ಸುಳ್ಯ: 2020ರಲ್ಲಿ ಕೊನೆಗೊಳ್ಳಬೇಕಾದ ದೇಶದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ಕ್ಯಾಬಿನೆಟ್ನಲ್ಲಿ ನಿರ್ಧರಿಸಿ 10 ವರ್ಷಗಳ ಕಾಲ ಅದೇ ರೀತಿಯಲ್ಲಿ ಮುಂದುವರಿಸುವ ನಿರ್ಧಾರ ಸರಿಯಲ್ಲ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ಮೀಸಲಾತಿ ಮುಕ್ತಿ ಸಮಿತಿಯ ಸಂಚಾಲಕ ಪ್ರದೀಪ್ಕುಮಾರ್ ಕೆ.ಎಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಮೀಸಲಾತಿ ನೀಡುವುದಕ್ಕೆ ನಾವು ವಿರೋಧವಿಲ್ಲ. ಅದರೆ ಮೀಸಲಾತಿ ಕಾಲ ಕಾಲಕ್ಕೆ ಬದಲಾವಣೆಯಾಗಬೇಕು, ಎಲ್ಲಾ ಕ್ಷೇತ್ರದ ಜನರಿಗೂ ಮೀಸಲಾತಿಯ ಅವಕಾಶ ದೊರೆಯುವಂತಾಗಬೇಕು. ಒಂದೊಂದೇ ಕ್ಷೇತ್ರದಲ್ಲಿ 60-70 ವರ್ಷಗಳ ಕಾಲ ಮೀಸಲಾತಿ ನೀಡಿದರೆ ಉಳಿದ ಕ್ಷೇತ್ರದ ಜನರು ಅವಕಾಶದಿಂದ ವಂಚಿತರಾಗುತ್ತಾರೆ ಮತ್ತು ಮೀಸಲಾತಿ ನೀಡುವ ಉದ್ದೆಶ ಈಡೇರುವುದಿಲ್ಲ. ಮೀಸಲಾತಿ ಬದಲಿಸಲು ಅಥವಾ ಮುಂದುವರಿಸಲು ಅದಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಿ ಅವರು ನೀಡಿದ ತೀರ್ಮಾನದ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಈ ಹಿಂದೆ ಮೂರು ಬಾರಿ ನಿಯೋಜಿತ ಸಮಿತಿಯ ವರದಿಯ ಆಧಾರದಲ್ಲಿಯೇ ದೇಶದಲ್ಲಿ ಶೇ.20ರಷ್ಟು ಬದಲಾವಣೆಯನ್ನು ಮಾಡುತ್ತಿದ್ದರು. ಆದರೆ ಚುನಾವಣಾ ಸಮಿತಿಯ ತೀರ್ಮಾನದಂತೆ 2020ರಲ್ಲಿ ಕೊನೆಗೊಳ್ಳಬೇಕಾದ 20 ವರ್ಷದ ಮೀಸಲಾತಿಯ ಅವಧಿಯನ್ನು 10 ವರ್ಷಗಳ ಕಾಲ ಅದೇ ರೀತಿ ವಿಸ್ತರಿಸುವುದು ಎಂಬ ನಿರ್ಧಾರ ಸರಿಯಲ್ಲ ಎಂದರು.
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಳ್ಯದಲ್ಲಿ ಮೀಸಲಾತಿ ಮುಕ್ತಿ ಅಭಿಯಾನವನ್ನು ಮಾಡಿ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮೀಸಲಾತಿ ಮುಕ್ತಿ ಸಮಿತಿಯ ವತಿಯಿಂದ ನಡೆಸಲಾಗಿತ್ತು. ಮೀಸಲಾತಿ ಮುಕ್ತಿಗಾಗಿ ಅಭಿಯಾನ ಮತ್ತು ಕಾನೂನು ರೀತಿಯ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಶೋಕ್ ಎಡಮಲೆ, ಪ್ರವೀಣ್ ಮುಂಡೋಡಿ, ಚೆನ್ನಕೇಶವ ನಾಯಕ್ ಉಪಸ್ಥಿತರಿದ್ದರು.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…