ಸ್ವಾತಂತ್ರ್ಯದಿನ ಶುಭಾಶಯ. ಎಲ್ಲರಿಗೂ ಶುಭಾಶಯವನ್ನು ತಿಳಿಸುತ್ತಾ, ಈ ಸಂದರ್ಭ ನಮ್ಮ ಜವಾಬ್ದಾರಿ ಏನು ಎಂಬುದರ ಬಗ್ಗೆಯೂ ಅರಿಯಬೇಕಿದೆ. ಈ ಕಾರಣದಿಂದ ರಾಕೇಶ್ ಕುಮಾರ್ ಕಮ್ಮಜೆ ಅವರು ಲೇಖನವನ್ನು ಬರೆದಿದ್ದಾರೆ. ಈ ಕಡೆಗೆ ನಮ್ಮ ಬೆಳಕು…
ಸ್ವಾತಂತ್ರ್ಯ ಅನ್ನುವುದು ಸಕಲ ಜೀವರಾಶಿಗಳೂ ಸದಾ ಬಯಸುವ ಸಂಗತಿಯೇ ಹೌದು. ಅದರಲ್ಲೂ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡವರಿಗೆ ಸ್ವಾತಂತ್ರ್ಯ ಉತ್ಸವವೆನಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ನಾವೂ ಹಾಗೆಯೇ!
ಸ್ವಾತಂತ್ರ್ಯ ಎಂಬ ಪದ ಬಿಡುಗಡೆ, ವಿಮೋಚನೆ ಎಂಬ ಅರ್ಥವನ್ನು ಹೊಮ್ಮಿಸುತ್ತದಾದರೂ, ಆ ಪದದ ಜತೆಜತೆಗೇ ಜವಾಬ್ದಾರಿ ಎಂಬ ಅಗೋಚರ ಭಾವವೂ ವ್ಯಕ್ತವಾಗುವುದನ್ನು ಗುರುತಿಸುವಲ್ಲಿ ಎಡವಬಾರದು. ಸ್ವಾತಂತ್ರ್ಯಕ್ಕೆ ಮೆರುಗು ಮೂಡುವುದೇ ಜವಾಬ್ದಾರಿಯ ತಳಹದಿಯಲ್ಲಿ ಎಂಬುದು ಸರ್ವವಿಧಿತ.
ನಮ್ಮ ದೇಶವೀಗ ವಿಶ್ವವಂದ್ಯ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯವನ್ನು ಹೊರಸೂಸುತ್ತಿದೆ. ಅದಕ್ಕೆ ಬೇಕಾದ ಯೋಗ್ಯತೆಗಳೂ ಇಲ್ಲಿವೆ. ಆದರೆ ಇಂತಹ ಸಾರ್ವಭೌಮ ರಾಷ್ಟ್ರದ ಪ್ರಜೆಗಳು ಹೇಗಿರಬೇಕು? ಇತರರಿಗೆ ಮಾದರಿಯಾಗಲಿರುವವರ ಆಚಾರ, ವಿಚಾರ, ವ್ಯವಹಾರಗಳು ಎಂತಿರಬೇಕು? ಈ ಕುರಿತು ಆಲೋಚಿಸಲು ಇದು ಪ್ರಶಸ್ತ ಸಂದರ್ಭವೆನಿಸುತ್ತದೆ. ಹಾಗೆ ನೋಡಿದರೆ ದೇಶವೊಂದು ಉಚ್ರಾಯ ಸ್ಥಿತಿ ಅಥವ ಅಧಃಪತನ ಕಾಣುವುದಕ್ಕೆ ಅಲ್ಲಿನ ಜನರ ಮನಃಸ್ಥಿತಿಗಳೂ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು. ಅಂದಹಾಗೆ, ನನ್ನ ದೇಶಕ್ಕೆ ನನ್ನ ಬಾಧ್ಯಸ್ಥಿಕೆ ಏನು ಎಂಬುದನ್ನು ನೆನಪು ಮಾಡುವುದಕ್ಕೇ ಈ ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆಯೇನೋ ಅನಿಸುತ್ತದೆ!
ರಾಕೇಶ್ ಕುಮಾರ್ ಕಮ್ಮಜೆ
ಮುಖ್ಯಸ್ಥರು , ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…