ಅನುಕ್ರಮ

ಭಾರತ್ ಮಾತಾಕೀ ಜೈ…..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎಲ್ಲಾ ಹಬ್ಬಗಳಂತಲ್ಲ. ಇದಕ್ಕೆ ಜಾತಿ, ಧರ್ಮ ಗಳ ಹಂಗಿಲ್ಲ. ದೇಶದ ಎಲ್ಲರೂ ಆಚರಿಸಿ ಸಂಭ್ರಮಿಸುವ ಹಬ್ಬ, ಬಿಡುಗಡೆಯ ಹಬ್ಬ, ವಿದೇಶಿಯರ ಹಿಡಿತದಿಂದ ಬಿಡುಗಡೆಯಾದ ದಿನದ ನೆನಪಿನ ಹಬ್ಬ. ಅದುವೇ ಸ್ವಾತಂತ್ರ್ಯ ದಿನಾಚರಣೆಯ ಹಬ್ಬ. ಆಗಸ್ಟ್ 15 ರಂದು ದೇಶದೆಲ್ಲೆಡೆ ಸಂತೋಷದಿಂದ‌ ಈ ದಿನವನ್ನುಆಚರಿಸಲಾಗುತ್ತ ದೆ.

Advertisement
ಈ ಬಾರಿ ಎಂದಿನಂತಿಲ್ಲ ಸ್ವಾತಂತ್ರ್ಯ ದಿನಾಚರಣೆ.  ಮಳೆಯ ತೀವ್ರತೆಗೆ ನಲುಗಿದ ರಾಜ್ಯಗಳು ,ಇದರ ನಡುವೆ ಸ್ವಾತಂತ್ರ್ಯ ದಿನಾಚರಣೆ . ಮತ್ತೊಂದೆಡೆ  ಕಾಶ್ಮೀರ ಕಣಿವೆಯಲ್ಲಿ ಹಾರಲಿರುವ ತಿರಂಗ. ಅಲ್ಲಿ 1947 ರಲ್ಲಿ ಹಾರಿದ ಧ್ವಜ ಮತ್ತೆ ಈ ಬಾರಿಯೇ ಹಾರುತ್ತಿರುವುದು. ದೇಶದೆಲ್ಲೆಡೆ  ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರ ಗೀತೆಯನ್ನು ಹಾಡಿ  ನಮ್ಮ ನಾಡು ನುಡಿಗೆ ಗೌರವಿಸುತ್ತಾ ಎಲ್ಲರೂ ಆನಂದಿಸುತ್ತಾರೆ.
ಆಗಸ್ಟ್ 15 ಬಂತೆಂದರೆ ನಮ್ಮ ದೇಶ ಸಂಭ್ರಮದಲ್ಲಿ ಮುಳುಗೇಳುತ್ತದೆ. ಬ್ರಿಟಿಷ್ ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಚರಣೆಯ ಉತ್ಸವಕ್ಕೆ ಸಂಬಂಧಿಸಿದ ಖುಷಿ . ಯಾವತ್ತೂ ಸ್ವಾತಂತ್ರ್ಯ ಯೋತ್ಸವೆಂದರೆ ಖುಷಿಯೇ, ಆದರೆ ಈ ಬಾರಿ ಇದು ದುಪ್ಪಟ್ಟು. ಯಾಕೆಂದರೆ ೭೩ನೇಯ ಸ್ವಾತಂತ್ರ್ಯಯೋತ್ಸವಕ್ಕೆ ನಮ್ಮ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು ಭರ್ಜರಿ ಉಡುಗೊರೆ ಯನ್ನು ದೇಶದ ಜನತೆಗೆ ನೀಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿ ಅಲ್ಲಿನ ಜನರಿಗೆ ಸ್ವಾತಂತ್ರ್ಯ ದ ನಿಜವಾದ ಅನುಭವವನ್ನು ಪಡೆಯು ಅವಕಾಶಕ್ಕೆ ಅಡಿಪಾಯ ಹಾಕಿದ್ದಾರೆ. ಇನ್ನೂ ಮುಂದಿರುವ ಅಡ್ಡಿಗಳ ನಿವಾರಣೆಯಾದರೆ ಹಲವು ವರ್ಷಗಳ ಕನಸು ನನಸಾದಂತೆ.
ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾಡುವ ಭಾಷಣ ಮಹತ್ವವಾದು ದಾಗಿದೆ. ದೇಶದ ಮುಂದಿರುವ ಸವಾಲುಗಳು, ಸಾಧನೆಗಳು, ಯೋಜನೆಗಳ ಅನಾವರಣ ಪ್ರಧಾನ ಮಂತ್ರಿಯವರ ಭಾಷಣದಲ್ಲಿ ಉಲ್ಲೇಖವಾಗುತ್ತವೆ. ಪ್ರತೀ ಬಾರಿಯಂತೆ ಈ ಬಾರೀಯೂ ಹಲವು ನಿರೀಕ್ಷೆಗಳೊಂದಿಗೆ ಪ್ರಧಾನ ಮಂತ್ರಿ ಮೋದಿಯವರ ಭಾಷಣವನ್ನು ಇಡೀ ಭಾರತ ಇದಿರು ನೋಡುತ್ತಿದೆ.
ನಾವೆಲ್ಲರೂ ಒಂದೇ. ನಮ್ಮಲ್ಲಿ ಭಾಷೆ,  ವೇಷ ಭೂಷಣ, ಪದ್ಧತಿ , ಆಚರಣೆಗಳಲ್ಲಿ ‌ವಿಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ  ಭಾರತೀಯರು ಎಂದು ಒಕ್ಕೋರಲಿಂದ ಹೇಳುವ ಸಮಯ ಬಂದಿದೆ. ದುಷ್ಟಶಕ್ತಿಗಳನ್ನು ಎದುರಿಸು ವಲ್ಲಿ ಎಲ್ಲರೂ ಒಗ್ಗೂಡುವ ಸಂಧರ್ಭ ಎದುರಾಗಿದೆ. ಈ ಕಾರ್ಯ ಕ್ಕೆ ಕೈ ಜೋಡಿಸುತ್ತಾ ಒಂದಾಗಿ ಹೇಳೋಣ’ ಭಾರತ್ ಮಾತಾಕಿ ಜೈ’
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಆ.5-7 ಉತ್ತಮ ಮಳೆ – ಹವಾಮಾನ ಇಲಾಖೆ ಮಾಹಿತಿ

ರಾಜ್ಯದ ಕೆಲವು ಕಡೆ ಮಳೆ ಕಡಿಮೆ ಇದ್ದು, ಮುಂದಿನ 7 ದಿನಗಳ ಹವಾಮಾನ…

2 hours ago

ಪ್ರೇಮ ಸಂಬಂಧದಲ್ಲಿ ಈ ರಾಶಿಯವರಿಗೆ ವಿಶ್ವಾಸದ ಕೊರತೆಯ ಸಮಸ್ಯೆ

ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…

2 hours ago

ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ 6 ಕಾರು ಧರ್ಮಸ್ಥಳಕ್ಕೆ ಕೊಡುಗೆ

ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…

2 hours ago

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ

ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…

21 hours ago

ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌

ಹಲಸಿನ ಬೇಳೆ ಸೂಪ್‌ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…

1 day ago

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…

1 day ago