ಸುಳ್ಯ:ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ 50 ಅಂಕ ಕಡಿಮೆಯಾಗಿತ್ತು. ಹಾಗಿದ್ದರೂ ಪೂರ್ತಿ ಅಂಕ ಸಿಗದೆ ವಿದ್ಯಾರ್ಥಿನಿ ಮತ್ತೆ ಸಂಕಷ್ಟ ಪಟ್ಟಿದ್ದಾಳೆ.
ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ ಕಡಿಮೆ ಅಂಕ ದೊರೆತಿದೆ. ಉತ್ತರ ಪತ್ರಿಕೆ ಪರಿಶೀಲಿಸಿದ ಸಂದರ್ಭ ಅಸಲಿ ಕಥೆ ಗೊತ್ತಾಗಿದೆ. ಕೇರ್ಪಳ ನಿವಾಸಿ ಸೋಮನಾಥ ಅವರ ಪುತ್ರಿ ಯುಕ್ತಾ ಕನ್ನಡ ಹೊರತುಪಡಿಸಿ ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರು. ಕನ್ನಡದಲ್ಲಿ ಹೆಚ್ಚು ಅಂಕ ಬರಬೇಕಿದ್ದ ಕಾರಣ ಹಣ ಪಾವತಿಸಿ ಉತ್ತರಪತ್ರಿಕೆಯ ಛಾಯಾಪ್ರತಿ ತರಿಸಲಾಯಿತು. ಈ ವೇಳೆ 90 ಅಂಕದಷ್ಟು ಈಕೆ ಸರಿ ಉತ್ತರ ಬರೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಈಕೆಗೆ 50 ಅಂಕ ನಷ್ಟವಾಗಿದೆ.
ಆದರೆ ಹೆಚ್ಚುವರಿ 50 ಅಂಕವನ್ನುಪೂರ್ತಿ ಸೇರಿಸಲು ಸಾಧ್ಯವಿಲ್ಲ. 6 ಅಂಕವಷ್ಟೇ ಸೇರಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ ಎಂದು ಆಕೆಯ ಪೋಷಕರು ದೂರಿದ್ದು, ಇದರಿಂದ ಶೇಕಡಾವಾರು ಅಂಕ ಕುಸಿತ ಕಂಡಿದೆ ಎಂದಿದ್ದಾರೆ. ವೈದ್ಯೆಯಾಗುವ ಕನಸು ಕಂಡಿರುವ ಈಕೆ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿದ್ದು, 44 ಅಂಕ ನೀಡದಿರುವ ಇಲಾಖೆ ಬಗ್ಗೆ ಅಚ್ಚರಿ ಮೂಡಿದೆ.
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…