ಬೆಳ್ಳಾರೆ : ದಕ್ಷಿಣ ಭಾರತದ ಪ್ರಸಿದ್ಧ ಸಮನ್ವಯ ವಿದ್ಯಾಕೇಂದ್ರವಾದ ರಹ್ಮಾನಿಯಾ ಅರೇಬಿಕ್ ಕಾಲೇಜು ಕಡಮೇರಿ ಇದರ ಹೊಸ ಅಧ್ಯಯನ ವರ್ಷ ದ ಪ್ರವೇಶಾತಿ ಪರೀಕ್ಷೆ ಯು ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು .
ಎಸ್ ಎಸ್ ಎಲ್ ಸಿ ನಂತರ ಎಂಟು ವರ್ಷದ ಕೋರ್ಸ್ ಆಗಿರುವ, ಲೌಕಿಕ ಮತ್ತು ಧಾರ್ಮಿಕ ವಿದ್ಯೆಗಳನ್ನು ಒಳಗೊಂಡ ಸಮನ್ವಯ ವಿದ್ಯಾಭ್ಯಾಸ ವನ್ನು ನೀಡುತ್ತಿದ್ದು , 8 ವರ್ಷಗಳ ಬಳಿಕ ಎಂ ಎ ಬಿರುದಿನೊಂದಿಗೆ ರಹ್ಮಾನಿಯಾ ಬಿರುದನ್ನು ನೀಡಲಾಗುತ್ತಿದೆ .
ಇದರ ಪ್ರವೇಶಾತಿ ಪರೀಕ್ಷೆಯು ಈ ವರ್ಷ ಕರ್ನಾಟಕ ವಿದ್ಯಾರ್ಥಿ ಗಳಿಗೆ ದ ಕ ಜಿಲ್ಲೆ ಯಲ್ಲೂ ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡಲಾಗಿದೆ. ಪರೀಕ್ಷಾ ಸೂಪರ್ ವೈಸರ್ ಗಳಾಗಿ ಹಾಶಿಂ ರಹ್ಮಾನಿ ಸಾಲ್ಮರ ಮತ್ತು ಅಬ್ದುಲ್ ರಶೀದ್ ಮೌಲವಿ ಅಮ್ಚಿನಡ್ಕ ಅವರು ನೇತೃತ್ವ ವಹಿಸಿದ್ದರು .
ಈ ಸಂದರ್ಭದಲ್ಲಿ ಬೆಳ್ಳಾರೆ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ,ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ , ಅಮ್ಚಿನಡ್ಕ ಮುದರ್ರಿಸ್ ಅಶ್ರಫ್ ರಹ್ಮಾನಿ ,ಪರ್ಪುಂಜ ಮುದರ್ರಿಸ್ ಬದ್ರುದ್ದೀನ್ ರಹ್ಮಾನಿ ಉಪಸ್ಥಿತರಿದ್ದರು.
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…