ರಾಜ್ಯದ ಸಾವಿರಾರು ಕೃಷಿಕರಿಗೆ ಹವಾಮಾನ ಮಾಹಿತಿಯ ಮೂಲಕ ವಿಶ್ವಾಸಾರ್ಹ ಮಾರ್ಗದರ್ಶನ ನೀಡುತ್ತಿರುವ ಸಾಯಿಶೇಖರ್ ಕರಿಕಳ ಅವರಿಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿ ಲಭಿಸಿದೆ. ಭಾನುವಾರ ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನವಾಗಿದೆ.
ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ನಾಡಿನ ಕೃಷಿಕರ ಪರವಾಗಿ ಅಭಿನಂದನೆಗಳು ಸಲ್ಲುತ್ತಿವೆ. ಸೇವೆಯನ್ನು ಗುರುತಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಸ್ಥೆಗಳಿಗೂ ಕೃಷಿಕರು ಅಭಿನಂದನೆ ಸಲ್ಲಿಸಿದ್ದಾರೆ.
ದ ರೂರಲ್ ಮಿರರ್.ಕಾಂ ಗೆ ಕಳೆದ 5 ವರ್ಷಗಳಿಂದ ಪ್ರತಿದಿನವೂ ಹವಾಮಾನ ವಿಶ್ಲೇಷಣೆ ಮಾಡಿ ಹವಾಮಾನ ವರದಿಯನ್ನು ಸಾಯಿಶೇಖರ್ ಕರಿಕಳ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೂರಲ್ ಮಿರರ್.ಕಾಂ ವತಿಯಿಂದ ಸಾಯಿಶೇಖರ್ ಕರಿಕಳ ಅವರಿಗೆ ಅಭಿನಂದನೆ.
ಸಾಯಿಶೇಖರ್ ಕರಿಕಳ ಹಾಗೂ ರಘುರಾಮ ಕಂಪದಕೋಡಿ ಇವರಿಬ್ಬರೂ ವೆದರ್ ಮ್ಯಾಪ್ ಹಾಗೂ ವಿವಿಧ ಹವಾಮಾನ ಮಾದರಿಗಳು ಹಾಗೂ ಸ್ಥಳೀಯ ಪರಿಸ್ಥಿತಿಗಳನ್ನು ವಿಶ್ಲೇಷಿಸಿ ಪ್ರತಿದಿನ ಮಳೆ ಮಾಹಿತಿಯನ್ನು ಕೃಷಿಕರಿಗೆ ತಲುಪಿಸುತ್ತಿದ್ದಾರೆ. ವಿಶೇಷವಾಗಿ ಅಡಿಕೆ ಬೆಳೆಗಾರರಿಗೆ ಇವರ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ. ಬೇಸಿಗೆಯಲ್ಲಿ ಅಡಿಕೆ ಒಣಗಿಸುವ ಸಂದರ್ಭದಿಂದ ಹಿಡಿದು ಮಳೆ ಆರಂಭವಾಗುವ ಸಾಧ್ಯತೆಗಳವರೆಗೆ ನೀಡುವ ಮುನ್ಸೂಚನೆ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಇವರ ಹವಾಮಾನ ಮಾಹಿತಿಯನ್ನು ಅನುಸರಿಸುತ್ತಿದ್ದು, ಕೃಷಿಕರ ವಿಶ್ವಾಸ ಗಳಿಸಿದ್ದಾರೆ. ದಿನನಿತ್ಯ ಸಮಯ ಮೀಸಲಿಟ್ಟು ಹವಾಮಾನ ವಿಶ್ಲೇಷಣೆ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ಮಾಹಿತಿ ನೀಡುತ್ತಿರುವ ಇವರ ಸೇವೆ ಗಮನಾರ್ಹವಾಗಿದೆ.
ಹವಾಮಾನ ವಿಶ್ಲೇಷಣೆ ಸುಲಭದ ಕೆಲಸವಲ್ಲ. ಕ್ಷಣಕ್ಷಣಕ್ಕೂ ಬದಲಾಗುವ ಪ್ರಕೃತಿಯ ನಡುವೆ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ನಿಖರತೆಗೆ ಅತ್ಯಂತ ಸಮೀಪವಾಗುವ ಮುನ್ಸೂಚನೆ ನೀಡುವ ಪ್ರಯತ್ನವನ್ನು ಇಬ್ಬರೂ ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಕೃತಿಯ ಅಂತಿಮ ನಿರ್ಧಾರವನ್ನು ಯಾರೂ ಊಹಿಸಲು ಸಾಧ್ಯವಿಲ್ಲದಿದ್ದರೂ, ವೈಜ್ಞಾನಿಕ ಮಾಹಿತಿಯ ಆಧಾರದಲ್ಲಿ ಕೃಷಿಕರಿಗೆ ನೆರವಾಗುವ ಸೇವೆಯನ್ನು ಅವರು ಮುಂದುವರಿಸಿದ್ದಾರೆ.
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿಗೆ ಈ ಬಾರಿ ಸಾಯಿಶೇಖರ್ ಕರಿಕಳ ಆಯ್ಕೆಯಾಗಿದ್ದಾರೆ. ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ನಾಡಿನ ಕೃಷಿಕರ ಪರವಾಗಿ ಅಭಿನಂದನೆಗಳು ಸಲ್ಲುತ್ತಿವೆ. ಜೊತೆಗೆ, ಕೃಷಿಕರಿಗಾಗಿ ಸಮಾನವಾಗಿ ಸೇವೆ ಸಲ್ಲಿಸುತ್ತಿರುವ ರಘುರಾಮ ಕಂಪದಕೋಡಿ ಅವರ ಕೊಡುಗೆಗೂ ಗೌರವ ವ್ಯಕ್ತವಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Sai Shekhar Karikala has been selected for the prestigious Raita Ratna Award instituted by Kannada Prabha and Suvarna News for his valuable weather advisory service to farmers.
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್ಶಿಪ್ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…
ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…
ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…