Advertisement
ಸುದ್ದಿಗಳು

ಯೋಗದ ಮೂಲಕ ಕಾರ್ಗಿಲ್ ವಿಜಯ್‌ ದಿವಸ್‌ | ಸುಳ್ಯದ ಯೋಗೇನ ಚಿತ್ತಸ್ಯ ತಂಡದಿಂದ ವಿಶೇಷ ರೀತಿಯಲ್ಲಿ ಯೋಧರಿಗೆ ನಮನ |

Share

ಸುಳ್ಯ: ಕಾರ್ಗಿಲ್‌ ವಿಜಯ ದಿವಸ್.‌ ಈ ದಿನವನ್ನು ವಿವಿದೆಡೆ ವಿವಿಧ ಮಾದರಿಯಲ್ಲಿ  ಆಚರಿಸಲಾಗುತ್ತದೆ. ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡದಿಂದ ಯೋಗಗುರು ಸಂತೋಷ್‌ ಮುಂಡಕಜೆ ನೇತೃತ್ವದಲ್ಲಿ  ವಿಶೇಷ ರೀತಿಯಲ್ಲಿ ಈ ದಿನವನ್ನು  ಆಚರಿಸಲಾಯಿತು. ಈ ತಂಡದ ಮಕ್ಕಳು ಒಂದು ಆಸನವನ್ನು  ಮಾಡುವ ಮೂಲಕ ಯೋಧರಿಗೆ ಸಮರ್ಪಿಸಿದರು. ಈ ಮೂಲಕ ಕಾರ್ಗಿಲ್‌ ದಿನವನ್ನು ಮಕ್ಕಳು ನೆನಪಿಸುವಂತೆ ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡ ಮಾಡಿತು.

 

ಸುಳ್ಯದ ಯೋಗಗುರು ಸಂತೋಷ್‌ ಮುಂಡಕಜೆ ಅವರು ಯೋಗೇನ ಚಿತ್ತಸ್ಯ ಯೋಗಾ ಯೋಗಾ  ಎಂಬ ತಂಡದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಸುಳ್ಯದಲ್ಲಿ  ಯೋಗ ತರಬೇತಿ ನೀಡುತ್ತಿದ್ದರು. ಲಾಕ್ಡೌನ್‌ ಕಾರಣದಿಂದ ಸುಳ್ಯದಲ್ಲಿ  ಯೋಗ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಆನ್‌ ಲೈನ್‌ ಮೂಲಕ ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದಾರೆ. ಸುಮಾರು 15 ರಿಂದ 20 ವಿದ್ಯಾರ್ಥಿಗಳು ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರತೀ ದಿನ ಕೂಡಾ ವಿನೂತನ ರೀತಿಯಲ್ಲಿ  ಯೋಗದ ತರಬೇತಿ ನೀಡುವ ಸಂತೋಷ್‌ ಮುಂಡಕಜೆ ಅವರು ಕಾರ್ಗಿಲ್‌ ವಿಜಯ ದಿವಸದಂದು ಮಕ್ಕಳಿಗೆ ಕಾರ್ಗಿಲ್‌ ದಿನದ ಬಗ್ಗೆ ತಿಳಿಯುವ ಉದ್ದೇಶದಿಂದ ಕಾರ್ಗಿಲ್‌ ಯೋಧರಿಗಾಗಿ ಒಂದು ಆಸನವನ್ನು  ಮಾಡಿ ವಿಡಿಯೋವನ್ನು  ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ಪೇಸ್‌ ಬುಕ್‌ ಪೇಜ್‌ ಗೆ ಅಪ್ಲೋಡ್‌ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲೂ ಯೋಗದ ಜಾಗೃತಿ ಜೊತೆಗೆ ಕಾರ್ಗಿಲ್‌ ದಿನವನ್ನು  ನೆನಪಿಸಿದ್ದಾರೆ. ಈ ಹಿಂದೆಯೂ ಯೋಗ ಹಾಗೂ ರಾಷ್ಟ್ರದ ಬಗ್ಗೆ ಸಂತೋಷ್‌ ಮುಂಡಕಜೆ ನೇತೃತ್ವದಲ್ಲಿ ಜಾಗೃತಿ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಸಿದ್ದರು.

ಯೋಗಾ ಯೋಗಾ ಪೇಸ್‌ ಬುಕ್‌ ಪೇಜ್‌

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

8 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

14 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

22 hours ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

1 day ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

1 day ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

2 days ago