ಪ್ರಥಮ ಬಹುಮಾನ
ಸುಳ್ಯ: ದೀಪಾವಳಿ ಹಬ್ಬದ ಪ್ರಯುಕ್ತ ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಏರ್ಪಡಿಸಲಾಯಿತು. ಮನೆಯ ಮುಂಭಾಗದಲ್ಲಿ ಬಲಿಯೇಂದ್ರ ಹಾಕಿ ಪೂಜೆ ನಡೆಸುವುದು ದೀಪಾವಳಿ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಮನೆಯ ಮುಂಭಾಗದಲ್ಲಿ ಹಾಕುವ ಬಲಿಯೇಂದ್ರವನ್ನು ಹೂವು, ಕಾಯಿ, ಬಳ್ಳಿ ಮತ್ತಿತರ ವಸ್ತುಗಳಿಂದ ಮನಮೋಹಕವಾಗಿ ಅಲಂಕರಿಸಲಾಗುತ್ತದೆ. ಅತ್ಯಂತ ಆಕರ್ಷಕವಾಗಿ ಅಲಂಕರಿಸಿದ ಬಲಿಯೇಂದ್ರಕ್ಕೆ ಬಹುಮಾನ ನೀಡಲಾಗುತ್ತದೆ.
ಮಿತ್ರ ಬಳಗದ ಸದಸ್ಯರು ಮನೆ ಮನೆ ತೆರಳಿ ಬಲಿಯೇಂದ್ರಕ್ಕೆ ಅಂಕ ನೀಡುತ್ತಾರೆ. ಅತೀ ಹೆಚ್ಚು ಅಂಕ ಗಳಿಸಿದ ಬಲಿಯೇಂದ್ರವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಆಕರ್ಷಕವಾಗಿ ಅಲಂಕರಿಸಿದ ಗೋವಿಂದ ನಾಯ್ಕ ದುಗಲಡ್ಕ ಇವರ ಮನೆಯ ಬಲಿಯೇಂದ್ರ ಪ್ರಥಮ ಬಹುಮಾನ ಪಡೆದುಕೊಂಡಿತು.
ಪುಷ್ಪಾವತಿ ಆಚಾರ್ಯ ಮತ್ತು ಮನೆಯವರ ಬಲಿಯೇಂದ್ರ ಎರಡನೇ ಬಹುಮಾನ ಮತ್ತು ಶಿವರಾಮ ನಾಯ್ಕ ನೆಲ್ಲಿಬಂಗಾರಡ್ಕ ಕೇರ್ಪಳ ಇವರ ಮನೆಯ ಬಲಿಯೇಂದ್ರ ತೃತೀಯ ಸ್ಥಾನ ಪಡೆದಿದೆ ಎಂದು ಮಿತ್ರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಿತ್ರ ಬಳಗದ ವತಿಯಿಂದ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ, ಗೂಡು ದೀಪ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…