Advertisement
ಸುದ್ದಿಗಳು

ಜು.30 ರಿಂದ ಆನ್‌ಲೈನ್ ಮೂಲಕ 9 ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

Share

ಇಂದು ಭಾರತ ಒಂದು ಸೂಕ್ಷ್ಮ ತಿರುವಿನಲ್ಲಿ ನಿಂತಿದೆ. ದೇಶದ ಮೇಲೆ ಅಂತರ-ಬಾಹ್ಯದಿಂದಲೂ ಸಂಕಟಗಳ ಮಾಲಿಕೆ ಪ್ರಾರಂಭವಾಗಿದೆ. ಇಂತಹ ಪರಿಸ್ಥಿತಿ ಸ್ವತಂತ್ರ ಭಾರತದಲ್ಲಿ ಎಂದಿಗೂ ಬಂದಿರಲಿಲ್ಲ.

ಒಂದೆಡೆ ದೇಶದಲ್ಲಿ ಕೊರೋನಾ ಪಿಡುಗು ತಾಂಡವವಾಡುತ್ತಿದೆ. ಈ ಪಿಡುಗನ್ನು ತಡೆಗಟ್ಟಲು ಭಾರತ ಸರಕಾರ ಇನ್ನಿಲ್ಲದ  ಪ್ರಯತ್ನ ಮಾಡುತ್ತಿದೆ. ಕಳೆದ 4 ತಿಂಗಳಿನಿಂದ ದೇಶದಲ್ಲಿ ಲಾಕ್‌ಡೌನ್ ಇದೆ.  ಎಲ್ಲ ವ್ಯವಸ್ಥೆಗಳು ಸಕ್ರಿಯವಿದ್ದರೂ ಅಪೇಕ್ಷಿತವಿರುವಂತೆ ಯಶಸ್ಸು ದೊರೆಯುತ್ತಿರುವಂತೆ ಕಾಣಿಸುತ್ತಿಲ್ಲ. ಈ ರೀತಿಯ ಆರೋಗ್ಯ ಸಮಸ್ಯೆಯು ದೇಶಾದ್ಯಂತ ಕೋಟ್ಯವಧಿ ಜನತೆಗೆ ಕೆಲಸವಿಲ್ಲದಂತೆ ಮಾಡಿರುವುದರಿಂದ  ಅರ್ಥವ್ಯವಸ್ಥೆ  ಹದಗೆಟ್ಟಿದೆ. ನಿರುದ್ಯೋಗ  ಸಮಸ್ಯೆ ಹೆಚ್ಚಳವಾಗಿದ್ದು,  ಅಭಿವೃದ್ಧಿಯ ವೇಗ ಸ್ಥಗಿತಗೊಂಡಿದೆ.  ಇಂತಹ ಪರಿಸ್ಥಿತಿಯಲ್ಲಿಯೇ ದೇಶದ ಮೇಲೆ ಬಾಹ್ಯ ಆಕ್ರಮಣಗಳು ಪ್ರಾರಂಭವಾಗಿವೆ. ಪಕ್ಕದ ರಾಷ್ಟ್ರ ಚೀನಾ ಭಾರತದ ವಿರುದ್ಧ  ಎದ್ದು ನಿಂತಿದೆ. ಗಲವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ನುಸುಳಿ, ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ  ಭಾರತದ 20 ಸೈನಿಕರು ಹುತಾತ್ಮರಾದರು; ಆದರೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಕೊಂದು, ಅವರಿಗೆ ತಕ್ಕ ಪಾಠ ಕಲಿಸಿದರು. ಇದರಿಂದ ಚೀನಾದ ಅಹಂಕಾರಕ್ಕೆ ಪೆಟ್ಟು ಬಿದ್ದಿತು.

 ಈಗ ಭಾರತಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಹಿಂದೂ ರಾಷ್ಟ್ರವೆಂದು  ಘೋಷಿಸದೇ ಪರ್ಯಾಯವಿಲ್ಲ. ಇದಕ್ಕಾಗಿ ಹಿಂದೂಗಳೇ ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮದ ಉತ್ಥಾನಕ್ಕಾಗಿ ಕಾರ್ಯನಿರತರಾಗಬೇಕಾಗಿದೆ. ಮುಖ್ಯವಾಗಿ ಇದೇ ಕಾರಣಕ್ಕಾಗಿಯೇ ಹಿಂದೂ ಜನಜಾಗೃತಿ ಸಮಿತಿಯು ಕಳೆದ 8 ವರ್ಷಗಳಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ.  ಈ ಬಾರಿ ಕೊರೊನಾ ಸೋಂಕು ಹರಡಿರುವುದರಿಂದ  ಜುಲೈ 30 ರಿಂದ ಪ್ರಾರಂಭವಾಗುವ ಈ ಅಧಿವೇಶನ ಆನ್‌ಲೈನ್ ಇರಲಿದೆ. ಈ ನಿಮಿತ್ತದಿಂದ ದೇಶ-ವಿದೇಶದ ಹಿಂದುತ್ವನಿಷ್ಠರು  ನಿವಾಸದಲ್ಲಿದ್ದುಕೊಂಡೇ ಈ ಅಧಿವೇಶನದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಲಿದ್ದಾರೆ. ಹಾಗೆಯೇ ಒಂದೇ ಸಮಯದಲ್ಲಿ ಸಾವಿರಾರು ಹಿಂದುತ್ವನಿಷ್ಠರು, ರಾಷ್ಟ್ರಾಭಿಮಾನಿಗಳು, ಧರ್ಮಾಭಿಮಾನಿಗಳು, ಜಿಜ್ಞಾಸುಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.  ಅಧಿವೇಶನವು  ಜುಲೈ 30 ರಿಂದ 2 ಆಗಸ್ಟ್ ಹಾಗೂ 6 ರಿಂದ 9 ಆಗಸ್ಟ್  ವರೆಗೆ ಜರುಗಲಿದೆ.

ಅಧಿವೇಶನವು ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಫೇಸಬುಕ್ ಪೇಜ್ ಮತ್ತು ‘ಯು-ಟ್ಯೂಬ್ ಚಾನಲ್ ಮೇಲೆ ನೋಡಬಹುದಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ  ರಮೇಶ ಶಿಂದೆ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…

24 hours ago

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

1 day ago

ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…

1 day ago

ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!

ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…

2 days ago

ಕೇಂದ್ರ ಸರ್ಕಾರದ ಸೌಲಭ್ಯಗಳಿಗೆ ‘ಕೇಂದ್ರ ರೈತ ಐಡಿ’ ಕಡ್ಡಾಯ – ಮಂಗಳೂರು ತಾಲೂಕಿನ 14,520 ರೈತರು ಇನ್ನೂ ನೋಂದಣಿ ಬಾಕಿ

ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…

2 days ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

2 days ago