Advertisement
ಧಾರ್ಮಿಕ

ಶ್ರೀಮಂಜುನಾಥೇಶ್ವರ ತಂಡದಿಂದ ಮಳೆಯ ಮಧ್ಯೆ ನೃತ್ಯ ಭಜನೆ: ವರುಣಾರ್ಭಟಕ್ಕೂ ಚಂಚಲವಾಗದ ಅಚಲ ಭಕ್ತಿಯ ಶಕ್ತಿ

Share

ಬೆಳ್ಳಾರೆ: ಸೋಮವಾರ ರಾತ್ರಿ ಅಕ್ಷರಷ ಭಕ್ತಿಯ ಶಕ್ತಿ ಭಜನಾ ತಂಡವೊಂದರಿಂದ ಸಾಬೀತುಗೊಂಡಿದೆ. ಲಕ್ಷ್ಮೀ ಪೂಜೆ ಹಾಗು ಅಂಗಡಿ ಪೂಜೆ ಪ್ರಯುಕ್ತ ಸ್ಥಳೀಯ ತಂಡವೊಂದರಿಂದ ನೃತ್ಯ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಜನೆ ನಡೆಯುತ್ತಿದ್ದ ಸಂದರ್ಭ ಗುಡುಗು ಮಿಂಚಿನೊಂದಿಗೆ ವರುಣನ ಅರ್ಭಟ ಜೋರಾಗಿ ಪ್ರಾರಂಭವಾದಾಗ ಎದೆಗುಂದದೆ ಈ ಭಜನಾ ತಂಡ ಭರ್ಜರಿ ಮಳೆಯ ನಡುವೆ ತಮ್ಮ ಅಚಲ ಭಕ್ತಿಯ ಶಕ್ತಿಯೇನೆಂಬುದನ್ನು ತೋರಿಸಿಕೊಟ್ಟರು.

Advertisement
Advertisement

ಕಳಂಜ ಗ್ರಾಮದ ಕೋಟೆಮುಂಡುಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೊಸೈಟಿಯಲ್ಲಿ ಅಂಗಡಿಪೂಜೆ ನಡೆಯುತ್ತಿದ್ದ ಸಂದರ್ಭ ಇದೇ ಊರಿನ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯಿಂದ ಸೊಸೈಟಿಯ ಹೊರಾವರಣದಲ್ಲಿ ನೃತ್ಯ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವೈದ್ಯ ಹಾಗು ಹವ್ಯಾಸಿ ಬರಹಗಾರ ಡಾ| ಶ್ರೀಕೃಷ್ಣ ಚೊಕ್ಕಾಡಿ ಭಜನಾ ಸರಣಿಯನ್ನು ಉದ್ಘಾಟಿಸಿ ಬಳಿಕ ನೃತ್ಯ ಭಜನೆಯನ್ನು ಪ್ರಾರಂಭಿಸಲಾಯಿತು. ಭಜನೆ ನಡೆಯುತ್ತಿದ್ದಂತೆ ಮಧ್ಯೆ ಗುಡುಗು ಸಿಡಿಲಿನೊಂದಿಗೆ ಹಠಾತ್ತನೆ ಮಳೆ ಪ್ರಾರಂಭವಾದರೂ ಚಂಚಲಗೊಳ್ಳದೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ ಸದಸ್ಯರು ವರುಣನಿಗೆ ಸವಾಲೆಸೆಯುವಂತೆ ನೃತ್ಯ ಭಜನೆಯನ್ನು ಮುಂದುವರಿಸಿದ್ದು, ನೆರೆದಿದ್ದವರಲ್ಲಿಯೂ ಪುಳಕಿತ ಉಂಟಾಗುವಂತೆ ಮಾಡಿದೆ. ಇದಕ್ಕೆ ಇನ್ನಷ್ಟು ಉತ್ತೇಜಿಸಿದ ಸಂಘದ ನಿರ್ದೇಶಕರು, ಊರವರು ತಾವು ದನಿಯಾಗಿ ಭಜನಾ ತಂಡಕ್ಕೆ ಇನ್ನಷ್ಟು ಹುರಿದುಂಬಿಸಿದರು.

Advertisement

ನೃತ್ಯ ಭಜನೆಗಾಗಿ ರೂಪುಗೊಂಡ ವಿಶೇಷ ತಂಡ: ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ತಂಡವು ನೃತ್ಯ ಭಜನೆಗೆಂದೇ ರೂಪುಗೊಂಡಿದೆ. ಊರು ಹಾಗು ಪರವೂರು ಸೇರಿದಂತೆ ಸ್ಥಳೀಯ ಗ್ರಾಮಗಳಲ್ಲಿ ವಿಶೇಷ ಉತ್ಸವಗಳಾದಾಗ, ನವರಾತ್ರಿ ಹಾಗು ಜಾತ್ರೆಗಳ ಸಂದರ್ಭ ಈ ತಂಡವು ಅಲ್ಲಿ ನೃತ್ಯ ಭಜನೆ ಸೇವೆಯನ್ನು ಸಲ್ಲಿಸುತ್ತಿರುತ್ತದೆ. ವಿಶೇಷವಾಗಿ ಗಣೇಶೋತ್ಸವ ಸಂದರ್ಭ ಈ ಭಜನಾ ತಂಡದಿಂದ ನಡೆಯುವ ಬೀದಿ ನೃತ್ಯ ಭಜನೆ ಸೇವೆ ಹೆಸರುವಾಸಿಯಾಗಿದೆ.

Advertisement

ಶ್ರೀ ಮಂಜುನಾಥೇಸ್ವರ ಭಜನಾ ಮಂಡಳಿ 2016ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ವರ್ಷ ಅತೀ ಹೆಚ್ಚು ಸಕ್ರೀಯವಾದ ಭಜನಾ ತಂಡವೆಂದು ಖ್ಯಾತಿ ಪಡೆದಿದೆ. ತಂಡದಲ್ಲಿ ಮಹಿಳೆಯರು, ಪುಟ್ಟ ಮಕ್ಕಳು, ಕಳಂಜ ಯುವಕ ಮಂಡಲದ ಸದಸ್ಯರು ಸೇರಿ ಒಟ್ಟು 30ಕ್ಕೂ ಅಧಿಕ ಸದಸ್ಯರು ಇದ್ದಾರೆ. ಪ್ರತೀ ವರ್ಷವೂ ವಿಶೇಷ ಉತ್ಸವ, ಕಾರ್ಯಕ್ರಮಗಳ ಸಂದರ್ಭ ತಂಡದ ಸದಸ್ಯರಿಗೆ ನೃತ್ಯ ಭಜನೆಗಾಗಿ ತರಬೇತಿಯನ್ನೂ ನೀಡಲಾಗುತ್ತಿದ್ದು, 15 ದಿನಗಳ ಮೊದಲೇ ತರಬೇತಿಯನ್ನು ಆರಂಭಿಸಲಾಗುತ್ತಿದೆ.

ತಂಡದಲ್ಲಿ ಹವ್ಯಾಸಿ ಹಾಡುಗಾರರು, ಕೃಷಿಕರು ಸೇರಿದಂತೆ ವಿವಿಧ ರಂಗದ ಉದ್ಯೋಗಿಗಳಿದ್ದಾರೆ. ಇತ್ತೀಚೆಗೆ ಬಾಳಿಲ ಗಣೇಶೋತ್ಸವ ಹಾಗು ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನವರಾತ್ರಿ ಉತ್ಸವ ಸಂದರ್ಭ ತಮ್ಮ ಪ್ರತಿಭೆಯಿಂದ ಸಾರ್ವಜನಿಕರ ಶ್ಲಾಘನೆಗೂ ಪಾತ್ರರಾಗಿದ್ದಾರೆ.

Advertisement

” ಭಜನೆ ಗ್ರಾಮೀಣ ಜನತೆಯ ಏಕಾಗ್ರತೆಗೆ ಹಿಡಿದ ಕೈಗನ್ನಡಿ. ಮಳೆಯ ಮಧ್ಯೆಯೂ ತಮ್ಮ ಭಕ್ತಿಯಲ್ಲಿ ಚಂಚಲತೆಯನ್ನು ಹತ್ತಿರಕ್ಕೂ ಸುಳಿಯದಂತೆ ತಮ್ಮ ಭಕ್ತಿಯಲ್ಲಿ ಭಜನಾ ತಂಡವೂ ತಲ್ಲೀನರಾಗಿದ್ದನ್ನು ಕಂಡು ಖುಷಿಯಾಯಿತು. ಭಜನೆಯಲ್ಲಿ ಗ್ರಾಮೀಣತೆಯ ಆಧಾರವಾದ ಜಾನಪದ ಶೈಲಿಯನ್ನು ಅಳವಡಿಸಲು ಪ್ರಯತ್ನಿಸಿದರೆ ಇನ್ನಷ್ಟು ಅಂದಗಾಣಬಹುದು.”
– ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷ- ದೆಹಲಿ ಕರ್ನಾಟಕ ಸಂಘ

” ಭಕ್ತಿಯಿಂದ ಮಾಡಿದ ಸೇವೆಗೆ ಭಗವಂತನು ಸುಪ್ರೀತನಾಗುವನೆಂಬ ನಂಬಿಕೆ ನಮ್ಮ ಭಜನಾ ತಂಡದ್ದಾಗಿದೆ. ಭಗವಂತನ ಆರಾಧನೆಗೆ ಭಜನೆಯೂ ಒಂದು ವಿಧಾನವಾಗಿದ್ದು, ಭಕ್ತಿಯ ಭಜನೆಯಲ್ಲಿ ನಾವೆಲ್ಲ ಸಂತೋಷ ನೆಮ್ಮದಿ ಕಾಣುತ್ತೇವೆ”
– ದಿನೇಶ ಪಾಂಡಿಪಾಲು, ಕಾರ್ಯದರ್ಶಿ ಶ್ರೀಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

18 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

2 days ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

2 days ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

3 days ago