Advertisement
ಅನುಕ್ರಮ

ಸ್ವಾತಂತ್ರ್ಯ…….. ನೆನಪಿನಂಗಳದಿಂದ……

Share

ಪ್ರತಿವರ್ಷದಂತೆ ಇಂದು ಸಂಭ್ರಮದ ದಿನ… ಈ ಆಚರಣೆಗಾಗಿ ಎಲ್ಲ ದೇಶಭಕ್ತ ರ ಮನಸ್ಸು ಹಾತೊರೆಯುತ್ತಿದೆ…ಆದರೆ ನನ್ನ ಮನಸ್ಸು ಮರುಗುತ್ತಿದೆ… ಸ್ವಾತಂತ್ರ್ಯ ಎಂಬ ಪದದ ಅರ್ಥವೇನು? ಎಂದೂ ಇಂದಿಗೂ ಅರ್ಥವಾಗಿಲ್ಲ…

ಇಂದು‌ ಹೆತ್ತವರು,ಮಡದಿ ಮಕ್ಕಳನ್ನು ಬಿಟ್ಟು ದೇಶದೊಳಕ್ಕೆ ಪಾಪಿಗಳೆಲ್ಲಿ ನುಸುಳಿ ಬರುವರೋ ಎಂಬ ಆತಂಕದಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು‌‌ ಕಾಯುತ್ತಿದ್ದಾರೆ.. ಸ್ವಾತಂತ್ರ್ಯದ ಸಂಭ್ರಮ ಕ್ಕೆ ತಿರಂಗ ಧ್ವಜವನ್ನು ಬಿಗಿಬಂದೋಬಸ್ತಿನಲ್ಲಿ‌ ಹಾರಿಸುವ ಪರಿಸ್ಥಿತಿ ನಮ್ಮದು.. ಆದರೂ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.. ನಾವು ಸ್ವತಂತ್ರ ರು,ಗಾಂಧೀಜಿಯವರು ಯಾವಾಗ ಹೆಣ್ಣು ಮಕ್ಕಳು ರಾತ್ರಿ ವೇಳೆಯಲ್ಲಿ ಒಬ್ಬಂಟಿಗರಾಗಿ ನಡೆಯುತ್ತಾರೋ ಅಂದು ದೇಶ ಸ್ವತಂತವಾದಂತೆ,ಎಂದಿದ್ದರು .ಎಷ್ಟು ಹೆಣ್ಣುಮಕ್ಕಳು ಈ‌‌ ಪವಿತ್ರ ಭಾರತಾಂಭೆಯ ಮಣ್ಣಿನಲ್ಲಿ ರಾತ್ರಿ ಹೊತ್ತು ನಡೆದಿದ್ದಾರೋ ಗೊತ್ತಿಲ್ಲ.. ಆದರೆ ಹಗಲು ಹೊತ್ತಿನಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳ ಮೇಲೂ ಅತ್ಯಾಚಾರದಂತಹ ಘೋರ ಅಪರಾಧಗಳು ನಡೆಯುತ್ತಿರುವುದು ಸುಳ್ಳಲ್ಲ..ಸ್ವಾತಂತ್ರ್ಯ ಕ್ಕಾಗಿ ತಮ್ಮಲ್ಲಿರುವ ಹಣ ಚಿನ್ನಾಭರಣ ಎಲ್ಲವನ್ನೂ ಕೊಟ್ಟು ಈದೇಶಕ್ಕಾಗಿ‌ ಮಡಿದವರು ಅದೆಷ್ಟೋ ಮಂದಿ..ಆದರೆ ಇಂದು ಲೆಕ್ಕ ಇಲ್ಲದಷ್ಟು ಆಸ್ತಿ ಹಣ ಸಂಪಾದಿಸಿ ಮೆರೆಯುವವರು ಅದೆಷ್ಟೋ ಮಂದಿ.. ಹೇಳಲು ಹೊರಟರೆ ಮಗಿಯದ ಕತೆ..‌ನಾವು ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿದ್ದೇವೆ ನಿಜ..‌ ಆದರೆ ಈ ಕ್ಷಣವೂ ನಾವು ಇನ್ಯಾರದೋ ಆಕ್ರಮಣ ದ ಭಯದಲ್ಲಿದ್ದೇವೆ.. ನಮ್ಮವರ ಕಪಿಮುಷ್ಟಿಯೊಳಗೆ ನಾವು ಬಂಧಿತರಾಗಿದ್ದೇವೆ…. ಬಹುಷ: ಸಂಪೂರ್ಣ ಸ್ವಾತಂತ್ರ್ಯ ಅಸಾಧ್ಯವೇನೋ….?

ಏನೇ ಇರಲಿ.. ನನ್ನೆಲ್ಲಾ ಮಿತ್ರರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳು….

ನಮ್ಮೆಲ್ಲರ ಸ್ವಾತಂತ್ರ್ಯ ಕ್ಕೆ ಕಾರಣೀಭೂತರಾದ ಎಲ್ಲರಿಗೂ ನಮಿಸುತ್ತಾ  ಆಚರಣೆಗೆ ಲೋಪ ಬರದಂತೆ ಮೈಯೆಲ್ಲಾ ಕಣ್ಣಾಗಿಸಿ ಮಳೆ ಚಳಿಯ ಹಂಗು ತೊರೆದು ಕಾಯುತ್ತಿರುವ ಎಲ್ಲಾ ಸಹೋದರ ಸೈನಿಕ ಬಾಂಧವರಿಗೆ ತಾಯಿ ಭಾರತಿ ಇನ್ನಷ್ಟು ಶಕ್ತಿ ತುಂಬಲಿ ಆಯಸ್ಸು ಆರೋಗ್ಯ ಕರುಣಿಸಲಿ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಎಲೆಯ ಫೋಟೋ ತೆಗೆದರೆ AI ಕೀಟ ಯಾವುದೆಂದು ಹೇಳುತ್ತದೆ…! – 73 ಬೆಳೆಗಳ ಮೇಲೆ ಭಾರತದ ಹೊಸ ಕೃಷಿ ಕಣ್ಗಾವಲು

ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…

1 minute ago

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

10 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

16 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

1 day ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago