ಬೆಳ್ಳಾರೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಡಡ್ಕ- ಮುಕ್ಕೂರು ಇದರ 2019- 20 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ಕೂರಿನಲ್ಲಿ ನಡೆಯಿತು.ಸಮಿತಿ ಅಧ್ಯಕ್ಷರಾಗಿ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಕಾನಾವು, ಕೋಶಾಧಿಕಾರಿಯಾಗಿ ರವೀಂದ್ರ ಅನವುಗುಂಡಿ ಅವರು ಆಯ್ಕೆಯಾದರು.



ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಎನ್. ಕೆ ಹಾಗೂ ಸಮಿತಿ ಸ್ಥಾಪಕ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರ ಜಗನ್ನಾಥ ಪೂಜಾರಿ ಮುಕ್ಕೂರು ಅವರು ದಶಮಾನೋತ್ಸವ ಹತ್ತರ ಹುತ್ತರಿ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸಿ, ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ರಮೇಶ್ ಕಾನಾವು, ಕುಂಞಣ್ಣ ನಾಯ್ಕ ಅಡ್ಯತಕಂಡ, ವೆಂಕಟರಮಣ ಕುಂಡಡ್ಕ, ರವಿ ಕುಂಡಡ್ಕ, ಯಶವಂತ ಕಾನಾವು ಜಾಲು, ವಸಂತ ಕುಂಡಡ್ಕ, ಶೀನ ಅನವುಗುಂಡಿ, ಪ್ರವೀಣ್ ಬೋಳಕುಮೇರು, ಕಿರಣ್ ಪ್ರಸಾದ್ ಕೆ ಮೊದಲಾದವರಿದ್ದರು. ರಕ್ಷಿತ್ ಗೌಡ ಕಾನಾವು ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel