Advertisement
ಅನುಕ್ರಮ

ಮಿಣಿ ಮಿಣಿ ಮಿನುಗುವ ಮಿಂಚುಹುಳ

Share

ಮಳೆಗಾಲದಲ್ಲಿ ಆಗಸದಲ್ಲಿ ಮಿನುಗುವ ಬೆಳ್ಳಿ ಚುಕ್ಕಿಗಳಿಗೆ ಕಾರ್ಮೋಡದ ಪರದೆ.ಇದೇ ಸಮಯದಲ್ಲಿಗದ್ದೆ, ತೋಟ, ಕಾಡುಒಟ್ಟಾರೆ ಹೇಳುವುದರಾದರೆ ಪ್ರಕೃತಿಯ ಮಡಿಲಿನ ಕಡೆಗೆ ಹೋದರೆ ಕಾರ್ಮೋಡವನ್ನು ಸೀಳಿ ಧರೆಯತ್ತ ನಕ್ಷತ್ರಗಳು ಧಾವಿಸಿ ಬಂದಿವೆಯೋ ಏನೋ ಎಂದು ಭಾಸವಾಗುವುದು ನಿಜ. ಇದಕ್ಕೆಕಾರಣ ಹೊಳೆಯುವ ಬೆಳಕನ್ನು ಚೆಲ್ಲುತ್ತಾ ಹಾರುವ ಬೀಟಲ್‍ಜಾತಿಗೆ ಸೇರಿದ ಮಿಂಚುಹುಳಗಳು.

ಪ್ರಕೃತಿಯ ಚಮತ್ಕಾರಗಳಲ್ಲೊಂದಾದ ಈ ಕೀಟದ ಸುಂದರತೆಯನ್ನುಆಹ್ಲಾದಿಸುವ ಮನಸ್ಸಿದ್ದರೆ ಕತ್ತಲಲ್ಲಿ ಕಾಣುವ ಮಿಂಚುಹುಳದ ಈ ಬೆಳಕಿನಾಟ ಮನಕ್ಕೆ ತಂಪೆರೆಯವುದಂತು ನಿಜ. ಮಾನವಜಗತ್ತು ಎಷ್ಟೇ ವಿನೂತನ ಆವಿಷ್ಕಾರ ಮಾಡಿದರೂ ಪ್ರಕೃತಿಯ ಮಡಿಲಿನಲ್ಲಿರುವಇಂತಹಜೀವ ಸಂಕುಲಗಳಿಂದಾಗಿ ದೇವರ ಸೃಷ್ಟಿಗೆತಲೆಬಾಗಲೇ ಬೇಕು.

ಮಿಂಚುಹುಳಗಳ ದೇಹದ ಹಿಂಭಾಗದಲ್ಲಿರುವ ವಿಶಿಷ್ಟ ಕೋಶಗಳಲ್ಲಿರುವ ಪ್ರೋಟೀನ್ ಹಾಗು ಅಣುಗಳಿಂದಾಗಿ ಅಪರೂಪದ ಬೆಳಕು ಉತ್ಪತ್ತಿಯಾಗುತ್ತವೆ. ತಮ್ಮ ಶರೀರದಲ್ಲಿ ಬಿಡುಗಡೆಯಾಗುವ ಈ ಬೆಳಕಿನ ಮೂಲಕವೇ ತಮ್ಮ ಸಂಗಾತಿಯನ್ನು ಸೆಳೆಯುತ್ತವೆ. ತನ್ನ ವಾಸಸ್ಥಳಗಳನ್ನು ಗುರುತಿಸಲು ಹಾಗು ಬೇಟೆಯನ್ನು ಹಿಡಿಯಲು ಮಿಂಚುಹುಳಗಳು ತಮ್ಮಿಂದ ಹೊರಸೂಸುವ ಈ ಬೆಳಕನ್ನು ಬಳಸುತ್ತವೆ.
ಸೂರ್ಯಕಿರಣದ ಬೆಳಕು, ಉರಿಯುವ ಕಟ್ಟಿಗೆ ಅಥವಾ ಮಾನವಜಗತ್ತು ಆವಿಷ್ಕರಿಸಿದ ವಿಧ್ಯುತ್‍ಆಧಾರಿತ ಬೆಳಕು ಎಂದರೆ ನಮ್ಮ ಮನಸ್ಸಿಗೆ ಮೊದಲು ನೆನಪಾಗುವುದು ಶಾಖ.ಆದರೆ ವಿಚಿತ್ರಎಂದರೆ ಮಿಂಚು ಹುಳಗಳು ಮಾತ್ರತಮ್ಮ ಈ ಬೆಳಕಲ್ಲಿ ಶೂನ್ಯ ಶಾಖವನ್ನುಅಂದರೆ ಬಿಸಿಯಿಲ್ಲದ ಬೆಳಕನ್ನು ಹೊರಸೂಸುತ್ತವೆ. ಇದಕ್ಕೆತಣ್ಣನೆಯ ಬೆಳಕು ಎಂದುಕರೆಯುತ್ತಾರೆ.ಅಂದ ಹಾಗೆ ಮಿಂಚು ಹುಳಗಳು ತಮಗೆಅತೀ ಹೆಚ್ಚು ಆಹಾರ ಸಿಗುವಂತಹ ಗಿಡಮರಗಳಿಂದ ಕೂಡಿದತಂಪಾದ ವಾತಾವರಣದಲ್ಲಿಕಂಡುಬರುತ್ತವೆ.

ಜಗತ್ತಿನ ಯಾವುದೇ ಜೀವಿಯ ಜೀವನಕ್ರಮವನ್ನುಆಸಕ್ತಿಯಿಂದ ಗಮನಿಸಿದರೆ ಹಲವಾರು ಅಚ್ಚರಿಗಳು ಅದರಲ್ಲಿಅಡಗಿರುತ್ತವೆ. ಸಂಶೋಧಿಸಿದಷ್ಟೂ ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. ಮಾನವನೇ ಬುದ್ದಿವಂತಜೀವಿ ಎಂದು ಅಹಂನಿಂದ ಬದುಕದೇ ಮನಸ್ಸಿಗೆ ಮುದ ನೀಡುವ ಇಂತಹಜೀವ ಸಂಕುಲಗಳನ್ನೂ ಸ್ವಚ್ಛಂದವಾಗಿದೇವರ ಸೃಷ್ಟಿಯ ಈ ವಿಶ್ವದಲ್ಲಿ ಅವುಗಳಿಷ್ಟದಂತೆ ಬದುಕಲು ಅವಕಾಶ ಕೊಡುವುದುಎಲ್ಲಾಧೃಷ್ಟಿಕೋನದಿಂದಲೂ ಒಳ್ಳೆಯದು. ಏನಂತೀರಿ..?

# ವಂದನಾರವಿ ಕೆ.ವೈ. ವೇಣೂರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

22 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

22 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

22 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

23 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

2 days ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

2 days ago