ಸುಳ್ಯ: ದೀಪಾವಳಿ ಹಬ್ಬದ ಪ್ರಯುಕ್ತ ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಏರ್ಪಡಿಸಲಾಯಿತು. ಮನೆಯ ಮುಂಭಾಗದಲ್ಲಿ ಬಲಿಯೇಂದ್ರ ಹಾಕಿ ಪೂಜೆ ನಡೆಸುವುದು ದೀಪಾವಳಿ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಮನೆಯ ಮುಂಭಾಗದಲ್ಲಿ ಹಾಕುವ ಬಲಿಯೇಂದ್ರವನ್ನು ಹೂವು, ಕಾಯಿ, ಬಳ್ಳಿ ಮತ್ತಿತರ ವಸ್ತುಗಳಿಂದ ಮನಮೋಹಕವಾಗಿ ಅಲಂಕರಿಸಲಾಗುತ್ತದೆ. ಅತ್ಯಂತ ಆಕರ್ಷಕವಾಗಿ ಅಲಂಕರಿಸಿದ ಬಲಿಯೇಂದ್ರಕ್ಕೆ ಬಹುಮಾನ ನೀಡಲಾಗುತ್ತದೆ.
ಮಿತ್ರ ಬಳಗದ ಸದಸ್ಯರು ಮನೆ ಮನೆ ತೆರಳಿ ಬಲಿಯೇಂದ್ರಕ್ಕೆ ಅಂಕ ನೀಡುತ್ತಾರೆ. ಅತೀ ಹೆಚ್ಚು ಅಂಕ ಗಳಿಸಿದ ಬಲಿಯೇಂದ್ರವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಆಕರ್ಷಕವಾಗಿ ಅಲಂಕರಿಸಿದ ಗೋವಿಂದ ನಾಯ್ಕ ದುಗಲಡ್ಕ ಇವರ ಮನೆಯ ಬಲಿಯೇಂದ್ರ ಪ್ರಥಮ ಬಹುಮಾನ ಪಡೆದುಕೊಂಡಿತು.
ಪುಷ್ಪಾವತಿ ಆಚಾರ್ಯ ಮತ್ತು ಮನೆಯವರ ಬಲಿಯೇಂದ್ರ ಎರಡನೇ ಬಹುಮಾನ ಮತ್ತು ಶಿವರಾಮ ನಾಯ್ಕ ನೆಲ್ಲಿಬಂಗಾರಡ್ಕ ಕೇರ್ಪಳ ಇವರ ಮನೆಯ ಬಲಿಯೇಂದ್ರ ತೃತೀಯ ಸ್ಥಾನ ಪಡೆದಿದೆ ಎಂದು ಮಿತ್ರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಿತ್ರ ಬಳಗದ ವತಿಯಿಂದ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ, ಗೂಡು ದೀಪ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…
ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…
ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…
ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…
ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5…