ನಿನ್ನ ಗರ್ಭದಿಂದ ನಾನಂದು ಹೊರಬಂದೆ, ನನ್ನ ಕಂಡೆ ನೀ ಮಗಳಂತೆ
ಸಾಗರದಲ್ಲಿಯ ನೀರಿನಂತೆ, ಭುವಿಯಲ್ಲಿ ಕಲ್ಲು ನೆರೆದಂತೆ
ನಿನ್ನ ಪ್ರೀತಿಯ ಚುಂಬನ,ನನಗದುವೇ ಅಮೃತ ಸಿಂಚನ
ಅಮ್ಮಾ ನಿನ್ನ ಮಡಿಲು,ನನಗದುವೇ ತೂಗುವ ತೊಟ್ಟಿಲು
ಎಡವಿ ಬಿದ್ದಾಗ, ಕೈ ಹಿಡಿದು ನಡೆಸಿದೆ ನೀನು
ನಡೆವ ಕಾಲಿಗೆ, ಗೆಜ್ಜೆ ಕಟ್ಟಿ ಕುಣಿಸಿದೆ ನೀನು
ನನ್ನ ನಗುವಲ್ಲಿ,ನೋವನ್ನೆಲ್ಲಾ ಮರೆತೆ ನೀನು
ನಿನ್ನ ಪ್ರೀತಿಯ ಸಾರೊಟಿಗೆ ಸಾರಥಿಯಾಗಲೇ ನಾನು?
ಮುಂಜಾನೆ ರವಿ ಕಾಣೋ ಮುನ್ನ ಕಾಣೋ ದೇವಿ ನೀನು
ಚಂದಿರ ಮರೆಯಾಗೋ ತನಕ ದುಡಿಯುವ ಮಾತೆ ನೀನು
ನಮಗಾಗಿಯೇ ನಿನ್ನೆಲ್ಲ ತವಕ,ಬಯಸಿದವಳಲ್ಲ ಹೊನ್ನು ಕನಕ
ನನ್ನಲ್ಲಿಹ ಆತಂಕ ಕೊನೆಯಾಗದೆ ನಿನ್ನ ಈ ಕಾಯಕ
ಸಾವಿರ ಸಾವಿರ ಕನಸುಗಳೇ ಹುದುಗಿದ್ದರೂ
ನಾನಿನ್ನ ಬಿಡಲಾರೆನು ನನ್ನಾಣೆಗೂ
ಸುಖದ ಸುಪ್ಪತ್ತಿಗೆಯೇ ನನ್ನ ಮುಂದಿದ್ದರೂ
ಈ ಜೀವ ಮುಡಿಪಾಗಿಡುವೆ ನಿನಗೆಎಂದೆಂದಿಗೂ…….
ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…
ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…
ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…
ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…
ಮುಂದಿನ ಐದು ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ…
ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಏಪ್ರಿಲ್ 18ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.…