Advertisement
MIRROR FOCUS

#ರಕ್ಷಾಬಂಧನ ಶುಭಾಶಯ | ಜವಾಬ್ದಾರಿಯನ್ನು ‌‌‌‌‌ ನೆನಪಿಸುವ ರಕ್ಷಾಬಂಧನ

Share
ಅಂದು ಮಗ ಅಪ್ಪನೊಂದಿಗೆ ಶಾಲೆಯಿಂದ ಮನೆಗೆ ಬರುವಾಗಲೇ ಗಡಿಗೆ ಗಾತ್ರದ ಮುಖ ಮಾಡಿಕೊಂಡು ಬಂದಿದ್ದ. ಶಾಲೆಯ ಗೇಟ್ ನಿಂದ ಮನೆಯವರೆಗೂ ಅಪ್ಪನ ಯಾವ ಪ್ರಶ್ನೆಗೂ ಉತ್ತರಿಸದೇ ಕೋಪದಲ್ಲೇ ಇದ್ದ.  ಮನೆಗೆ ನನ್ನ ತಮ್ಮನೂ ಬಂದಿದ್ದ. ಕೋಪದಲ್ಲಿ ಇರುವ ಅಳಿಯನಿಗೆ ಮಾವನನ್ನು ನೋಡಿ ಚೂರು ನಗು ಬಂತು.  ಎಂತಾಯ್ತು ನಿನಗೆ ಎಂದು ಕೇಳಿದಾಗ ಎಲ್ಲರ ಕೈಯಲ್ಲಿಯೂ ತರತರದ ಬಳ್ಳಿ ಇತ್ತು ನಾನು ಮಾತ್ರ ಏನು ಕಟ್ಟಿಕೊಂಡು ಶಾಲೆಗೆ ಹೋಗಲಿಲ್ಲ. ನೋಡು ಮಾವನ ಕೈಯಲ್ಲಿಯೂ ಉಂಟು , ನನ್ನಕೈ ನೋಡು ಖಾಲಿ . ಅಷ್ಟರಲ್ಲಿ ನನ್ನ ತಮ್ಮ ಜೇಬಿನಿಂದ ಒಂದು ರಕ್ಷೆ ತೆಗೆದ, ಇದುವಾ ನೋಡು? ಹ ಹ ಅದುವೇ ಮಾವ ಎಂದು ಖುಷಿಯಿಂದ ಹಾರಿದ. ಬಾ ನಾನೇ ಕಟ್ಟುತ್ತೇನೆ ನಿನಗೆ ಎಂದಾಗ ಕೈ ಒಡ್ಡಿ ನಿತ್ತ. ಇನ್ನೊಂದು ರಾಖಿ ಮಾವನ ಕೈ ಗೆ ಅಳಿಯನೇ ಕಟ್ಟಿದ . ಅಲ್ಲಿಗೆ ಇಬ್ಬರಿಗೂ ಸಮಾಧಾನ. ಹತ್ತಿರ ಊರಲ್ಲಿದ್ದರೂ ಅಕ್ಕ ರಾಖಿ ಕಟ್ಟುವುದಿಲ್ಲವೆಂದು ತಮ್ಮನಿಗಿದ್ದ ಕೋಪವನ್ನು ಅಳಿಯ ನಿವಾರಿಸಿದ.
ಇದು ಎಲ್ಲಾ ಹಬ್ಬಗಳಂತಲ್ಲ. ತುಂಬಾ ವಿಶೇಷವಾದ ಹಬ್ಬ.  ಸಹೋದರ , ಸಹೋದರಿಯರ ಹಬ್ಬ.  ಆ ದಿನ  ಶ್ರೀ ರಕ್ಷೆಯನ್ನು ನೆನಪಿಸುವ ಹಬ್ಬ.  ಸೂಚ್ಯವಾಗಿ  ಸಹೋದರ ಕೈಗೆ ದಾರವನ್ನು ಕಟ್ಟುವ ಮೂಲಕ ಭ್ರಾತೃತ್ವದ    ಜವಾಬ್ದಾರಿ ಯನ್ನು ನೆನಪಿಸುವ ಹಬ್ಬ.    ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ರಕ್ಷಾಬಂಧನ ಹಬ್ಬ ದಕ್ಷಿಣಕ್ಕೂ ಕಾಲಿಟ್ಟು  ಬಹಳ ಸಮಯವಾಯಿತು. ಎಲ್ಲಾ ಹಬ್ಬಗಳೂ ಇಂದು   ಜನರಿಗೆ ಹತ್ತಿರವಾಗಿವೆ!.
ಅಂದು  ದ್ರೌಪದಿ ಕೃಷ್ಣ ನ ಕೈ ಗೆ ಗಾಯವಾದಾಗ  ಹಿಂದು ಮುಂದೆ ನೋಡದೆ ತನ್ನ ವಸ್ತ್ರವನ್ನೇ ಹರಿದು  ಕೈಗೆ ಕಟ್ಟುತ್ತಾಳೆ.   ಪಆಕೆಯ  ಈ ಕಾಳಜಿಯೇ ಮುಂದೆ ಕಾಯುತ್ತದೆ. ತನ್ನ ವಸ್ತ್ರದ  ಮೇಲೆ ದುಶ್ಯಾಸನ ಕೈ ಹಾಕಿ ಸೆಳೆಯುತ್ತಿದ್ದಾಗ ಮಾನ ಕ್ಷಣೆಗಾಗಿ ಕೃಷ್ಣ ನತ್ತ  ಮುಖ ಮಾಡುತ್ತಾಳೆ . ಆ ಕ್ಷಣಕ್ಕೆ ಯುದ್ದಾಂಗಣದಲ್ಲಿದ್ದ ಕೃಷ್ಣ.   ದ್ಯೂತ ಸಭೆಯಲ್ಲಿ ಅವಮಾನದಿಂದ  ದ್ರೌಪದಿಯನ್ನು ಕಾಪಾಡುತ್ತಾನೆ.  ರಕ್ಷೆಯ ರಕ್ಷಣೆಯಲ್ಲವೇ ಇದು.
ಅಪಾಯಗಳು, ಕಷ್ಟಗಳು ಎದುರಾದಾಗ  ಅವುಗಳನ್ನು ಎದುರಿಸಲು ಸಹೋದರರಿದ್ದಾರೆ ಎಂಬುದು ಮನಸಿಗೆ ಧೈರ್ಯ ಕೊಡುತ್ತದೆ. ಕೆಲವೊಮ್ಮೆ ಸ್ವಂತ ಅಣ್ಣತಮ್ಮಂದಿರು ಇರುವುದಿಲ್ಲ. ಹಾಗಿದ್ದೂ ಸಹಾಯಕ್ಕೆ ದೇವರು ಅಣ್ಣ ತಮ್ಮಂದಿರ  ರೂಪದಲ್ಲಿ ‌ಬರುತ್ತಾನೆ.  ಊರವರಿರಬಹುದು, ಹತ್ತಿರದ ಬಂಧುಗಳಿರಬಹುದು, ಕ್ಲಾಸ್ ಮೇಟ್ ಗಳಿಸಬಹುದು,  ಜೊತೆ ಪ್ರಯಾಣಿಕರಿರಬಹುದು, ಸಹವರ್ತಿ ಕೆಲಸಗಾರರಿರಬಹುದು. ಕಷ್ಟಗಳು ಬಂದಾಗ ಯಾವುದಾದರೊಂದು ರೂಪದಲ್ಲಿ  ಸಹೋದರರ ಸ್ಥಾನವನ್ನು ತುಂಬಿ ಬಿಡುತ್ತಾರೆ. ಯಾರು ನಮ್ಮ ಅಗತ್ಯಕ್ಕೆ , ಅನಿವಾರ್ಯತೆಗೆ  ಸ್ಪಂದಿಸುತ್ತಾರೋ ಅವರೇ ಸಹೋದರ ಸಹೋದರಿಯರು.
ರಕ್ಷಾಬಂಧನ  ಹಬ್ಬ  ಸಹೋದರತೆಯ ಬಾಂಧವ್ಯವನ್ನು   ಮತ್ತೆ ಮತ್ತೆ ನವೀಕರಿಸುತ್ತದೆ. ಈ ಬಾರಿ  ಎಲ್ಲಾ ಹಬ್ಬಗಳಂತೆ ರಕ್ಷಾ ಬಂಧನ ಹಬ್ಬಕ್ಕೂ ಕೊರೊನಾ ಬಿಸಿ ತಟ್ಟಿದೆ. ಪ್ರತಿ ಬಾರಿ ಈ ಹಬ್ಬಕ್ಕೆ ಅಕ್ಕನ ಮನೆಗೆ  ಬರುತ್ತಿದ್ದ ತಮ್ಮ  ಈ ಬಾರಿ ಕೊರಿಯರ್ ಕಳುಹಿಸಿದ್ದಾನೆ. ಅಕ್ಕ, ತಂಗಿಯರೂ ರಾಖಿಯನ್ನು ಪೋಸ್ಟ್ ಮಾಡಿದ್ದಾರೆ.   ಅಲ್ಲಿಂದಲೇ ಆಶೀರ್ವಾದ ‌ಬೇಡಿದ್ದಾರೆ. ಚೈನಾ ರಾಖಿ ಗೆ ಗೇಟ್ ಪಾಸ್ ದೊರೆತಿದೆ. ಮನೆಯಲ್ಲೇ   ಕೈಯಾರೆ ಮಾಡಿದ ರಾಖಿಯೇ   ಚೆಂದವೆನಿಸಿದೆ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

7 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

1 day ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

1 day ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

1 day ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

1 day ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

1 day ago