Advertisement
MIRROR FOCUS

ಸ್ವಾತಂತ್ರ್ಯಕ್ಕೆ ಮೆರುಗು ಮೂಡುವುದೇ ಜವಾಬ್ದಾರಿಯ ತಳಹದಿಯಲ್ಲಿ…..

Share

ಸ್ವಾತಂತ್ರ್ಯದಿನ ಶುಭಾಶಯ. ಎಲ್ಲರಿಗೂ ಶುಭಾಶಯವನ್ನು ತಿಳಿಸುತ್ತಾ, ಈ ಸಂದರ್ಭ ನಮ್ಮ ಜವಾಬ್ದಾರಿ ಏನು ಎಂಬುದರ ಬಗ್ಗೆಯೂ ಅರಿಯಬೇಕಿದೆ. ಈ ಕಾರಣದಿಂದ ರಾಕೇಶ್ ಕುಮಾರ್ ಕಮ್ಮಜೆ ಅವರು ಲೇಖನವನ್ನು ಬರೆದಿದ್ದಾರೆ. ಈ ಕಡೆಗೆ ನಮ್ಮ ಬೆಳಕು…


ಸ್ವಾತಂತ್ರ್ಯ ಅನ್ನುವುದು ಸಕಲ ಜೀವರಾಶಿಗಳೂ ಸದಾ ಬಯಸುವ ಸಂಗತಿಯೇ ಹೌದು. ಅದರಲ್ಲೂ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡವರಿಗೆ ಸ್ವಾತಂತ್ರ್ಯ ಉತ್ಸವವೆನಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ನಾವೂ ಹಾಗೆಯೇ!

ಸ್ವಾತಂತ್ರ್ಯ ಎಂಬ ಪದ ಬಿಡುಗಡೆ, ವಿಮೋಚನೆ ಎಂಬ ಅರ್ಥವನ್ನು ಹೊಮ್ಮಿಸುತ್ತದಾದರೂ, ಆ ಪದದ ಜತೆಜತೆಗೇ ಜವಾಬ್ದಾರಿ ಎಂಬ ಅಗೋಚರ ಭಾವವೂ ವ್ಯಕ್ತವಾಗುವುದನ್ನು ಗುರುತಿಸುವಲ್ಲಿ ಎಡವಬಾರದು. ಸ್ವಾತಂತ್ರ್ಯಕ್ಕೆ ಮೆರುಗು ಮೂಡುವುದೇ ಜವಾಬ್ದಾರಿಯ ತಳಹದಿಯಲ್ಲಿ ಎಂಬುದು ಸರ್ವವಿಧಿತ.

ನಮ್ಮ ದೇಶವೀಗ ವಿಶ್ವವಂದ್ಯ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯವನ್ನು ಹೊರಸೂಸುತ್ತಿದೆ. ಅದಕ್ಕೆ ಬೇಕಾದ ಯೋಗ್ಯತೆಗಳೂ ಇಲ್ಲಿವೆ. ಆದರೆ ಇಂತಹ ಸಾರ್ವಭೌಮ ರಾಷ್ಟ್ರದ ಪ್ರಜೆಗಳು ಹೇಗಿರಬೇಕು? ಇತರರಿಗೆ ಮಾದರಿಯಾಗಲಿರುವವರ ಆಚಾರ, ವಿಚಾರ, ವ್ಯವಹಾರಗಳು ಎಂತಿರಬೇಕು? ಈ ಕುರಿತು ಆಲೋಚಿಸಲು ಇದು ಪ್ರಶಸ್ತ ಸಂದರ್ಭವೆನಿಸುತ್ತದೆ. ಹಾಗೆ ನೋಡಿದರೆ ದೇಶವೊಂದು ಉಚ್ರಾಯ ಸ್ಥಿತಿ ಅಥವ ಅಧಃಪತನ ಕಾಣುವುದಕ್ಕೆ ಅಲ್ಲಿನ ಜನರ ಮನಃಸ್ಥಿತಿಗಳೂ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು. ಅಂದಹಾಗೆ, ನನ್ನ ದೇಶಕ್ಕೆ ನನ್ನ ಬಾಧ್ಯಸ್ಥಿಕೆ ಏನು ಎಂಬುದನ್ನು ನೆನಪು ಮಾಡುವುದಕ್ಕೇ ಈ ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆಯೇನೋ ಅನಿಸುತ್ತದೆ!

 

ರಾಕೇಶ್ ಕುಮಾರ್ ಕಮ್ಮಜೆ

ರಾಕೇಶ್ ಕುಮಾರ್ ಕಮ್ಮಜೆ

ಮುಖ್ಯಸ್ಥರು , ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು, ಪುತ್ತೂರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

4 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

5 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

12 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

13 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

2 days ago