Advertisement
ಸುದ್ದಿಗಳು

ಮೂರೂರಿನಲ್ಲಿ ನೀರಿಲ್ಲದೆ ಸಾಯುತ್ತಿವೆ ಜಲಚರಗಳು

Share
ಜಾಲ್ಸೂರು: ಎಲ್ಲೆಲ್ಲೂ ನೀರಿಲ್ಲ. ಪಯಸ್ವಿನಿ ನದಿಯಲ್ಲಿ ಈಗ ಮೀನುಗಳು ಒದ್ದಾಡಿ ಸಾಯುತ್ತಿದೆ.
ಪಂಜಿಕಲ್ಲು ಸಮೀಪದ ಮೂರೂರಲ್ಲಿ ಪಯಸ್ವಿನಿ ನದಿ ನೀರಿಲ್ಲದೆ ಬರಡಾಗಿದ್ದು, ಮೀನುಗಳು ಜೀವ ಬಿಡುತ್ತಿವೆ. ಈ ಮೀನನ್ನು ಹಿಡಿಯಲು ಜನ ಬರುತ್ತಾರೆ. ಹೀಗಾಗಿ ಇದ್ದ ನೀರೂ ಈಗ ಕಲುಷಿತವಾಗುತ್ತಿದೆ.
ಬೇಸಗೆ ಕಾಲದಲ್ಲಿ ಪಯಸ್ವಿನಿ ನದಿಯಲ್ಲಿ ನೀರು ಕಡಿಮೆಯಾಗಿದ್ದರೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಜಲಚರಗಳು ನೀರಲ್ಲಿದ್ದಂತೆ, ತೋಟಗಳಿಗೂ ನೀರು ಹಾಕಲಾಗುತಿತ್ತು. ಮೊದಲ ಬಾರಿ ಈ ರೀತಿಯಾಗಿದೆ. ನದಿಯ ನೀರನ್ನೇ ದನ ಕರುಗಳಿಗೂ ಕೊಡುತ್ತಿದ್ದು, ಈ ವರ್ಷ ತೋಟಗಳಿಗೆ ನೀರು ಹಾಯಿಸುವುದು ಇರಲಿ, ದನ-ಕರುಗಳಿಗೆ ಕುಡಿಯಲೂ ಸಾಲುತ್ತೋ ಎನ್ನುವ ಅನುಮಾನ  ಇದೆ ಎನ್ನುತ್ತಾರೆ ಸ್ಥಳೀಯರು.
ಮೀನು ಹಿಡಿಯುತ್ತಾರೆ ನೋಡಿ:
ನೀರಿಲ್ಲದೆ ಪರದಾಡುವ ಸ್ಥಳೀಯ ನಿವಾಸಿಗಳನ್ನು ಲೆಕ್ಕಿಸದೆ, ಪಕ್ಕದ ಗ್ರಾಮಸ್ಥರು ಮೀನು ಹಿಡಿಯಲು ಗುಂಪುಗಳಾಗಿ ಬರುತ್ತಾರೆ. ಮೀನು ಹಿಡಿಯುವುದರೊಂದಿಗೆ, ನೀರನ್ನು ಕೊಳಕು ಮಾಡಿ ಹೋಗುತ್ತಾರೆ. ಬೆಳಗ್ಗಿನ ಹೊತ್ತು ಬಂದರೆ ಸ್ಥಳೀಯರು ಬಿಡುವುದಿಲ್ಲ ಎಂದು ಮಧ್ಯರಾತ್ರಿ ಕಳೆದ ಮೇಲೆ ಬರುತ್ತಾರೆ. ಮೀನು ಹಿಡಿಯಬೇಡಿ, ನೀರು ಕೊಳಕಾಗುತ್ತವೆ ಎಂದು ಹೇಳಿದರೂ ಕೇಳುವುದಿಲ್ಲ ಅನ್ನುತ್ತಾರೆ ಸ್ಥಳೀಯರು. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಗ್ರಾ.ಪಂ. ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ.
ಜಲಚರಗಳ ಸಂಕಟ, ನಮ್ಮ ನೋವು ಕೇಳುವವರಿಲ್ಲ ಎಂದು ಹತಾಶೆ ವ್ಯಕ್ತಡಿಸುತ್ತಾರೆ ಸ್ಥಳೀಯರು.
ಇಲ್ಲಿನ ಸಂಕಟದ ಬಗ್ಗೆ ಮಾತನಾಡಿದ ಮುರೂರಿನ ವಿಪಿನ್ ನಂಬಿಯಾರ್, “ಕಳೆದ 38 ವರ್ಷಗಳಲ್ಲಿ ಇಂತಹ ಬರಗಾಲವನ್ನು ನಾನು ಕಂಡಿಲ್ಲ. ಮೀನು ಹಿಡಿಯಲು ಬರುವವರು ನೀರನ್ನು ಕೊಳಚೆ ಮಾಡುತ್ತಾರೆ, ಜಲಚರಗಳಿಗೆ ಸಂಕಟ ಎದುರಾಗಿದೆ” ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡೆಕೋಲು ಪಿಡಿಒ ಜಯಪ್ರಕಾಶ್, “ ಪಯಸ್ವಿನಿ ನದಿಯ ಈ ಭಾಗದಲ್ಲಿ ಮೀನು ಹಿಡಿದು ನೀರು ಮಲಿನವಾಗುವುದರ ಬಗ್ಗೆ ಮಾಹಿತಿ ಇದೆ. ಎರಡು ತಿಂಗಳ ಹಿಂದೆ ಮೀನು ಹಿಡಿಯಲು ಬಂದವರಿಗೆ ನೋಟಿಸ್‌ ನೀಡಿ ಕಳುಹಿಸಲಾಗಿದೆ.  ನೀರು ಮಲಿನವಾಗದಂತೆ ಕ್ರಮ ಕೈಗೊಳ್ಳುತ್ತೇವೆ” ಎನ್ನುತ್ತಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

18 minutes ago

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

16 hours ago

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

1 day ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

1 day ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

2 days ago

ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ

ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…

2 days ago