Advertisement
ಅನುಕ್ರಮ

ಮನೆ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ…ಜೈ ಗಣೇಶ..

Share
ಚೌತಿಯೆಂದರೆ ಎಲ್ಲರ‌ ಮೆಚ್ಚಿನ ಹಬ್ಬ. ಮನೆ ಮನೆಯಲ್ಲೂ ಸಂಭ್ರಮ. ಅದಕ್ಕೂ ಕಾರಣವಿದೆ….
ಗಣಪನೆಂದರೆ ಎಲ್ಲರ‌ ಪ್ರೀತಿಯವ. ಪ್ರಥಮ ವಂದಿತ. ಅವನ ಹುಟ್ಟು ಹಬ್ಬವೆಂದರೆ ಸುಮ್ಮನೆಯೇ. ಎಲ್ಲರೂ ಆಚರಿಸುವುದೇ. ಹಳ್ಳಿಗಳಿರಲಿ , ಪೇಟೆಗಳಿರಲಿ ಎಲ್ಲೆಲ್ಲೂ ಖುಷಿಯೇ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಸಂಭ್ರಮ ಪಡುವ ದಿನವೇ ಗಣೇಶ ಚತುರ್ಥಿ.  ದೇವಸ್ಥಾನಗಳಲ್ಲಿ   ಶಾಲಾ ಕಾಲೇಜುಗಳಲ್ಲಿ ,  ಊರು ಕೇರಿಗಳಲ್ಲಿ , ಪೇಟೆ, ಬೀದಿಗಳಲ್ಲಿ ಗಣಪನ ಮೂರ್ತಿಗಳನ್ನಿಟ್ಟು ಪೂಜಿಸಲಾಗುವುದು. ಅವರವರ ಬಕುತಿಗೆ , ಭಾವನೆಗೆ ಹೊಂದುವಂತೆ ಗಣೇಶನ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ.
ಗಣೇಶನಿಗೆ ಎಲ್ಲರೂ ಪ್ರೀತಿ ಪಾತ್ರರೇ. ಆತನಿಗೆ ಎಲ್ಲೆಡೆಯೂ ಅಭಿಮಾನಿಗಳೇ. ವಿವಿಧ ಭಕ್ಷ್ಯ ಭೋಜನಗಳನ್ನು ಇಷ್ಟ ಪಡುವ ಗಣಪನಿಗೆ ಪ್ರೀತಿಯಿಂದ ಕೊಟ್ಟ ಗರಿಕೆ ಹುಲ್ಲೂ ಇಷ್ಟವೇ.
ಸಂಕಷ್ಟಗಳ ಸರಮಾಲೆಗಳಿದ್ದರೂ ಗಣಪನಲ್ಲಿ ನಿವೇದಿಸಿದರೆ ಸಮಾಧಾನ. ಯಾವುದೇ ಕೆಲಸ ಕಾರ್ಯಗಳು ಆರಂಭಿಸಬೇಕಾದರೆ ಮೊದಲು ಗಣೀಶನನ್ನು ಸ್ಮರಿಸಿ ಮುಂದುವರಿಯುವುದು ನಮ್ಮ ಸಂಪ್ರದಾಯ. ಹೊಸತಾಗಿ ಕಟ್ಟುವ, ಮನೆ ಇರಲಿ, ಉಪನಯನ, ಮದುವೆಯಂತಹ ಶುಭಕಾರ್ಯಗಳೆಲ್ಲವೂ ಆರಂಭ ಗೊಳ್ಳುವುದು ಗಣೇಶನ ಸ್ತುತಿಯಿಂದಲೇ ಆರಂಭ. ಹಾಗಾಗಿ ಹೆಚ್ಚಿನ ಮನೆಗಳಲ್ಲಿ ಪ್ರತಿ ವರುಷವೂ ಗಣಪತಿ ಹವನವನ್ನು ತಪ್ಪದೆ ಮಾಡುತ್ತಾರೆ.
ಬಂದರೆ ಕಷ್ಟಗಳೆಲ್ಲಾ ಒಟ್ಟೊಟ್ಟಿಗೆ ಬಂದು ಬಿಡುತ್ತವೆ. ಗಣೇಶನ ದಯೆಯೊಂದಿದ್ದರೆ ದೊಡ್ಡದಾಗಿ ಬರುವಂತಹುದು ಸಣ್ಣದರಲ್ಲೇ ಮುಗಿದು ಬಿಡುತ್ತದೆ.  ನಂಬಿದವರ ಯಾವತ್ತೂ ಕೈಬಿಡಲಾರ.ಆತನ ಆಶೀರ್ವಾದವೊಂದು ಜೊತೆಗಿದ್ದರೆ  ಯಾವುದೇ ಭಯ ನಮ್ಮ ಬಳಿ ಸುಳಿಯದು. ಜೈ ಗಣೇಶ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

5 hours ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

10 hours ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

1 day ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

1 day ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

1 day ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago