ಸುಳ್ಯ:ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ 50 ಅಂಕ ಕಡಿಮೆಯಾಗಿತ್ತು. ಹಾಗಿದ್ದರೂ ಪೂರ್ತಿ ಅಂಕ ಸಿಗದೆ ವಿದ್ಯಾರ್ಥಿನಿ ಮತ್ತೆ ಸಂಕಷ್ಟ ಪಟ್ಟಿದ್ದಾಳೆ.
ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ ಕಡಿಮೆ ಅಂಕ ದೊರೆತಿದೆ. ಉತ್ತರ ಪತ್ರಿಕೆ ಪರಿಶೀಲಿಸಿದ ಸಂದರ್ಭ ಅಸಲಿ ಕಥೆ ಗೊತ್ತಾಗಿದೆ. ಕೇರ್ಪಳ ನಿವಾಸಿ ಸೋಮನಾಥ ಅವರ ಪುತ್ರಿ ಯುಕ್ತಾ ಕನ್ನಡ ಹೊರತುಪಡಿಸಿ ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರು. ಕನ್ನಡದಲ್ಲಿ ಹೆಚ್ಚು ಅಂಕ ಬರಬೇಕಿದ್ದ ಕಾರಣ ಹಣ ಪಾವತಿಸಿ ಉತ್ತರಪತ್ರಿಕೆಯ ಛಾಯಾಪ್ರತಿ ತರಿಸಲಾಯಿತು. ಈ ವೇಳೆ 90 ಅಂಕದಷ್ಟು ಈಕೆ ಸರಿ ಉತ್ತರ ಬರೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಈಕೆಗೆ 50 ಅಂಕ ನಷ್ಟವಾಗಿದೆ.
ಆದರೆ ಹೆಚ್ಚುವರಿ 50 ಅಂಕವನ್ನುಪೂರ್ತಿ ಸೇರಿಸಲು ಸಾಧ್ಯವಿಲ್ಲ. 6 ಅಂಕವಷ್ಟೇ ಸೇರಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ ಎಂದು ಆಕೆಯ ಪೋಷಕರು ದೂರಿದ್ದು, ಇದರಿಂದ ಶೇಕಡಾವಾರು ಅಂಕ ಕುಸಿತ ಕಂಡಿದೆ ಎಂದಿದ್ದಾರೆ. ವೈದ್ಯೆಯಾಗುವ ಕನಸು ಕಂಡಿರುವ ಈಕೆ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿದ್ದು, 44 ಅಂಕ ನೀಡದಿರುವ ಇಲಾಖೆ ಬಗ್ಗೆ ಅಚ್ಚರಿ ಮೂಡಿದೆ.
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…
ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…
ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…