ನಿನ್ನ ಗರ್ಭದಿಂದ ನಾನಂದು ಹೊರಬಂದೆ, ನನ್ನ ಕಂಡೆ ನೀ ಮಗಳಂತೆ
ಸಾಗರದಲ್ಲಿಯ ನೀರಿನಂತೆ, ಭುವಿಯಲ್ಲಿ ಕಲ್ಲು ನೆರೆದಂತೆ
ನಿನ್ನ ಪ್ರೀತಿಯ ಚುಂಬನ,ನನಗದುವೇ ಅಮೃತ ಸಿಂಚನ
ಅಮ್ಮಾ ನಿನ್ನ ಮಡಿಲು,ನನಗದುವೇ ತೂಗುವ ತೊಟ್ಟಿಲು
ಎಡವಿ ಬಿದ್ದಾಗ, ಕೈ ಹಿಡಿದು ನಡೆಸಿದೆ ನೀನು
ನಡೆವ ಕಾಲಿಗೆ, ಗೆಜ್ಜೆ ಕಟ್ಟಿ ಕುಣಿಸಿದೆ ನೀನು
ನನ್ನ ನಗುವಲ್ಲಿ,ನೋವನ್ನೆಲ್ಲಾ ಮರೆತೆ ನೀನು
ನಿನ್ನ ಪ್ರೀತಿಯ ಸಾರೊಟಿಗೆ ಸಾರಥಿಯಾಗಲೇ ನಾನು?
ಮುಂಜಾನೆ ರವಿ ಕಾಣೋ ಮುನ್ನ ಕಾಣೋ ದೇವಿ ನೀನು
ಚಂದಿರ ಮರೆಯಾಗೋ ತನಕ ದುಡಿಯುವ ಮಾತೆ ನೀನು
ನಮಗಾಗಿಯೇ ನಿನ್ನೆಲ್ಲ ತವಕ,ಬಯಸಿದವಳಲ್ಲ ಹೊನ್ನು ಕನಕ
ನನ್ನಲ್ಲಿಹ ಆತಂಕ ಕೊನೆಯಾಗದೆ ನಿನ್ನ ಈ ಕಾಯಕ
ಸಾವಿರ ಸಾವಿರ ಕನಸುಗಳೇ ಹುದುಗಿದ್ದರೂ
ನಾನಿನ್ನ ಬಿಡಲಾರೆನು ನನ್ನಾಣೆಗೂ
ಸುಖದ ಸುಪ್ಪತ್ತಿಗೆಯೇ ನನ್ನ ಮುಂದಿದ್ದರೂ
ಈ ಜೀವ ಮುಡಿಪಾಗಿಡುವೆ ನಿನಗೆಎಂದೆಂದಿಗೂ…….
ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…