ್ಮೆ ಈ ಪ್ರಪಂಚದಲ್ಲಿ ನಾವು ಎಣಿಸಿದಂತೆ ಅಲ್ಲ, ಎಣಿಸಿದ್ದಕ್ಕೆ ವಿಪರೀತವಾಗಿ ಕೆಲವು ಘಟನೆಗಳು ಒದಗುತ್ತವೆ. ಆಗ ಎಂತಹ ವಿದ್ವಾಂಸನಾದರೂ ಒಮ್ಮೆಗೆ ಆಶ್ಚರ್ಯಚಕಿತನಾಗುತ್ತಾನೆ. ಹೇಳಿ ಕೇಳಿ ವೃತ್ತಿಯಿಂದಲೂ, ಕ್ಷೇತ್ರ ವ್ಯತ್ಯಾಸದಿಂದಲೂ ನಿನ್ನ ತಂದೆಯಾದ ಬೃಹಸ್ಪತಿಗೂ, ನನಗೂ ಯಾವಾಗಲೂ ಸಂಘರ್ಷವೇ. ಆದರೆ ಒಂದು ಸಂತೋಷ. ನಮ್ಮೊಳಗೆ ಆಗುತ್ತಿರುವ ಸಂಘರ್ಷವು ಬೌದ್ಧಿಕವಾದುದು, ಭೌತಿಕವಾದುದಲ್ಲ. ಪ್ರಪಂಚದಲ್ಲಿ ಬೌದ್ಧಿಕವಾದ ಸಂಘರ್ಷ ಎಷ್ಟು ಹೆಚ್ಚಾದರೂ ಮುಂದಿನ ಜನಾಂಗಕ್ಕೆ ಅದೊಂದು ಶುಭ ಪರಿಣಾಮವಾಗುತ್ತದೆ. ನೀನು ಬೃಹಸ್ಪತಿಯ ಮಗನಾದ್ದರಿಂದ ನನಗೆ ಅನ್ಯಥಾ ಭಾವನೆಯೇ ಇಲ್ಲ. ವೈಯಕ್ತಿಕವಾಗಿ ನಿನ್ನ ತಂದೆಗೂ ನನಗೂ ಏನೂ ರಾಗದ್ವೇಷಾದಿಗಳಿಲ್ಲ. ನಾವು ವಹಿಸಿಕೊಂಡಿರುವ ಪಕ್ಷ, ಆ ಪಕ್ಷದ ಉತ್ಕರ್ಷವನ್ನು ಬಯಸುವುದು ತಾತ್ವಿಕವಾಗಿ, ವೈಯಕ್ತಿಕವಾಗಿ ನೈತಿಕದ ಹೊಣೆ ಎಂಬುದರಲ್ಲಿ ಮಾತ್ರ. ಅವರಿದ್ದಲ್ಲಿ ನಾನಿಲ್ಲ, ನಾನಿದ್ದಲ್ಲಿ ಅವರಿಲ್ಲ. ಆದ ಕಾರಣ ಒಂದು ಮನೆಯ ಮಾಡಿನಡಿ ನಮಗೆ ಹೊಂದಾಣಿಕೆಯಿಲ್ಲ…
ನಿನ್ನ ಕೇಳಿಕೆಯಂತೂ ಸಾಧ್ಯವಿದ್ದ ಮಟ್ಟಿಗೆ ಯಾವ ವಿಘ್ನವಿಡ್ಡೂರಗಳಿದ್ದರೂ ಕಡೆಗಣಿಸಿ ನಾನು ಮಾಡಬೇಕಾದ, ಮಹಾಪ್ರಧಾನವಾದಂತಹ ಒಂದು ಕರ್ತವ್ಯವದು. ಪ್ರಾಣದಾನವು ದೊಡ್ಡ ದಾನ. ಹಾಗೆಯೇ ಅನ್ನದಾನ, ಔಷಧಿದಾನ. ನೀನು ಕೇಳುವಂತಹುದು ‘ವಿದ್ಯಾದಾನ.’ ವಿದ್ಯೆಯಿಂದ ಅಮೃತವನ್ನುಣಿಸುವುದು. ಮಿಕ್ಕದ್ದೆಲ್ಲ ಕ್ಷಣಿಕ. ಈ ದೇಹವಿದ್ದಷ್ಟು ಕಾಲ ಪ್ರಾಣದಾನ. ಹಸಿವೆ ಮುಗಿಯುವಲ್ಲಿಯ ತನಕ ಅನ್ನದಾನ. ರೋಗ ನಿವೃತ್ತಿಯಾಗುವಲ್ಲಿಯ ತನಕ ಔಷಧಿದಾನ. ಆದರೆ ಜೀವಾತ್ಮನಿಗೆ ಅಮೃತತ್ವ ಯೋಗವನ್ನು ಕರುಣಿಸುವುದು ಸತ್ಯವೂ, ಶಾಶ್ವತವೂ, ಸನಾತನವೂ ಆದ ‘ವಿದ್ಯೆ.’ ಆಚಾರ್ಯನೆಂದರೆ ಸಾಕ್ಷಾತ್ ಪರಬ್ರಹ್ಮ. ಅದು ಶ್ರುತಿವಾಕ್ಯ. ನೀನು ನನ್ನ ಶಿಷ್ಯ. ನನ್ನ ಗುರುತ್ವ ಅರ್ಥಪೂರ್ಣವಾಗಬೇಕು.”
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…