ಆಹಾರ ಹಾಗೂ ನಿದ್ದೆ ಪರಸ್ಪರ ಸಂಬಂಧ ಹೊಂದಿದ್ದು, ಉತ್ತಮ ನಿದ್ರೆ ಬರಲು ಹಸಿವು ಅಗತ್ಯ. ಅದೇ ರೀತಿ ಸರಿಯಾದ ಆಹಾರ ಸೇವನೆಯಿಂದ ಉತ್ತಮ ನಿದ್ರೆ ಪ್ರಾಪ್ತವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಭಾನುವಾರ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯ ಅಂಗವಾಗಿ ‘ನಿದ್ದೆಯೆಂಬ ಪೂಜೆ’ ವಿಷಯದ ಕುರಿತು ಆಶೀರ್ವಚನ ನೀಡಿದ ಅವರು, ದೇಹಕ್ಕೆ ಸಂಬಂಧಿಸಿದ ಮೂರು ಪ್ರಮುಖ ಉಪಾಂಗಗಳಲ್ಲಿ ಆಹಾರ ಮತ್ತು ನಿದ್ದೆ ಪ್ರಮುಖವಾಗಿವೆ ಎಂದು ತಿಳಿಸಿದರು.
ನಿದ್ದೆ ಮಾತೃಸ್ವರೂಪಿಣಿ ದೇವಿ : ನಿದ್ರೆ ಕೇವಲ ಒಂದು ಅವಸ್ಥೆಯಲ್ಲ. ಅದು ಮಾತೃಸ್ವರೂಪಿಣಿ ದೇವಿಯೇ ಆಗಿದ್ದು, ದಿನವಿಡೀ ಉಂಟಾಗುವ ಶ್ರಮವನ್ನು ನಿವಾರಿಸಿ, ದೇಹ ಹಾಗೂ ಮನಸ್ಸಿನ ಆಯಾಸವನ್ನು ಸರಿಪಡಿಸಿ, ಹೊಸ ಶಕ್ತಿ ಮತ್ತು ಚೈತನ್ಯವನ್ನು ತುಂಬುವ ಶಕ್ತಿಯನ್ನು ಹೊಂದಿದೆ. ಸಕಾಲದಲ್ಲಿ ಬರುವ ನಿದ್ರೆ ಆರೋಗ್ಯ, ಸುಖ ಹಾಗೂ ಹಲವು ಸಿದ್ಧಿಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಸರಿಯಾದ ಸಮಯದ ನಿದ್ರೆ ಸಮಾಧಿಸ್ಥಿತಿ : ನಿದ್ರೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿಗೆ ಸಮಾನ ಎಂದು ಶಾಸ್ತ್ರಗಳು ಹೇಳಿವೆ. ರಾತ್ರಿ ಹಾಗೂ ಬೆಳಗಿನ ನಡುವಿನ ಎರಡು ಯಾಮಗಳು ನಿದ್ರೆಗೆ ಅತ್ಯುತ್ತಮ ಸಮಯ. ಮಧ್ಯರಾತ್ರಿ ಸಮಾನವಾಗಿ ಬರುವಂತೆ ನಿದ್ರೆ ಮಾಡಿದರೆ ಅದು ಕೇವಲ ನಿದ್ರೆಯಲ್ಲ, ಯೋಗಸಮಾಧಿಯಾಗಿದೆ ಎಂದು ಶ್ರೀಗಳು ವಿವರಿಸಿದರು.
ತಲೆಹಾಕುವ ದಿಕ್ಕಿಗೂ ಮಹತ್ವ : ಪೂರ್ವ ದಿಕ್ಕಿಗೆ ತಲೆಹಾಕಿ ಮಲಗಿದರೆ ಸಂಪತ್ತು, ದಕ್ಷಿಣಕ್ಕೆ ಮಲಗಿದರೆ ಆಯಸ್ಸಿನ ವೃದ್ಧಿ ಉಂಟಾಗುತ್ತದೆ. ಪಶ್ಚಿಮಕ್ಕೆ ತಲೆಹಾಕಿದರೆ ಚಿಂತೆ ಹೆಚ್ಚಾಗುತ್ತದೆ ಹಾಗೂ ಉತ್ತರಕ್ಕೆ ತಲೆಹಾಕಿ ಮಲಗುವುದು ಶಾಸ್ತ್ರದ ಪ್ರಕಾರ ಸೂಕ್ತವಲ್ಲ ಎಂದು ಅವರು ತಿಳಿಸಿದರು. ನಿದ್ರೆಗೆ ಮುನ್ನ ಮನಸ್ಸನ್ನು ಶಾಂತವಾಗಿರಿಸಿಕೊಂಡು, ಉದ್ವೇಗ ಉಂಟುಮಾಡುವ ವಿಷಯಗಳಿಂದ ದೂರವಿರಬೇಕು ಎಂದೂ ಸಲಹೆ ನೀಡಿದರು.
‘ಡಿನ್ನರ್’ ನಮ್ಮ ಸಂಸ್ಕೃತಿಯಲ್ಲ : ಸಂಜೆ ಸೂರ್ಯಾಸ್ತದ ಸುಮಾರು ಒಂದು ಗಂಟೆಯೊಳಗೆ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ರಾತ್ರಿಯ ಆಹಾರ ಕಡಿಮೆ ಪ್ರಮಾಣದಲ್ಲಿದ್ದು, ಸುಲಭವಾಗಿ ಜೀರ್ಣವಾಗುವಂತಿರಬೇಕು. ಭೂರಿ ಭೋಜನವನ್ನು ರಾತ್ರಿ ಸೇವಿಸುವುದು ಶಾಸ್ತ್ರದಲ್ಲಿ ನಿಷಿದ್ಧವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ‘ಡಿನ್ನರ್’ ಹೆಸರಿನಲ್ಲಿ ರಾತ್ರಿ ತಡವಾಗಿ ಭೋಜನ ಕೂಟ ನಡೆಸುವ ಪ್ರವೃತ್ತಿ ಆರೋಗ್ಯಕ್ಕೆ ಹಾನಿಕಾರಕ ಎಂದು ಅವರು ಹೇಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Jagadguru Sri Raghaveshwara Bharathi Swamiji said that food and sleep are closely connected, and proper hunger and balanced eating are essential for quality sleep. Speaking during the ‘Annam Brahma’ discourse at the Annabrahma Chaturmasya in Gokarna, he also advised against late-night dinners and highlighted the spiritual and health significance of disciplined sleep.
ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ…
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್ಶಿಪ್ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…
ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…
ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…