Advertisement
MIRROR FOCUS

ಮಳೆಯ ಹಿನ್ನೆಲೆ : ಗ್ರಾಮೀಣ ಭಾಗದಲ್ಲಿ ತುರ್ತು ಸಂಪರ್ಕಕ್ಕೆ ಬಿ ಎಸ್ ಎನ್ ಎಲ್ ಸೇವೆಗೆ‌ ಡೀಸೆಲ್ ವ್ಯವಸ್ಥೆ ಮಾಡಿದ ಬಳಕೆದಾರರು..!

Share

ವಾರದಿಂದ ಸುರಿಯುವ ಮಳೆ ಇನ್ನೂ ಮಳೆ ನಿಂತಿಲ್ಲ. ಗ್ರಾಮೀಣ ಭಾಗವಂತೂ ಯಾವುದೇ ಸಂಪರ್ಕವಿಲ್ಲದೆ ಕಂಗೆಟ್ಟಿತು. ಯಾವುದೇ ಸಹಾಯವಾಣಿಯೂ ಸಂಪರ್ಕವಾಗಲಿಲ್ಲ, ಶಾಲೆಗೆ ರಜೆ ಇದ್ದರೂ ತಿಳಿಯಲಿಲ್ಲ. ತುರ್ತು ಸಂಪರ್ಕಕ್ಕೂ ಸಾಧ್ಯವಾಗಲಿಲ್ಲ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ಸೇವೆ ಇತ್ತು. ವಿವಿಧ ಕಾರಣದಿಂದ ಅದೆಲ್ಲವೂ ಸ್ಥಗಿತಗೊಂಡಿತು. ಆಗ ಜನರೇ ವ್ಯವಸ್ಥೆ ಗೆ ಮುಂದಾದದರು. ಈ ಕಡೆಗೆ ನಮ್ಮ ಬೆಳಕು…


 

ಗ್ರಾಮೀಣ ಭಾಗದಲ್ಲಿ ತುರ್ತು ಸಂಪರ್ಕ ವ್ಯವಸ್ಥೆಗೆ ಬಳಕೆದಾರರೇ ಡೀಸೆಲ್ ಸಂಗ್ರಹಿಸಿ ಬಿ ಎಸ್ ಎನ್ ಎಲ್ ಟವರ್ ಚಾಲೂ ಮಾಡಿ ಸೇವೆ ಒದಗಿಸಿಕೊಂಡ ಘಟನೆ ಸುಳ್ಯ ತಾಲೂಕಿನ ವಿವಿಧ ಕಡೆ ನಡೆದಿದೆ.‌ಈಗ ಇರುವುದು ಬಿ ಎಸ್ ಎನ್ ಎಲ್‌ನ ತಕ್ಷಣದ ವ್ಯವಸ್ಥೆ..!.

ಕಳೆದ ಒಂದು ‌ವಾರದಿಂದ ಜಿಲ್ಲೆಯಾದ್ಯಂತ ಭಾರೀ ಮಳೆ. ಇದರ ಜೊತೆಗೆ ಗಾಳಿಯೂ ಬೀಸಿದ ಕಾರಣ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತವಾಗಿ‌ ಊರೇ ಕತ್ತಲಲ್ಲಿ ಮುಳುಗಿತು. ಮೊದಲೇ ಡೀಸೆಲ್ ಸರಬರಾಜು ಇಲ್ಲದೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಇಲ್ಲವಾದರೆ ಮೊಬೈಲ್ ಸಂಪರ್ಕವೂ ಕಡಿತವಾಗುತ್ತಿತ್ತು.‌
ಈಗ ಮಳೆ,‌ ಗಾಳಿಯ ಕಾರಣ ವಿದ್ಯುತ್ ಕಡಿತವಾಗಿ ತುರ್ತು ಸಂಪರ್ಕವೂ ಇಲ್ಲವಾಗಿತ್ತು.‌ಮಳೆಯ ಆರ್ಭಟ‌ ಹೆಚ್ಚಾಗಿ ತುರ್ತು ಸಂಪರ್ಕವೂ ಇಲ್ಲದೆ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಜನಪ್ರತಿನಿಧಿಗಳೂ‌ ಸೇರಿದಂತೆ ಅಧಿಕಾರಿಗಳು ನಿಸ್ಸಾಯಕ ಸ್ಥಿತಿಯಲ್ಲಿದ್ದರು. ಹೀಗಾಗಿ ಗ್ರಾಮಸ್ಥರೇ ಡೀಸಲ್ ಸಂಗ್ರಹಿಸಿ ಜನರೇಟರ್ ಚಾಲೂ ಮಾಡಿ ಸಂಪರ್ಕ ಮಾಡಿ ಕೊಂಡರು. ಈಗ ಬಿಎಸ್‌ಎನ್‌ಎಲ್‌ ಸಿಬಂದಿಗಳು ತಕ್ಷಣದ ತಾಂತ್ರಿಕ ವ್ಯವಸ್ಥೆ ಮಾಡಿಸಿಕೊಡಬೇಕಾಗಿದೆ.

ಸುಳ್ಯ ತಾಲೂಕಿನ ಕೊಲ್ಲಮೊಗ್ರ,‌ಹರಿಹರ ಪ್ರದೇಶದಲ್ಲಿ ಡೀಸೆಲ್ ಸಂಗ್ರಹವಾದರೆ ಗುತ್ತಿಗಾರು ಗ್ರಾಮದ‌ ಕಮಿಲದಲ್ಲೂ ಸಾರ್ವಜನಿಕರೇ ಡೀಸೆಲ್‌ ಸಂಗ್ರಹಿಸಿ ಜನರೇಟರ್ ಚಾಲೂ ಮಾಡಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಂಡರು.‌ ಗಾಳಿ ಮಳೆಗೆ‌‌ ವಿದ್ಯುತ್ ಕಂಬ ತುಂಡಾಗಿ ಕಮಿಲದಲ್ಲಿ ಒಂದು ವಾರದಿಂದ ವಿದ್ಯುತ್ ಸ್ಥಗಿತಗೊಂಡಿದ್ದು ಮೆಸ್ಕಾಂ‌ ಸಿಬಂದಿಗಳು ಸಮಾರೋಪಾದಿಯಲ್ಲಿ ಭಾರೀ ಮಳೆಯ ನಡುವೆಯೂ ನಿರಂತರ ಕೆಲಸ ಮಾಡುತ್ತಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

2 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

9 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

18 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

1 day ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago