ಸುಳ್ಯ: ಕಾರ್ಗಿಲ್ ವಿಜಯ ದಿವಸ್. ಈ ದಿನವನ್ನು ವಿವಿದೆಡೆ ವಿವಿಧ ಮಾದರಿಯಲ್ಲಿ ಆಚರಿಸಲಾಗುತ್ತದೆ. ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡದಿಂದ ಯೋಗಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಈ ದಿನವನ್ನು ಆಚರಿಸಲಾಯಿತು. ಈ ತಂಡದ ಮಕ್ಕಳು ಒಂದು ಆಸನವನ್ನು ಮಾಡುವ ಮೂಲಕ ಯೋಧರಿಗೆ ಸಮರ್ಪಿಸಿದರು. ಈ ಮೂಲಕ ಕಾರ್ಗಿಲ್ ದಿನವನ್ನು ಮಕ್ಕಳು ನೆನಪಿಸುವಂತೆ ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡ ಮಾಡಿತು.
ಸುಳ್ಯದ ಯೋಗಗುರು ಸಂತೋಷ್ ಮುಂಡಕಜೆ ಅವರು ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ತಂಡದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಸುಳ್ಯದಲ್ಲಿ ಯೋಗ ತರಬೇತಿ ನೀಡುತ್ತಿದ್ದರು. ಲಾಕ್ಡೌನ್ ಕಾರಣದಿಂದ ಸುಳ್ಯದಲ್ಲಿ ಯೋಗ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಆನ್ ಲೈನ್ ಮೂಲಕ ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದಾರೆ. ಸುಮಾರು 15 ರಿಂದ 20 ವಿದ್ಯಾರ್ಥಿಗಳು ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರತೀ ದಿನ ಕೂಡಾ ವಿನೂತನ ರೀತಿಯಲ್ಲಿ ಯೋಗದ ತರಬೇತಿ ನೀಡುವ ಸಂತೋಷ್ ಮುಂಡಕಜೆ ಅವರು ಕಾರ್ಗಿಲ್ ವಿಜಯ ದಿವಸದಂದು ಮಕ್ಕಳಿಗೆ ಕಾರ್ಗಿಲ್ ದಿನದ ಬಗ್ಗೆ ತಿಳಿಯುವ ಉದ್ದೇಶದಿಂದ ಕಾರ್ಗಿಲ್ ಯೋಧರಿಗಾಗಿ ಒಂದು ಆಸನವನ್ನು ಮಾಡಿ ವಿಡಿಯೋವನ್ನು ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ಪೇಸ್ ಬುಕ್ ಪೇಜ್ ಗೆ ಅಪ್ಲೋಡ್ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲೂ ಯೋಗದ ಜಾಗೃತಿ ಜೊತೆಗೆ ಕಾರ್ಗಿಲ್ ದಿನವನ್ನು ನೆನಪಿಸಿದ್ದಾರೆ. ಈ ಹಿಂದೆಯೂ ಯೋಗ ಹಾಗೂ ರಾಷ್ಟ್ರದ ಬಗ್ಗೆ ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ಜಾಗೃತಿ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಸಿದ್ದರು.
ಯೋಗಾ ಯೋಗಾ ಪೇಸ್ ಬುಕ್ ಪೇಜ್
ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…
ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…
ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…
ಕರ್ನಾಟಕದಲ್ಲಿ 69.60 ಲಕ್ಷ ಹೆಕ್ಟೇರ್ ಭೂಮಿ ಭೂಸವಕಳಿ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ…
ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್ಶಿಪ್–2026ಕ್ಕೆ…
ಮ್ಯಾನ್ಮಾರ್ನಿಂದ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 10 ಟನ್ ವಿದೇಶಿ ಅಡಿಕೆಯನ್ನು ಅಸ್ಸಾಂನ ರಂಗಿಯಾ…