ಮಿಡತೆ ದಾಳಿ ಬಗ್ಗೆ ಕೃಷಿ ಇಲಾಖೆ ಹೀಗೆ ಸಲಹೆ ನೀಡುತ್ತದೆ….
ಮಿಡತೆ ಕೀಟ ಹಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿರುತ್ತದೆ ಹಾಗೂ ಕಾಣಿಸಿಕೊಂಡ ಮಿಡತೆಗಳು ಮರುಭೂವಿಯಲ್ಲಿ ಕಂಡುಬಂದ ಮಿಡತೆಗಳು ಆಗಿರುವುದಿಲ್ಲ. ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ ಅವುಗಳ ನಿಯಂತ್ರಣಕ್ಕಾಗಿ, ಕೀಟವು ಬೆಳೆಗಳಲ್ಲಿ ಕಂಡುಬಂದಲ್ಲಿ, ಡ್ರಮ್ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸಬಹುದು.
ಬೇವಿನ ಮೂಲದ ಕೀಟನಾಶಕಗಳನ್ನು (0.15% ಇ.ಸಿ @3ಎಂ.ಎಲ್/ಲೀ) ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆಯಾಗುತ್ತದೆ. ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು.
ಕೀಟವು ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶ ಕನಿಷ್ಟ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಚಲಿಸಿ ರಾತ್ರಿ ವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್ ಜೆಟ್ ಸ್ಪ್ರೇಯರ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು.ಆದರೆ ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ಬೆಳೆಯ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕೀಟನಾಶಕ ಕ್ಲೊರೋಪೈರಿಪಾಸ್ 20% ಪ್ರತೀ ಹೆಕ್ಟರ್ ಗೆ 1.2 ಲೀ, ಕೀಟನಾಶಕ ಕ್ಲೊರೋಪೈರಿಪಾಸ್ 50% ಪ್ರತೀ ಹೆಕ್ಟರ್ ಗೆ 480 ಎಂ.ಎಲ್, ಕೀಟನಾಶ ಕಡೆಲ್ಟಮೆಥ್ರಿನ್ 2.8 ಪ್ರತಿ ಹೆಕ್ಟೇರ್ ಗೆ 450 ಎಂ.ಎಲ್, ಕೀಟನಾಶಕ ಫಿಪ್ರೋನಿಲ್ 5% ಎಸ್.ಸಿ ಪ್ರತಿ ಹೆಕ್ಟೇರ್ ಗೆ 125 ಎಂ.ಎಲ್, ಕೀಟನಾಶಕ ಫಿಪ್ರೋನಿಲ್ 2.8% ಇ.ಸಿ ಪ್ರತಿ ಹೆಕ್ಟೇರ್ ಗೆ 225 ಎಂ.ಎಲ್, ಕೀಟನಾಶ ಕಲಾಮ್ಡಾ ಸಹಲೋಥ್ರಿನ್ 5.0% ಇ.ಸಿ.ಪ್ರತಿಹೆಕ್ಟೇರ್ ಗೆ 400 ಎಂ.ಎಲ್, ಕೀಟನಾಶ ಕಲಾಮ್ಡಾ ಸಹಲೋಥ್ರಿನ್ 10.0% ಡಬ್ಲ್ಯೂಪಿ ಪ್ರತಿ ಹೆಕ್ಟೇರ್ ಗೆ 200 ಗ್ರಾಂ, ಕೀಟನಾಶಕ ಮಲಾಥಿಯಾನ್ 50% ಇ.ಸಿ.ಪ್ರತಿ ಹೆಕ್ಟೇರ್ ಗೆ 1.85 ಲೀ, ಕೀಟನಾಶಕ ಮಲಾಥಿಯಾನ್ 25% ಡಬ್ಲ್ಯೂಪಿ ಪ್ರತಿ ಹೆಕ್ಟೇರ್ ಗೆ 3.7 ಕಿ.ಗ್ರಾಂ ಕೀಟನಾಶಕಗಳನ್ನು ಬಳಸಿ ಹತೋಟಿ ಮಾಡಬಹುದು ಎಂದು ಪ್ರಕಟಣೆ ತಿಳಿಸುತ್ತದೆ.
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…
2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…
ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…