ಸುಳ್ಯ: ಕಾರ್ಗಿಲ್ ವಿಜಯ ದಿವಸ್. ಈ ದಿನವನ್ನು ವಿವಿದೆಡೆ ವಿವಿಧ ಮಾದರಿಯಲ್ಲಿ ಆಚರಿಸಲಾಗುತ್ತದೆ. ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡದಿಂದ ಯೋಗಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಈ ದಿನವನ್ನು ಆಚರಿಸಲಾಯಿತು. ಈ ತಂಡದ ಮಕ್ಕಳು ಒಂದು ಆಸನವನ್ನು ಮಾಡುವ ಮೂಲಕ ಯೋಧರಿಗೆ ಸಮರ್ಪಿಸಿದರು. ಈ ಮೂಲಕ ಕಾರ್ಗಿಲ್ ದಿನವನ್ನು ಮಕ್ಕಳು ನೆನಪಿಸುವಂತೆ ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡ ಮಾಡಿತು.
ಸುಳ್ಯದ ಯೋಗಗುರು ಸಂತೋಷ್ ಮುಂಡಕಜೆ ಅವರು ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ತಂಡದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಸುಳ್ಯದಲ್ಲಿ ಯೋಗ ತರಬೇತಿ ನೀಡುತ್ತಿದ್ದರು. ಲಾಕ್ಡೌನ್ ಕಾರಣದಿಂದ ಸುಳ್ಯದಲ್ಲಿ ಯೋಗ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಆನ್ ಲೈನ್ ಮೂಲಕ ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದಾರೆ. ಸುಮಾರು 15 ರಿಂದ 20 ವಿದ್ಯಾರ್ಥಿಗಳು ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರತೀ ದಿನ ಕೂಡಾ ವಿನೂತನ ರೀತಿಯಲ್ಲಿ ಯೋಗದ ತರಬೇತಿ ನೀಡುವ ಸಂತೋಷ್ ಮುಂಡಕಜೆ ಅವರು ಕಾರ್ಗಿಲ್ ವಿಜಯ ದಿವಸದಂದು ಮಕ್ಕಳಿಗೆ ಕಾರ್ಗಿಲ್ ದಿನದ ಬಗ್ಗೆ ತಿಳಿಯುವ ಉದ್ದೇಶದಿಂದ ಕಾರ್ಗಿಲ್ ಯೋಧರಿಗಾಗಿ ಒಂದು ಆಸನವನ್ನು ಮಾಡಿ ವಿಡಿಯೋವನ್ನು ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ಪೇಸ್ ಬುಕ್ ಪೇಜ್ ಗೆ ಅಪ್ಲೋಡ್ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲೂ ಯೋಗದ ಜಾಗೃತಿ ಜೊತೆಗೆ ಕಾರ್ಗಿಲ್ ದಿನವನ್ನು ನೆನಪಿಸಿದ್ದಾರೆ. ಈ ಹಿಂದೆಯೂ ಯೋಗ ಹಾಗೂ ರಾಷ್ಟ್ರದ ಬಗ್ಗೆ ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ಜಾಗೃತಿ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಸಿದ್ದರು.
ಯೋಗಾ ಯೋಗಾ ಪೇಸ್ ಬುಕ್ ಪೇಜ್
ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.6…
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಹಲವು ಕಡೆ ಸಂಜೆ ಉತ್ತಮ ಮಳೆಯಾಗಿದೆ.…
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…
ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಗದಗ…
ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ-ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ-ಪಿಡಿಪಿ ಯೋಜನೆಯನ್ನು…
ಅನಧಿಕೃತ ಮರಳು ಸಾಗಾಟ ತಡೆಯಲು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆ ಮರಳು ಸಮಿತಿಗೆ…