Advertisement
ಅನುಕ್ರಮ

ಮನೆ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ…ಜೈ ಗಣೇಶ..

Share
ಚೌತಿಯೆಂದರೆ ಎಲ್ಲರ‌ ಮೆಚ್ಚಿನ ಹಬ್ಬ. ಮನೆ ಮನೆಯಲ್ಲೂ ಸಂಭ್ರಮ. ಅದಕ್ಕೂ ಕಾರಣವಿದೆ….
ಗಣಪನೆಂದರೆ ಎಲ್ಲರ‌ ಪ್ರೀತಿಯವ. ಪ್ರಥಮ ವಂದಿತ. ಅವನ ಹುಟ್ಟು ಹಬ್ಬವೆಂದರೆ ಸುಮ್ಮನೆಯೇ. ಎಲ್ಲರೂ ಆಚರಿಸುವುದೇ. ಹಳ್ಳಿಗಳಿರಲಿ , ಪೇಟೆಗಳಿರಲಿ ಎಲ್ಲೆಲ್ಲೂ ಖುಷಿಯೇ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಸಂಭ್ರಮ ಪಡುವ ದಿನವೇ ಗಣೇಶ ಚತುರ್ಥಿ.  ದೇವಸ್ಥಾನಗಳಲ್ಲಿ   ಶಾಲಾ ಕಾಲೇಜುಗಳಲ್ಲಿ ,  ಊರು ಕೇರಿಗಳಲ್ಲಿ , ಪೇಟೆ, ಬೀದಿಗಳಲ್ಲಿ ಗಣಪನ ಮೂರ್ತಿಗಳನ್ನಿಟ್ಟು ಪೂಜಿಸಲಾಗುವುದು. ಅವರವರ ಬಕುತಿಗೆ , ಭಾವನೆಗೆ ಹೊಂದುವಂತೆ ಗಣೇಶನ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ.
ಗಣೇಶನಿಗೆ ಎಲ್ಲರೂ ಪ್ರೀತಿ ಪಾತ್ರರೇ. ಆತನಿಗೆ ಎಲ್ಲೆಡೆಯೂ ಅಭಿಮಾನಿಗಳೇ. ವಿವಿಧ ಭಕ್ಷ್ಯ ಭೋಜನಗಳನ್ನು ಇಷ್ಟ ಪಡುವ ಗಣಪನಿಗೆ ಪ್ರೀತಿಯಿಂದ ಕೊಟ್ಟ ಗರಿಕೆ ಹುಲ್ಲೂ ಇಷ್ಟವೇ.
ಸಂಕಷ್ಟಗಳ ಸರಮಾಲೆಗಳಿದ್ದರೂ ಗಣಪನಲ್ಲಿ ನಿವೇದಿಸಿದರೆ ಸಮಾಧಾನ. ಯಾವುದೇ ಕೆಲಸ ಕಾರ್ಯಗಳು ಆರಂಭಿಸಬೇಕಾದರೆ ಮೊದಲು ಗಣೀಶನನ್ನು ಸ್ಮರಿಸಿ ಮುಂದುವರಿಯುವುದು ನಮ್ಮ ಸಂಪ್ರದಾಯ. ಹೊಸತಾಗಿ ಕಟ್ಟುವ, ಮನೆ ಇರಲಿ, ಉಪನಯನ, ಮದುವೆಯಂತಹ ಶುಭಕಾರ್ಯಗಳೆಲ್ಲವೂ ಆರಂಭ ಗೊಳ್ಳುವುದು ಗಣೇಶನ ಸ್ತುತಿಯಿಂದಲೇ ಆರಂಭ. ಹಾಗಾಗಿ ಹೆಚ್ಚಿನ ಮನೆಗಳಲ್ಲಿ ಪ್ರತಿ ವರುಷವೂ ಗಣಪತಿ ಹವನವನ್ನು ತಪ್ಪದೆ ಮಾಡುತ್ತಾರೆ.
ಬಂದರೆ ಕಷ್ಟಗಳೆಲ್ಲಾ ಒಟ್ಟೊಟ್ಟಿಗೆ ಬಂದು ಬಿಡುತ್ತವೆ. ಗಣೇಶನ ದಯೆಯೊಂದಿದ್ದರೆ ದೊಡ್ಡದಾಗಿ ಬರುವಂತಹುದು ಸಣ್ಣದರಲ್ಲೇ ಮುಗಿದು ಬಿಡುತ್ತದೆ.  ನಂಬಿದವರ ಯಾವತ್ತೂ ಕೈಬಿಡಲಾರ.ಆತನ ಆಶೀರ್ವಾದವೊಂದು ಜೊತೆಗಿದ್ದರೆ  ಯಾವುದೇ ಭಯ ನಮ್ಮ ಬಳಿ ಸುಳಿಯದು. ಜೈ ಗಣೇಶ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

10 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

10 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

10 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

11 hours ago

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

1 day ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago