ಸುಳ್ಯ: ಕೊರೋನಾ ಸಮಯದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆಯಾಗಬಾರದು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನ ಮಾಡಿದ ಶಿಕ್ಷಕರಿಗೆ ರಾಜ್ಯದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪ್ರಣಾಮ ಸಲ್ಲಿಸಿದ್ದಾರೆ.
ಸುಳ್ಯದ ತಾಲೂಕಿನಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಕೊರೋನಾ ಸಮಯದಲ್ಲಿ ನಿರಂತರ ಪ್ರಯತ್ನ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಕೆಲಸ ಜೂನ್ ತಿಂಗಳಿನಿಂದಲೇ ಆರಂಭ ಮಾಡಿದ್ದರು. ಜಿಲ್ಲೆಯ ಬೇರೆಲ್ಲೂ ಪಾಠ ಆರಂಭವಾಗದ ಹೊತ್ತಿನಲ್ಲಿ ಸುಳ್ಯದ ಶಿಕ್ಷಕರ ತಂಡ ಪಾಠದ ಬಗ್ಗೆ ಸಿದ್ಧವಾಗಿತ್ತು. ಈ ಪಾಸಿಟಿವ್ ಸಂಗತಿಯ ಕಡೆಗೆ ಸುಳ್ಯನ್ಯೂಸ್.ಕಾಂ ಬೆಳಕು ಚೆಲ್ಲಿತ್ತು. ಇದನ್ನು ಗಮನಿಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಪೇಸ್ ಬುಕ್ ನಲ್ಲಿ ಶೇರ್ ಮಾಡಿ “ ಸರಕಾರಿ ಶಾಲಾ ಮಕ್ಕಳ ಹಿತ ಧ್ಯಾನದಲ್ಲಿಯೇ ತೊಡಗಿರುವ ಈ ನನ್ನ ಶಿಕ್ಷಕ ಬಂಧುಗಳಿಗೆ ಪ್ರಣಾಮ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಸುಳ್ಯ ನ್ಯೂಸ್ ವಿಶೇಷ ವರದಿ ಹೀಗಿದೆ…..
https://theruralmirror.com/?p=21918
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel